ನಮ್ಮ ಹಿರಿಯರ ಅನುಭವದ ಅಧಾರದ ಮೇಲೆ ಈ ಲೇಖನವನ್ನು ಬರೆಯಲಾಗಿದೆ. ಗ್ರಾಮದ ದೇವಸ್ಥಾನ, ದ್ಯೆವಸ್ಥಾನದ ಬಗ್ಗೆ ವರ್ಣಿಸಲಾಗಿದೆ. ಗುತ್ತಿನ ಮನೆಗಳಲ್ಲೊಂದಾದ ಬೊಳ್ಳೊಳ್ಳಿಮಾರು ಗುತ್ತಿನಲ್ಲಿ ಹಿಂದಿನ ಕಾಲದಿಂದಲು ನಡೆದು ಬಂದ ಆಚಾರ, ವಿಚಾರ, ಮನೆಯಲ್ಲಿ ನಡೆದು ಬರುತ್ತಿರುವ ಧಾರ್ಮಿಕ ವಿಧಿ ವಿಧಾನಗಳ ಬಗ್ಗೆ ಹಾಗೂ ಬೊಳ್ಳೊಳ್ಳಿಮಾರು ಗುತ್ತು ಮತ್ತು ಗ್ರಾಮದ ದೇವಸ್ಥಾನ, ದ್ಯೆವಸ್ಥಾನಗಳ ನಡುವಿನ ಸಂಬಂಧವನ್ನು ವಿವರಿಸಲಾಗಿದೆ.
ಅನಾದಿ ಕಾಲದಿಂಲೂ ನಡೆದು ಬಂದ ಗುತ್ತಿನ ಸಂಸ್ಕ್ರತಿ, ಧಾರ್ಮಿಕ ಕಟ್ಟುಪಾಡುಗಳು ಉಳಿಯಲಿ, ಮುಂದಿನ ತಲೆಮಾರಿಗೂ ತಿಳಿಯಲೆಂದು ಹಾಗೂ ಈ ಶತಮಾನದ ಜನರಲ್ಲಿ ಶ್ರದ್ಧೆ-ಭಕ್ತಿ ಗೌರವಗಳನ್ನು ಮೂಡಿಸಿ, ಪರಂಪರೆಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಈ ಲೇಖನವನ್ನು ಬರೆಯಲಾಗಿದೆ. ಇದಕ್ಕೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲಾ ಬಂಧುಗಳಿಗೂ ಹೃತ್ಪೂರ್ವಕ ಕೃತಙ್ಞತೆಗಳು.
(ಹಿರಿಯರು ಹೇಳಿದ್ದು ಹಾಗೂ ಹಿರಿಯರಿಂದ ಕೇಳಿ ಸಂಗ್ರಹಿಸಿದ ಭಾಗವೇ ಈ ಲೇಖನದ ಮೂಲದ್ರವ್ಯವಾಗಿದೆ. ಕೆಲವು ಬಿಟ್ಟಿರಲೂಬಹುದು, ಕೆಲವು ತಪ್ಪಾಗಿ ಉಲ್ಲಿಖಿತವಾಗಿರಲೂ ಸಾಕು. ಈ ಬಗ್ಗೆ ಕ್ಷಮೆ ಇರಲಿ.)
ಬೊಳ್ಳೊಳ್ಳಿಮಾರು ಗುತ್ತು,
ಕುಟುಂಬಸ್ಥರು.
Saturday, February 27, 2010
ಊರಿನ ದೇವಸ್ಥಾನ
ಮಂಗಳೂರು ತಾಲೂಕು ಬಜಪೆಯಿಂದ ಕಟೀಲು ಕಡೆಗೆ ಹೋಗುವಾಗ ೩ ಕಿ.ಮೀ ದೂರದಲ್ಲಿರುವ ಪುಟ್ಟ ಊರು ಪೆರ್ಮುದೆ. ದಟ್ಟವಾದ ಕಾಡನ್ನು ಹಾಗೂ ಫಲವತ್ತಾದ ಬೈಲುಗದ್ದೆಗಳನ್ನು ಹೊಂದಿ ತೆಂಗು ಕಂಗು ಬಾಳೆ ತೋಟವನ್ನು ಹೊಂದಿ ಯಾವಾಗಲೂ ಹಚ್ಚಹಸುರಾಗಿರುವ ತಂಪು ಪ್ರದೇಶ. ತುಳುವಿನಲ್ಲಿ "ಪೇರ್ಗ್ ಪೆರ್ಪುಲ್ಲ ಸ್ಥಳ - ನೀರ್ಗ್ ನಿರ್ಪುಲ್ಲ ಸ್ಥಳ" ಅಂದರೆ ಹಾಲು ಕೇಳಿದರೆ ಹಾಲು ಕೊಡುವ ನೀರು ಕೇಳಿದರೆ ನೀರು ಕೊಡುವ ಸ್ಥಳ ಅರ್ಥಾತ್ ಸತ್ಯ, ಧರ್ಮ, ನ್ಯಾಯ, ನಿಷ್ಠೆ, ದೈವಭಕ್ತಿ, ದಾ, ಧರ್ಮ ಗುಣವನ್ನು ಹೊಂದಿರುವ ಜನರಿರುವ ಸ್ಥಳವೆಂದು ಗುರುತಿಸಲ್ಪಟ್ಟಿದೆ.
ಈ ಗ್ರಾಮಕ್ಕೆ ಗ್ರಾಮ ದೇವರು ಶ್ರೀ ಸೋಮನಾಥೇಶ್ವರ. ಈ ದೇವಸ್ಥಾನವನ್ನು ೧೩ನೇ ಶತಮಾನದಲ್ಲಿ ಭೃಗು ಮಹರ್ಷಿಯಿಂದ ಪ್ರತಿಷ್ಟಾಪಿಸಲ್ಪಟ್ಟಿತು. ಇಕ್ಕೇರಿ ಅರಸರ ಕಾಲದಲ್ಲಿ ಮಹಾದೇವ ದೇವಸ್ಥಾನ ಎಂದು ಕರೆಯಲ್ಪಡುತ್ತಿದ್ದ ಈ ದೇವಸ್ಥಾನವನ್ನು ಪುತ್ತಿಗೆ ಚೌಟರಸರ ಕಾಲದಲ್ಲಿ ಸೋಮನಾಥ ದೇವಸ್ಥಾನ ಎಂದು ಮರುನಾಮಕರಣ ಮಾಡಲಾಯಿತು.
ಶ್ರೀ ಸೋಮನಾಥೇಶ್ವರ ದೇವಸ್ಥಾನ
ಸೋಮನಾಥ ತನ್ನ ಹಿಂಭಾಗದಲ್ಲಿ ಎತ್ತರವಾದ ಗಿರಿ ಪ್ರದೇಶವನ್ನು ಹಾಗೂ ಮುಂಭಾಗದಲ್ಲಿ ತಂಪಾದ ನೀರು ಹಾಗೂ ಗದ್ದೆಯನ್ನು ಹೊಂದಿ ನಿತ್ಯ ಹರಿದ್ವರ್ಣವನ್ನು ಹೊಂದಿರುವ ಪ್ರದೇಶದಲ್ಲಿ ನೆಲೆಯಾಗಿದ್ದಾನೆ. ತುಳುವಿನ ಪುಯಿಂತೆಲ್ ತಿಂಗಳ ಹುಣ್ಣಿಮೆಯಂದು ಧ್ವಜಾರೋಹಣವಾಗಿ ೪ ದಿನಗಳ ಉತ್ಸವವನ್ನು ಶ್ರೀ ಸೋಮನಾಥ ಸ್ವೀಕರಿಸುತ್ತಾನೆ. ಉತ್ಸವದ ೪ನೇ ದಿನದಂದು ರಾತ್ರಿ ದೈವಗಳಿಗೆ ನೇಮೋತ್ಸವವು ನಡೆಯುತ್ತದೆ. ಜಾತ್ರಾ ಸಂದರ್ಭದಲ್ಲಿ ದೇವಳದ ಮುಂಭಾಗದ ಜಳಕದ ಕೆರೆಯಲ್ಲಿ ಜಳಕಗೈದು ದೇವಳದ ಅಂಗಳಕ್ಕೆ ಬಂದು ದೈವಗಳು ಭೇಟಿ ನೀಡುವ ದೃಶ್ಯ ನಯನ ಮನೋಹರ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ಕಾಣಸಿಗದಿರುವ ವರ್ತುಲಾಕಾರದ ಗರ್ಭಗುಡಿಯನ್ನು ಹೊಂದಿ ತನ್ನ ಬಲಭಾಗದಲ್ಲಿ ಗಣಪತಿಯನ್ನು ಹಾಗೂ ಎಡಭಾಗದಲ್ಲಿ ವನದುರ್ಗೆಗೆ ಸ್ಥಾನ ಕಲ್ಪಿಸಿದ್ದಾನೆ. ಗರ್ಭಗುಡಿಯ ಮುಂಭಾಗದ ಗೊಪುರದ ಬಲಭಾಗದಲ್ಲಿ ಕ್ಷೇತ್ರ ರಕ್ಷಕನಾಗಿ ಧೂಮಾವತಿ ನೆಲೆಯಾಗಿದ್ದಾನೆ.
ದೇವಾಲಯದ ಮುಂಭಾಗದಲ್ಲಿ ಜಳಕದ ಕೆರೆಯನ್ನು ಹೊಂದಿರುವ ಸೋಮನಾಥನು ಆಸ್ತಿಕ ಭಕ್ತರ ಕಷ್ಟವನ್ನು ನಿವಾರಿಸಿ ಊರ ಪರವೂರ ಭಕ್ತಾದಿಗಳಿಂದ ಅನವರತ ಶತರುದ್ರಾಭಿಷೇಕ, ರಂಗಪೂಜೆ, ಹೂವಿನ ಪೂಜೆ, ಏಕದಶ ರುದ್ರಾಭಿಷೇಕ ರುದ್ರಾಭಿಷೇಕ, ಕಾರ್ತಿಪೂಜೆಯನ್ನು ಸ್ವೀಕರಿಸುವ ಪರಮೇಶ್ವರ ಭಕ್ತರ ಪಾಲಿಗೆ ಕಾಮಧೇನು.
ಜಳಕದ ಕೆರೆ
ಪೆರ್ಮುದೆ ಗ್ರಾಮದಲ್ಲಿ ಗ್ರಾಮದೇವತೆ ಸೋಮನಾಥನಂತೆ ಗ್ರಾಮದೈವಗಳಾಗಿ ಪಾರಾಳೆಗುತ್ತು ಬಂಟರ ಮನೆಯಲ್ಲಿ ನೆಲೆಯಾಗಿರುವ ಉಲ್ಲಾಯ ಕೊಡಮಣಿತ್ತಾಯ, ಕಾಂತೇರಿ ಧೂಮಾವತಿ, ಸರಳ ಧೂಮಾವತಿ ಹಾಗೂ ಜಾರಂದಾಯ ಮತ್ತು ಮುಕ್ಕೋಡಿ ಎನ್ನುವ ಬಿಲ್ಲವರ ಮನೆಯಲ್ಲಿ ಪಿಲಿಚಾಮುಂಡಿ ದೈವವು ನೆಲೆಯಾಗಿ ಸರ್ವ ಗ್ರಾಮಸ್ಥರ ಕಷ್ಟ ದುಃಖ ನಷ್ಟಗಳಿಗೆ ಕರೆದಾಗ ಓಗೊಟ್ಟು ಸಲಹುವ ಗ್ರಾಮದೈವಗಳಾಗಿವೆ.
ಗ್ರಾಮದಲ್ಲಿ ೮ ಗುತ್ತಿನ ಮನೆ (ಮರ್ಯಾದೆಯ ಮನೆಗಳು) ಗಳು ಇವೆ.
೧) ಪಾರಾಳ ಗುತ್ತು - ಇಲ್ಲಿನ ಯಜಮಾನ ಪಟ್ಟದ ಹೆಸರು "ಚೌಟ"
೨) ಮಾಗಂದಡಿ ಬೀಡು - ಇಲ್ಲಿನ ಯಜಮಾನ ಪಟ್ಟದ ಹೆಸರು "ಶೆಟ್ಟಿವಾಲ್"
೩) ಬೊಳ್ಳೊಳ್ಳಿಮಾರು ಗುತ್ತು - ಇಲ್ಲಿನ ಯಜಮಾನ ಪಟ್ಟದ ಹೆಸರು "ಮಾಡ"
೪) ಕೊಂಡೇಲ ಮನೆ - ಇಲ್ಲಿನ ಯಜಮಾನ ಪಟ್ಟದ ಹೆಸರು "ಕೊಂಡೆ"
೫) ಮೇಗಿನ ಮನೆ - ಇಲ್ಲಿನ ಯಜಮಾನ ಪಟ್ಟದ ಹೆಸರು "ಶೆಟ್ಟಿವಾಲ್"
೬) ಹೊಸಮನೆ - ಇಲ್ಲಿನ ಯಜಮಾನ ಪಟ್ಟದ ಹೆಸರು "ಭಂಡ್ರಿಯಾಲ್"
೭) ಕೊಕ್ಕಾರ್ - ಇಲ್ಲಿನ ಯಜಮಾನ ಪಟ್ಟದ ಹೆಸರು "ಮಲ್ಲಿವಾಲ್"
೮) ಹಳೆಮನೆ - ಇಲ್ಲಿನ ಯಜಮಾನ ಪಟ್ಟದ ಹೆಸರು "ಶೆಟ್ಟಿವಾಲ್"
ಈ ಗ್ರಾಮಕ್ಕೆ ಗ್ರಾಮ ದೇವರು ಶ್ರೀ ಸೋಮನಾಥೇಶ್ವರ. ಈ ದೇವಸ್ಥಾನವನ್ನು ೧೩ನೇ ಶತಮಾನದಲ್ಲಿ ಭೃಗು ಮಹರ್ಷಿಯಿಂದ ಪ್ರತಿಷ್ಟಾಪಿಸಲ್ಪಟ್ಟಿತು. ಇಕ್ಕೇರಿ ಅರಸರ ಕಾಲದಲ್ಲಿ ಮಹಾದೇವ ದೇವಸ್ಥಾನ ಎಂದು ಕರೆಯಲ್ಪಡುತ್ತಿದ್ದ ಈ ದೇವಸ್ಥಾನವನ್ನು ಪುತ್ತಿಗೆ ಚೌಟರಸರ ಕಾಲದಲ್ಲಿ ಸೋಮನಾಥ ದೇವಸ್ಥಾನ ಎಂದು ಮರುನಾಮಕರಣ ಮಾಡಲಾಯಿತು.
ಶ್ರೀ ಸೋಮನಾಥೇಶ್ವರ ದೇವಸ್ಥಾನ
ಸೋಮನಾಥ ತನ್ನ ಹಿಂಭಾಗದಲ್ಲಿ ಎತ್ತರವಾದ ಗಿರಿ ಪ್ರದೇಶವನ್ನು ಹಾಗೂ ಮುಂಭಾಗದಲ್ಲಿ ತಂಪಾದ ನೀರು ಹಾಗೂ ಗದ್ದೆಯನ್ನು ಹೊಂದಿ ನಿತ್ಯ ಹರಿದ್ವರ್ಣವನ್ನು ಹೊಂದಿರುವ ಪ್ರದೇಶದಲ್ಲಿ ನೆಲೆಯಾಗಿದ್ದಾನೆ. ತುಳುವಿನ ಪುಯಿಂತೆಲ್ ತಿಂಗಳ ಹುಣ್ಣಿಮೆಯಂದು ಧ್ವಜಾರೋಹಣವಾಗಿ ೪ ದಿನಗಳ ಉತ್ಸವವನ್ನು ಶ್ರೀ ಸೋಮನಾಥ ಸ್ವೀಕರಿಸುತ್ತಾನೆ. ಉತ್ಸವದ ೪ನೇ ದಿನದಂದು ರಾತ್ರಿ ದೈವಗಳಿಗೆ ನೇಮೋತ್ಸವವು ನಡೆಯುತ್ತದೆ. ಜಾತ್ರಾ ಸಂದರ್ಭದಲ್ಲಿ ದೇವಳದ ಮುಂಭಾಗದ ಜಳಕದ ಕೆರೆಯಲ್ಲಿ ಜಳಕಗೈದು ದೇವಳದ ಅಂಗಳಕ್ಕೆ ಬಂದು ದೈವಗಳು ಭೇಟಿ ನೀಡುವ ದೃಶ್ಯ ನಯನ ಮನೋಹರ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ಕಾಣಸಿಗದಿರುವ ವರ್ತುಲಾಕಾರದ ಗರ್ಭಗುಡಿಯನ್ನು ಹೊಂದಿ ತನ್ನ ಬಲಭಾಗದಲ್ಲಿ ಗಣಪತಿಯನ್ನು ಹಾಗೂ ಎಡಭಾಗದಲ್ಲಿ ವನದುರ್ಗೆಗೆ ಸ್ಥಾನ ಕಲ್ಪಿಸಿದ್ದಾನೆ. ಗರ್ಭಗುಡಿಯ ಮುಂಭಾಗದ ಗೊಪುರದ ಬಲಭಾಗದಲ್ಲಿ ಕ್ಷೇತ್ರ ರಕ್ಷಕನಾಗಿ ಧೂಮಾವತಿ ನೆಲೆಯಾಗಿದ್ದಾನೆ.
ದೇವಾಲಯದ ಮುಂಭಾಗದಲ್ಲಿ ಜಳಕದ ಕೆರೆಯನ್ನು ಹೊಂದಿರುವ ಸೋಮನಾಥನು ಆಸ್ತಿಕ ಭಕ್ತರ ಕಷ್ಟವನ್ನು ನಿವಾರಿಸಿ ಊರ ಪರವೂರ ಭಕ್ತಾದಿಗಳಿಂದ ಅನವರತ ಶತರುದ್ರಾಭಿಷೇಕ, ರಂಗಪೂಜೆ, ಹೂವಿನ ಪೂಜೆ, ಏಕದಶ ರುದ್ರಾಭಿಷೇಕ ರುದ್ರಾಭಿಷೇಕ, ಕಾರ್ತಿಪೂಜೆಯನ್ನು ಸ್ವೀಕರಿಸುವ ಪರಮೇಶ್ವರ ಭಕ್ತರ ಪಾಲಿಗೆ ಕಾಮಧೇನು.
ಜಳಕದ ಕೆರೆ
ಪೆರ್ಮುದೆ ಗ್ರಾಮದಲ್ಲಿ ಗ್ರಾಮದೇವತೆ ಸೋಮನಾಥನಂತೆ ಗ್ರಾಮದೈವಗಳಾಗಿ ಪಾರಾಳೆಗುತ್ತು ಬಂಟರ ಮನೆಯಲ್ಲಿ ನೆಲೆಯಾಗಿರುವ ಉಲ್ಲಾಯ ಕೊಡಮಣಿತ್ತಾಯ, ಕಾಂತೇರಿ ಧೂಮಾವತಿ, ಸರಳ ಧೂಮಾವತಿ ಹಾಗೂ ಜಾರಂದಾಯ ಮತ್ತು ಮುಕ್ಕೋಡಿ ಎನ್ನುವ ಬಿಲ್ಲವರ ಮನೆಯಲ್ಲಿ ಪಿಲಿಚಾಮುಂಡಿ ದೈವವು ನೆಲೆಯಾಗಿ ಸರ್ವ ಗ್ರಾಮಸ್ಥರ ಕಷ್ಟ ದುಃಖ ನಷ್ಟಗಳಿಗೆ ಕರೆದಾಗ ಓಗೊಟ್ಟು ಸಲಹುವ ಗ್ರಾಮದೈವಗಳಾಗಿವೆ.
ಗ್ರಾಮದಲ್ಲಿ ೮ ಗುತ್ತಿನ ಮನೆ (ಮರ್ಯಾದೆಯ ಮನೆಗಳು) ಗಳು ಇವೆ.
೧) ಪಾರಾಳ ಗುತ್ತು - ಇಲ್ಲಿನ ಯಜಮಾನ ಪಟ್ಟದ ಹೆಸರು "ಚೌಟ"
೨) ಮಾಗಂದಡಿ ಬೀಡು - ಇಲ್ಲಿನ ಯಜಮಾನ ಪಟ್ಟದ ಹೆಸರು "ಶೆಟ್ಟಿವಾಲ್"
೩) ಬೊಳ್ಳೊಳ್ಳಿಮಾರು ಗುತ್ತು - ಇಲ್ಲಿನ ಯಜಮಾನ ಪಟ್ಟದ ಹೆಸರು "ಮಾಡ"
೪) ಕೊಂಡೇಲ ಮನೆ - ಇಲ್ಲಿನ ಯಜಮಾನ ಪಟ್ಟದ ಹೆಸರು "ಕೊಂಡೆ"
೫) ಮೇಗಿನ ಮನೆ - ಇಲ್ಲಿನ ಯಜಮಾನ ಪಟ್ಟದ ಹೆಸರು "ಶೆಟ್ಟಿವಾಲ್"
೬) ಹೊಸಮನೆ - ಇಲ್ಲಿನ ಯಜಮಾನ ಪಟ್ಟದ ಹೆಸರು "ಭಂಡ್ರಿಯಾಲ್"
೭) ಕೊಕ್ಕಾರ್ - ಇಲ್ಲಿನ ಯಜಮಾನ ಪಟ್ಟದ ಹೆಸರು "ಮಲ್ಲಿವಾಲ್"
೮) ಹಳೆಮನೆ - ಇಲ್ಲಿನ ಯಜಮಾನ ಪಟ್ಟದ ಹೆಸರು "ಶೆಟ್ಟಿವಾಲ್"
ಊರಿನ ದೈವಸ್ಥಾನ
ಪಾರಾಳೆಗುತ್ತು ಪಾಲೆದಡಿ ಸ್ಥಾನದಲ್ಲಿ ಅಂದರೆ ಎತ್ತರವಾದ ಹಾಳೆಯ ಮರದ ಅಡಿಯಲ್ಲಿ ಐವರು ಸತ್ಯಗಳಿಗೆ ಪ್ರತಿವರ್ಷ ತುಳುವಿನ "ಮಾಯಿ" ತಿಂಗಳ ಹುಣ್ಣಿಮೆಯಂದು ಧ್ವಜಾರೋಹಣವಾಗಿ ೪ ದಿನಗಳ ಜಾತ್ರೆ ನಡೆಯುತ್ತದೆ. ಎತ್ತರವಾದ ಹಾಳೆಮರದ ಅಡಿಯಲ್ಲಿ ದೈವಗಳು ನರ್ತನ ಸೇವೆಯನ್ನು ಸ್ವೀಕರಿಸುತ್ತದೆ. ಇಲ್ಲಿ ಪ್ರತಿವರ್ಷ ದೈವದ ಹೆಸರಿನಲ್ಲಿ ಕಂಬಳವು ನಡೆಯುತ್ತದೆ. ಈ ಮನೆಯ ಯಜಮಾನನನ್ನು "ಚೌಟ" ಎನ್ನುವ ಹೆಸರಿನಿಂದ ಕರೆಯುತ್ತಾರೆ. ಇಲ್ಲಿ ನಡೆಯುವ ಐವರು ಸತ್ಯಗಳಿಗೆ ನಡೆಯುವ ಎಲ್ಲಾ ಧಾರ್ಮಿಕ ಕಾರ್ಯಗಳಿಗೂ ಗ್ರಾಮದ ೮ ಮನೆತನದ ಯಜಮಾನರೂ ಬರಲೇಬೇಕು.
ಭಂಡಾರ
ವರ್ಷಾವಧಿ ನೇಮೋತ್ಸವಕ್ಕೆ ಸ್ವಲ್ಪ ದಿನ ಮುಂಚೆ ಕೋಳಿಗೂಟ (ಕೋರಿ ಕುಂಟ) ನಡೆಯುತ್ತದೆ. ಇದು ನಡೆದ ಮೇಲೆ ನೇಮದವರೆಗೆ ಊರಿನಲ್ಲಿ ಯಾವುದೇ ಒಳ್ಳೆಯ ಕೆಲಸವಾಗಬಾರದು. ಮದುವೆ ಅಥವಾ ದೈವಗಳಿಗೆ ಸಂಬಂಧಪಟ್ಟ ಯಾವುದೇ ಕಾರ್ಯ ಮಾಡಿದರೂ ದೋಷ ಕಂಡುಬರುವುದು.
ಈ ಕೋರಿ ಕುಂಟಕ್ಕೂ, ನೇಮದ ಮುಂಚಿನ ದಿನ ನಡೆಯುವ ಚಪ್ಪರ ಹಾಕುವ ಕಾರ್ಯಕ್ಕೂ ಮನೆಯ ಯಜಮಾನ ಹೋಗಬೇಕು.
ನೇಮೋತ್ಸವದ ಮೊದಲ ದಿನ ಬೆಳಿಗ್ಗೆ ಮುಕ್ಕೋಡಿಯಲ್ಲೂ ಮತ್ತು ಪಾರಾಳ ಗುತ್ತಿನಲ್ಲೂ ಭಂಢಾರ ಏರುತ್ತದೆ. ಈ ದೃಶ್ಯ ಭಕ್ತಿರಸವನ್ನೇ ಹರಿಸುತ್ತದೆ. ಬೊಳ್ಳೊಳ್ಳಿಮಾರು ಗುತ್ತಿನ ಯಜಮಾನನು ಅಂದು ಭಂಡಾರ ಏರುವ ಹೊತ್ತಿಗೆ ಮುಕ್ಕೋಡಿಯಲ್ಲಿರಬೇಕು. ಮುಕ್ಕೋಡಿ ಮನೆಯಲ್ಲಿ ಪಿಲಿಚಾಮುಂಡಿಯನ್ನು ಉಂಡು ಮಾಡುವಾಗ (ಆವೇಶ ಬರಿಸುವಾಗ) ಬೊಳ್ಳೊಳ್ಳಿಮಾರು ಗುತ್ತಿನ ಯಜಮಾನ "ಮದು" ಹೇಳಬೇಕು. ಭಂಡಾರ ಏರಿ ಮುಕ್ಕೋಡಿಯಿಂದ ಪಾಲೆದಡಿ ಸ್ಥಾನಕ್ಕೆ ಹೋಗುವಾಗ, ಬೊಳ್ಳೊಳ್ಳಿಮಾರು ಗುತ್ತಿನ ಯಜಮಾನನು (ಮಾಡರು) ಬೆಳ್ಳಿಯ ಚಿಕ್ಕ ಹುಲಿಯ ಮೂರ್ತಿಯನ್ನು ಹಿಡಿದು ಹೋಗುವ ಪದ್ಧತಿ ಹಿಂದಿನಿಂದಲೂ ನಡೆದು ಬಂದುದು. ಒಂದು ವೇಳೆ ಗಡಿಹಿಡಿದವರು ಇಲ್ಲದಿದ್ದರೆ ಆ ಹುಲಿಯನ್ನು ಭಂಡಾರದ ಪೆಟ್ಟಿಗೆಯ ಒಳಗಿಟ್ಟು ಕೊಂಡು ಹೋಗುತ್ತಾರೆ. ಅದೇ ಹೊತ್ತಿಗೆ ಪಾರಾಳ ಗುತ್ತಿನಿಂದಲೂ ಭಂಡಾರವೇರಿ ವಿಜೃಂಭಣೆಯಿಂದ ಪಾಲೆದಡಿ ಸಾನಕ್ಕೆ ಹೋಗುತ್ತದೆ. ನಂತರ ಧ್ವಜ ಕಂಬಕ್ಕೆ ಗರುಡನನ್ನು ಏರಿಸಿ ಬೆಳಿಗ್ಗೆ ಉಲ್ಲಾಯನಿಗೆ ನೇಮೋತ್ಸವವು ನಡೆಯುತ್ತದೆ.
ಧ್ವಜ ಕಂಬಕ್ಕೆ ಏರಿಸುವ ಬೆಳ್ಳಿಯ ಗರುಡನನ್ನು ಬೊಳ್ಳೊಳ್ಳಿಮಾರು ಗುತ್ತಿನ ಶಾಂತರಾಮ ಹೆಗ್ಡೆಯವರು, ಬೊಳ್ಳೊಳ್ಳಿಮಾರುಗುತ್ತಿನ ಕುಟುಂಬಿಕರ ಹೆಸರಿನಲ್ಲಿ ಕೊಟ್ಟ ಸೇವೆಯ ನೆನಪಿಗಾಗಿ, ಉಲ್ಲಾಯನಿಗೆ ನೇಮವಾಗುವಾಗ ಬೊಳ್ಳೊಳ್ಳಿಮಾರು ಗುತ್ತಿನ ಯಜಮಾನನಿಗೆ ತುದಿ ಬಾಳೆ ಎಲೆಯಲ್ಲಿ ಪ್ರಸಾದ ಕೊಡುತ್ತಾರೆ. ಇದು ಸೂರ್ಯ ಚಂದ್ರರಿರುವವರೆಗೆ ಸಿಗಬೇಕಾದ ಮರ್ಯಾದೆ.
ಅದೇ ದಿನ ರಾತ್ರಿ ಕೊಡಮಣಿತ್ತಾಯಿಗೆ ನರ್ತನ ಸೇವೆ ನಡೆಯುತ್ತದೆ. ಎರಡನೆ ದಿನ ಕಾಂತೇರಿ ಧೂಮಾವತಿ, ಬಬ್ಬರ್ಯ, ಜಾರಂದಾಯ, ಮತ್ತು ಮರಬೂತಕ್ಕೆ ನರ್ತನ ಸೇವೆ ನಡೆಯುತ್ತದೆ.
ಮೂರನೇ ದಿನದ ನೇಮೋತ್ಸವವು ಸರಳ ಧೂಮಾವತಿಗೆ ಮತ್ತು ಬ್ರಹ್ಮನ್ ದೇವತೆಗೆ ನಡೆಯುತ್ತದೆ. ಈ ದಿನದ ನೇಮೋತ್ಸವಕ್ಕೆ ಬೊಳ್ಳೊಳ್ಳಿಮಾರು ಗುತ್ತ್ತಿನಿಂದಲೇ ತೆಂಗಿನಕಾಯಿ, ಸೀಯಾಳ, ತೆಂಗಿನಮರದ ಎಳೆತುಗರಿ (ಸಿರಿ) ಹಿಂಗಾರ ಎಲೆ ಸಂದಾಯವಾಗಬೇಕು. ಆ ದಿವಸ ಗಡಿ ಹಿಡಿದ ಬೊಳ್ಳೊಳ್ಳಿಮಾರು ಗುತ್ತಿನ ಮಾಡರು ಮಧ್ಯಾಹ್ನ ೧ಕ್ಕೆ ಊಟ ಮಾಡಿ ರಾತ್ರಿ ಫಲಾಹಾರ ಸೇವಿಸಬೇಕು. ಮಾಂಸಾಹಾರ ಸೇವಿಸಬಾರದು. ಮಾಡರು ರಾತ್ರಿ ದೈವಕ್ಕೆ ಸ್ವಸ್ತಿಕೆ (ಸುತ್ತಿಗೆ) ಇಡುವುದಕ್ಕೆ ಮೊದಲೇ ಹೋಗಬೇಕು.
ಅಂದು ರಾತ್ರಿ ಸರಳ ಧೂಮಾವತಿಗೆ ನರ್ತನ ಸೇವೆ ನಡೆದು ದೈವದ ಬದಿಕರ ಹಾಗೂ ಬ್ರಹ್ಮನ್ ದೇವತೆಯ ಪನಿವಾರವು ಬೊಳ್ಳೊಳ್ಳಿಮಾರು ಗುತ್ತಿಗೆ ಸಂದಾಯವಾಗುತ್ತದೆ. ನರ್ತನದ ನಂತರ ನರ್ತನದಲ್ಲೆ ಸಿಗುವ ಈ ಪವಿತ್ರವಾದ ಅಮೃತಕ್ಕೆ ಸಮಾನವಾದ ಪ್ರಸಾದವನ್ನು ಬೊಳ್ಳೊಳ್ಳಿಮಾರುಗುತ್ತಿನ ಯಜಮಾನರು ದೈವದ ಕೈಯಿಂದಲೇ ಸ್ವೀಕರಿಸುತ್ತಾರೆ. ಒಂದು ವೇಳೆ ಯಜಮಾನ ಇಲ್ಲದಿದ್ದರೆ ಬೊಳ್ಳೊಳ್ಳಿಮಾರು ಗುತ್ತಿನ ಯಜಮಾನನ ಪ್ರತಿನಿಧಿಯು ಸ್ವೀಕರಿಸುತ್ತಾರೆ. ನಮ್ಮ ಊರಿನಲ್ಲಿ ಯಾವ ಜಾತಿಯವನ ಮನೆಯಲ್ಲೇ ಆಗಲಿ ಸರಳ ಧೂಮಾವತಿ ನೇಮವಾದರೆ "ಬದಿಕರ" ವು ಬೊಳ್ಳೊಳ್ಳಿಮಾರಿಗೆನೇ ಸಂದಾಯವಾಗಬೇಕು.
ಸರಳ ಧೂಮಾವತಿ
ಬ್ರಹ್ಮನ್ ದೇವತೆ
ನಾಲ್ಕನೆಯ ದಿನ ವಿಜೃಂಭಣೆಯಿಂದ ಹುಲಿ ಚಾಮುಂಡಿಗೆ ನೇಮೋತ್ಸವವು ನಡೆಯುತ್ತದೆ. ರಾತ್ರಿ ನೇಮೋತ್ಸವದ ನಂತರ ಬಂಡಿ ಮತ್ತು ತೂಟೆದಾರ ನಡೆಯುತ್ತದೆ. ಅಂದು ಹುಲಿ ಚಾಮುಂಡಿಯ ಯಾವುದೇ ಆಯ-ನ್ಯಾಯ ಇದ್ದರೂ ಅದಕ್ಕೆ ತೀರ್ಪನ್ನು ಕೊಡುತ್ತಾನೆ. ಯಾಕೆಂದರೆ ಉಲ್ಲಾಯ, ಕೊಡಮಣಿತ್ತಾಯ ದೈವಗಳು ಪಿಲಿಚಾಮುಂಡಿಗೆ ಆಯ-ನ್ಯಾಯದ ಅಧಿಕಾರವನ್ನು ನೀಡಿರುತ್ತದೆ. ಹುಲಿ ಚಾಮುಂಡಿಯು ಪ್ರಧಾನ ದೈವವಾಗಿ ಮೆರೆಯುತ್ತದೆ.
ಹುಲಿ ಚಾಮುಂಡಿಗೆ ನೇಮೋತ್ಸವ
ಬಂಡಿ ಮತ್ತು ತೂಟೆದಾರ
ಹುಲಿ ಚಾಮುಂಡಿ ಮರಂಕಂದಭಯ
ಹಿಂದೆ ಹುಲಿ ಚಾಮುಂಡಿ ದೈವದ ಬದಿಕರವು ಬೊಳ್ಳೊಳ್ಳಿಮಾರುಗುತ್ತಿಗೆ ಸಲ್ಲುತ್ತಿತ್ತು. ಎರಡು ಮರ್ಯಾದೆಯ ಮನೆ ಎಂದು ಗುರುತಿಸಲ್ಪಡುತ್ತಿದ್ದ ಬೊಳ್ಳೊಳ್ಳಿಮಾರಿಗೆ ಹುಲಿಚಾಮುಂಡಿಯ ಬದಿಕರವನ್ನು ಉಳಿಸಿಕೊಳ್ಳಲಾಗಲಿಲ್ಲ. ಆಗಿನ ಕಾಲದ ಬೊಳ್ಳೊಳ್ಳಿಮಾರಿನ ಯಜಮಾನರು ದುರ್ಬಲರಾಗಿದ್ದ ಕಾರಣ ನಂತರದ ವರ್ಷಗಳಲ್ಲೂ ಅದನ್ನು ಮತ್ತೆ ಪಡೆಯಲಾಗಲಿಲ್ಲ. ಬೊಳ್ಳೊಳ್ಳಿಮಾರುಗುತ್ತಿನ ಚಾವಡಿಗೆ ಬರಬೇಕಿದ್ದ ಹುಲಿ ಚಾಮುಂಡಿ ಬದಿಕರವು ಬಾರದೆ ಇರುವುದರಿಂದ ದೈವವು ಕುಟುಂಬಿಕರಲ್ಲಿ ಅತೃಪ್ತಿಯಾಗಿದ್ದಾನೆ ಎಂದು ಅಷ್ಟಮಂಗಳದಲ್ಲೂ ಕಂಡು ಬಂದಿತ್ತು. ಕಾಲ ಕೂಡಿ ಬಂದಾಗ ತಾನು ನೆಲೆಯೂರಿದ ಧರ್ಮದ ಮಣ್ಣಾದ ಬೊಳ್ಳೊಳ್ಳಿಮಾರುಗುತ್ತಿನ ಕುಟುಂಬಿಕರ ಭಕ್ತಿಗೆ ಶಕ್ತಿ ಒದಗಿ ಆ ಬದಿಕರವನ್ನು ಪಡೆಯುವ ಯೋಗ ಬರಲಿದೆ ಎಂದೂ ತೋರಿ ಬಂತು.
ಹುಲಿ ಚಾಮುಂಡಿ ದೈವವು ಊರ ಜನರಿಗೆ ಹಾಗೂ ದನಕರುಗಳಿಗೆ ಬರುವ ರೋಗ ರುಜಿನಗಳನ್ನು ದೂರ ಮಾಡಲು ಗಡುಪಾಡಿ ಸ್ಥಳಗಳಿಗೆ ಹೋಗಿ ಮಾರಿದೇವತೆಗೆ ರಕ್ತಾಹಾರವನ್ನು ನೀಡಿ ತೃಪ್ತಿಪಡಿಸುತ್ತದೆ. ಪೆರ್ಮುದೆ ಗ್ರಾಮಕ್ಕೆ ೪ ಗಡುಪಾಡಿ ಸ್ಥಳಗಳಿದ್ದು ಪಡ್ಡಾಯಿ ಕಾಯರ್ ಕಟ್ಟೆ, ಮುಡಾಯಿ ಕುಕ್ಕುದ ಕಟ್ಟೆ, ಬಡಕಾಯಿ ಭಟ್ರಗೋಳಿ, ತೆನ್ಕಾಯಿ ಥಾಕ್ಯಾರ್ ಕಟ್ಟೆ ಈ ಸ್ಥಳಗಳಲ್ಲಿ ಹಿಂದೆ ಹುಲಿಯ ಸಂಚಾರ ಕಾಣಸಿಗುತ್ತಿತ್ತು.
ಪಡ್ಡಾಯಿ ಕಾಯರ್ ಕಟ್ಟೆ
ಬಡಕಾಯಿ ಭಟ್ರಗೋಳಿ
ತೆನ್ಕಾಯಿ ಥಾಕ್ಯಾರ್ ಕಟ್ಟೆ
ಇಲ್ಲಿ ನಡೆಯುವ ನೇಮೋತ್ಸವಕ್ಕೆ ಬೊಳ್ಳೊಳ್ಳಿಮಾರು ಗುತ್ತು ಕುಟುಂಬದ ಪರವಾಗಿ ದೇಣಿಗೆಯನ್ನು ಕೊಡುತ್ತಾರೆ.
ದ್ಯೆವದ ಆಭರಣ ಪೆಟ್ಟಿಗೆ:
ಇಡೀ ಊರಿಗೆ ಸಂಬಂಧಪಟ್ಟ ದೈವದ ಆಭರಣ ಪೆಟ್ಟಿಗೆಯು ಬೊಳ್ಳೊಳ್ಳಿಮಾರು ಗುತ್ತಿ ನಲ್ಲಿದ್ದು ಪ್ರತಿ ನೇಮಗಳಿಗೆ ಕೊಂಡೊಯ್ಯುತ್ತಾರೆ. ಇದರಲ್ಲಿ
ತಲೆಕಿರೀಟ
ಎದೆಕವಚ
ಕಿವಿಓಲೆ
ಬಂಗಾರದ ಪಟ್ಟಿ
ಅಶ್ವತ್ಥದ ಮಾಲೆ
ತೋಳ ಸರಿಗೆ
ಕೈಗೆ ಕಟ್ಟುವ ಅಭರಣ
ಆಣಿಗೆ ಕಟ್ಟುವ ಬೆಳ್ಳಿಯ ಮುದ್ರೆ ಮತ್ತು ಬೆಳ್ಳಿಯ ಹೂವುಗಳಿವೆ.
ದ್ಯೆವದ ಆಭರಣ ಪೆಟ್ಟಿಗೆ
ಭಂಡಾರ
ವರ್ಷಾವಧಿ ನೇಮೋತ್ಸವಕ್ಕೆ ಸ್ವಲ್ಪ ದಿನ ಮುಂಚೆ ಕೋಳಿಗೂಟ (ಕೋರಿ ಕುಂಟ) ನಡೆಯುತ್ತದೆ. ಇದು ನಡೆದ ಮೇಲೆ ನೇಮದವರೆಗೆ ಊರಿನಲ್ಲಿ ಯಾವುದೇ ಒಳ್ಳೆಯ ಕೆಲಸವಾಗಬಾರದು. ಮದುವೆ ಅಥವಾ ದೈವಗಳಿಗೆ ಸಂಬಂಧಪಟ್ಟ ಯಾವುದೇ ಕಾರ್ಯ ಮಾಡಿದರೂ ದೋಷ ಕಂಡುಬರುವುದು.
ಈ ಕೋರಿ ಕುಂಟಕ್ಕೂ, ನೇಮದ ಮುಂಚಿನ ದಿನ ನಡೆಯುವ ಚಪ್ಪರ ಹಾಕುವ ಕಾರ್ಯಕ್ಕೂ ಮನೆಯ ಯಜಮಾನ ಹೋಗಬೇಕು.
ನೇಮೋತ್ಸವದ ಮೊದಲ ದಿನ ಬೆಳಿಗ್ಗೆ ಮುಕ್ಕೋಡಿಯಲ್ಲೂ ಮತ್ತು ಪಾರಾಳ ಗುತ್ತಿನಲ್ಲೂ ಭಂಢಾರ ಏರುತ್ತದೆ. ಈ ದೃಶ್ಯ ಭಕ್ತಿರಸವನ್ನೇ ಹರಿಸುತ್ತದೆ. ಬೊಳ್ಳೊಳ್ಳಿಮಾರು ಗುತ್ತಿನ ಯಜಮಾನನು ಅಂದು ಭಂಡಾರ ಏರುವ ಹೊತ್ತಿಗೆ ಮುಕ್ಕೋಡಿಯಲ್ಲಿರಬೇಕು. ಮುಕ್ಕೋಡಿ ಮನೆಯಲ್ಲಿ ಪಿಲಿಚಾಮುಂಡಿಯನ್ನು ಉಂಡು ಮಾಡುವಾಗ (ಆವೇಶ ಬರಿಸುವಾಗ) ಬೊಳ್ಳೊಳ್ಳಿಮಾರು ಗುತ್ತಿನ ಯಜಮಾನ "ಮದು" ಹೇಳಬೇಕು. ಭಂಡಾರ ಏರಿ ಮುಕ್ಕೋಡಿಯಿಂದ ಪಾಲೆದಡಿ ಸ್ಥಾನಕ್ಕೆ ಹೋಗುವಾಗ, ಬೊಳ್ಳೊಳ್ಳಿಮಾರು ಗುತ್ತಿನ ಯಜಮಾನನು (ಮಾಡರು) ಬೆಳ್ಳಿಯ ಚಿಕ್ಕ ಹುಲಿಯ ಮೂರ್ತಿಯನ್ನು ಹಿಡಿದು ಹೋಗುವ ಪದ್ಧತಿ ಹಿಂದಿನಿಂದಲೂ ನಡೆದು ಬಂದುದು. ಒಂದು ವೇಳೆ ಗಡಿಹಿಡಿದವರು ಇಲ್ಲದಿದ್ದರೆ ಆ ಹುಲಿಯನ್ನು ಭಂಡಾರದ ಪೆಟ್ಟಿಗೆಯ ಒಳಗಿಟ್ಟು ಕೊಂಡು ಹೋಗುತ್ತಾರೆ. ಅದೇ ಹೊತ್ತಿಗೆ ಪಾರಾಳ ಗುತ್ತಿನಿಂದಲೂ ಭಂಡಾರವೇರಿ ವಿಜೃಂಭಣೆಯಿಂದ ಪಾಲೆದಡಿ ಸಾನಕ್ಕೆ ಹೋಗುತ್ತದೆ. ನಂತರ ಧ್ವಜ ಕಂಬಕ್ಕೆ ಗರುಡನನ್ನು ಏರಿಸಿ ಬೆಳಿಗ್ಗೆ ಉಲ್ಲಾಯನಿಗೆ ನೇಮೋತ್ಸವವು ನಡೆಯುತ್ತದೆ.
ಧ್ವಜ ಕಂಬಕ್ಕೆ ಏರಿಸುವ ಬೆಳ್ಳಿಯ ಗರುಡನನ್ನು ಬೊಳ್ಳೊಳ್ಳಿಮಾರು ಗುತ್ತಿನ ಶಾಂತರಾಮ ಹೆಗ್ಡೆಯವರು, ಬೊಳ್ಳೊಳ್ಳಿಮಾರುಗುತ್ತಿನ ಕುಟುಂಬಿಕರ ಹೆಸರಿನಲ್ಲಿ ಕೊಟ್ಟ ಸೇವೆಯ ನೆನಪಿಗಾಗಿ, ಉಲ್ಲಾಯನಿಗೆ ನೇಮವಾಗುವಾಗ ಬೊಳ್ಳೊಳ್ಳಿಮಾರು ಗುತ್ತಿನ ಯಜಮಾನನಿಗೆ ತುದಿ ಬಾಳೆ ಎಲೆಯಲ್ಲಿ ಪ್ರಸಾದ ಕೊಡುತ್ತಾರೆ. ಇದು ಸೂರ್ಯ ಚಂದ್ರರಿರುವವರೆಗೆ ಸಿಗಬೇಕಾದ ಮರ್ಯಾದೆ.
ಅದೇ ದಿನ ರಾತ್ರಿ ಕೊಡಮಣಿತ್ತಾಯಿಗೆ ನರ್ತನ ಸೇವೆ ನಡೆಯುತ್ತದೆ. ಎರಡನೆ ದಿನ ಕಾಂತೇರಿ ಧೂಮಾವತಿ, ಬಬ್ಬರ್ಯ, ಜಾರಂದಾಯ, ಮತ್ತು ಮರಬೂತಕ್ಕೆ ನರ್ತನ ಸೇವೆ ನಡೆಯುತ್ತದೆ.
ಮೂರನೇ ದಿನದ ನೇಮೋತ್ಸವವು ಸರಳ ಧೂಮಾವತಿಗೆ ಮತ್ತು ಬ್ರಹ್ಮನ್ ದೇವತೆಗೆ ನಡೆಯುತ್ತದೆ. ಈ ದಿನದ ನೇಮೋತ್ಸವಕ್ಕೆ ಬೊಳ್ಳೊಳ್ಳಿಮಾರು ಗುತ್ತ್ತಿನಿಂದಲೇ ತೆಂಗಿನಕಾಯಿ, ಸೀಯಾಳ, ತೆಂಗಿನಮರದ ಎಳೆತುಗರಿ (ಸಿರಿ) ಹಿಂಗಾರ ಎಲೆ ಸಂದಾಯವಾಗಬೇಕು. ಆ ದಿವಸ ಗಡಿ ಹಿಡಿದ ಬೊಳ್ಳೊಳ್ಳಿಮಾರು ಗುತ್ತಿನ ಮಾಡರು ಮಧ್ಯಾಹ್ನ ೧ಕ್ಕೆ ಊಟ ಮಾಡಿ ರಾತ್ರಿ ಫಲಾಹಾರ ಸೇವಿಸಬೇಕು. ಮಾಂಸಾಹಾರ ಸೇವಿಸಬಾರದು. ಮಾಡರು ರಾತ್ರಿ ದೈವಕ್ಕೆ ಸ್ವಸ್ತಿಕೆ (ಸುತ್ತಿಗೆ) ಇಡುವುದಕ್ಕೆ ಮೊದಲೇ ಹೋಗಬೇಕು.
ಅಂದು ರಾತ್ರಿ ಸರಳ ಧೂಮಾವತಿಗೆ ನರ್ತನ ಸೇವೆ ನಡೆದು ದೈವದ ಬದಿಕರ ಹಾಗೂ ಬ್ರಹ್ಮನ್ ದೇವತೆಯ ಪನಿವಾರವು ಬೊಳ್ಳೊಳ್ಳಿಮಾರು ಗುತ್ತಿಗೆ ಸಂದಾಯವಾಗುತ್ತದೆ. ನರ್ತನದ ನಂತರ ನರ್ತನದಲ್ಲೆ ಸಿಗುವ ಈ ಪವಿತ್ರವಾದ ಅಮೃತಕ್ಕೆ ಸಮಾನವಾದ ಪ್ರಸಾದವನ್ನು ಬೊಳ್ಳೊಳ್ಳಿಮಾರುಗುತ್ತಿನ ಯಜಮಾನರು ದೈವದ ಕೈಯಿಂದಲೇ ಸ್ವೀಕರಿಸುತ್ತಾರೆ. ಒಂದು ವೇಳೆ ಯಜಮಾನ ಇಲ್ಲದಿದ್ದರೆ ಬೊಳ್ಳೊಳ್ಳಿಮಾರು ಗುತ್ತಿನ ಯಜಮಾನನ ಪ್ರತಿನಿಧಿಯು ಸ್ವೀಕರಿಸುತ್ತಾರೆ. ನಮ್ಮ ಊರಿನಲ್ಲಿ ಯಾವ ಜಾತಿಯವನ ಮನೆಯಲ್ಲೇ ಆಗಲಿ ಸರಳ ಧೂಮಾವತಿ ನೇಮವಾದರೆ "ಬದಿಕರ" ವು ಬೊಳ್ಳೊಳ್ಳಿಮಾರಿಗೆನೇ ಸಂದಾಯವಾಗಬೇಕು.
ಸರಳ ಧೂಮಾವತಿ
ಬ್ರಹ್ಮನ್ ದೇವತೆ
ನಾಲ್ಕನೆಯ ದಿನ ವಿಜೃಂಭಣೆಯಿಂದ ಹುಲಿ ಚಾಮುಂಡಿಗೆ ನೇಮೋತ್ಸವವು ನಡೆಯುತ್ತದೆ. ರಾತ್ರಿ ನೇಮೋತ್ಸವದ ನಂತರ ಬಂಡಿ ಮತ್ತು ತೂಟೆದಾರ ನಡೆಯುತ್ತದೆ. ಅಂದು ಹುಲಿ ಚಾಮುಂಡಿಯ ಯಾವುದೇ ಆಯ-ನ್ಯಾಯ ಇದ್ದರೂ ಅದಕ್ಕೆ ತೀರ್ಪನ್ನು ಕೊಡುತ್ತಾನೆ. ಯಾಕೆಂದರೆ ಉಲ್ಲಾಯ, ಕೊಡಮಣಿತ್ತಾಯ ದೈವಗಳು ಪಿಲಿಚಾಮುಂಡಿಗೆ ಆಯ-ನ್ಯಾಯದ ಅಧಿಕಾರವನ್ನು ನೀಡಿರುತ್ತದೆ. ಹುಲಿ ಚಾಮುಂಡಿಯು ಪ್ರಧಾನ ದೈವವಾಗಿ ಮೆರೆಯುತ್ತದೆ.
ಹುಲಿ ಚಾಮುಂಡಿಗೆ ನೇಮೋತ್ಸವ
ಬಂಡಿ ಮತ್ತು ತೂಟೆದಾರ
ಹುಲಿ ಚಾಮುಂಡಿ ಮರಂಕಂದಭಯ
ಹಿಂದೆ ಹುಲಿ ಚಾಮುಂಡಿ ದೈವದ ಬದಿಕರವು ಬೊಳ್ಳೊಳ್ಳಿಮಾರುಗುತ್ತಿಗೆ ಸಲ್ಲುತ್ತಿತ್ತು. ಎರಡು ಮರ್ಯಾದೆಯ ಮನೆ ಎಂದು ಗುರುತಿಸಲ್ಪಡುತ್ತಿದ್ದ ಬೊಳ್ಳೊಳ್ಳಿಮಾರಿಗೆ ಹುಲಿಚಾಮುಂಡಿಯ ಬದಿಕರವನ್ನು ಉಳಿಸಿಕೊಳ್ಳಲಾಗಲಿಲ್ಲ. ಆಗಿನ ಕಾಲದ ಬೊಳ್ಳೊಳ್ಳಿಮಾರಿನ ಯಜಮಾನರು ದುರ್ಬಲರಾಗಿದ್ದ ಕಾರಣ ನಂತರದ ವರ್ಷಗಳಲ್ಲೂ ಅದನ್ನು ಮತ್ತೆ ಪಡೆಯಲಾಗಲಿಲ್ಲ. ಬೊಳ್ಳೊಳ್ಳಿಮಾರುಗುತ್ತಿನ ಚಾವಡಿಗೆ ಬರಬೇಕಿದ್ದ ಹುಲಿ ಚಾಮುಂಡಿ ಬದಿಕರವು ಬಾರದೆ ಇರುವುದರಿಂದ ದೈವವು ಕುಟುಂಬಿಕರಲ್ಲಿ ಅತೃಪ್ತಿಯಾಗಿದ್ದಾನೆ ಎಂದು ಅಷ್ಟಮಂಗಳದಲ್ಲೂ ಕಂಡು ಬಂದಿತ್ತು. ಕಾಲ ಕೂಡಿ ಬಂದಾಗ ತಾನು ನೆಲೆಯೂರಿದ ಧರ್ಮದ ಮಣ್ಣಾದ ಬೊಳ್ಳೊಳ್ಳಿಮಾರುಗುತ್ತಿನ ಕುಟುಂಬಿಕರ ಭಕ್ತಿಗೆ ಶಕ್ತಿ ಒದಗಿ ಆ ಬದಿಕರವನ್ನು ಪಡೆಯುವ ಯೋಗ ಬರಲಿದೆ ಎಂದೂ ತೋರಿ ಬಂತು.
ಹುಲಿ ಚಾಮುಂಡಿ ದೈವವು ಊರ ಜನರಿಗೆ ಹಾಗೂ ದನಕರುಗಳಿಗೆ ಬರುವ ರೋಗ ರುಜಿನಗಳನ್ನು ದೂರ ಮಾಡಲು ಗಡುಪಾಡಿ ಸ್ಥಳಗಳಿಗೆ ಹೋಗಿ ಮಾರಿದೇವತೆಗೆ ರಕ್ತಾಹಾರವನ್ನು ನೀಡಿ ತೃಪ್ತಿಪಡಿಸುತ್ತದೆ. ಪೆರ್ಮುದೆ ಗ್ರಾಮಕ್ಕೆ ೪ ಗಡುಪಾಡಿ ಸ್ಥಳಗಳಿದ್ದು ಪಡ್ಡಾಯಿ ಕಾಯರ್ ಕಟ್ಟೆ, ಮುಡಾಯಿ ಕುಕ್ಕುದ ಕಟ್ಟೆ, ಬಡಕಾಯಿ ಭಟ್ರಗೋಳಿ, ತೆನ್ಕಾಯಿ ಥಾಕ್ಯಾರ್ ಕಟ್ಟೆ ಈ ಸ್ಥಳಗಳಲ್ಲಿ ಹಿಂದೆ ಹುಲಿಯ ಸಂಚಾರ ಕಾಣಸಿಗುತ್ತಿತ್ತು.
ಪಡ್ಡಾಯಿ ಕಾಯರ್ ಕಟ್ಟೆ
ಬಡಕಾಯಿ ಭಟ್ರಗೋಳಿ
ತೆನ್ಕಾಯಿ ಥಾಕ್ಯಾರ್ ಕಟ್ಟೆ
ಇಲ್ಲಿ ನಡೆಯುವ ನೇಮೋತ್ಸವಕ್ಕೆ ಬೊಳ್ಳೊಳ್ಳಿಮಾರು ಗುತ್ತು ಕುಟುಂಬದ ಪರವಾಗಿ ದೇಣಿಗೆಯನ್ನು ಕೊಡುತ್ತಾರೆ.
ದ್ಯೆವದ ಆಭರಣ ಪೆಟ್ಟಿಗೆ:
ಇಡೀ ಊರಿಗೆ ಸಂಬಂಧಪಟ್ಟ ದೈವದ ಆಭರಣ ಪೆಟ್ಟಿಗೆಯು ಬೊಳ್ಳೊಳ್ಳಿಮಾರು ಗುತ್ತಿ ನಲ್ಲಿದ್ದು ಪ್ರತಿ ನೇಮಗಳಿಗೆ ಕೊಂಡೊಯ್ಯುತ್ತಾರೆ. ಇದರಲ್ಲಿ
ತಲೆಕಿರೀಟ
ಎದೆಕವಚ
ಕಿವಿಓಲೆ
ಬಂಗಾರದ ಪಟ್ಟಿ
ಅಶ್ವತ್ಥದ ಮಾಲೆ
ತೋಳ ಸರಿಗೆ
ಕೈಗೆ ಕಟ್ಟುವ ಅಭರಣ
ಆಣಿಗೆ ಕಟ್ಟುವ ಬೆಳ್ಳಿಯ ಮುದ್ರೆ ಮತ್ತು ಬೆಳ್ಳಿಯ ಹೂವುಗಳಿವೆ.
ದ್ಯೆವದ ಆಭರಣ ಪೆಟ್ಟಿಗೆ
ಮನೆಯ ದೈವಸ್ಥಾನಗಳು
ಬೊಳ್ಳೊಳ್ಳಿಮಾರು ಗುತ್ತು ಪೆರ್ಮುದೆ ಗ್ರಾಮದ ಮೂರನೆಯ ಸ್ಥಾನಮಾನದ ಮನೆ. ಬೊಳ್ಳೊಳ್ಳಿಮಾರು ಗುತ್ತಿನ ದೈವಗಳ ಸೇವೆ ಮಾಡಲು ದೈವಗಳಿಂದ ಹಾಗೂ ಊರವರ ಸಮ್ಮುಖದಲ್ಲಿ ಗಡಿ ನೀಡಿ ಅವರನ್ನು ಮನೆಯ ಯಜಮಾನ ಎಂದು ಗುರುತಿಸುತ್ತಾರೆ. ಇಲ್ಲಿ ಗಡಿ ನೀಡಿದ ವ್ಯಕ್ತಿಗೆ "ಮಾಡ" ಎನ್ನುವ ಹೆಸರಿನಿಂದ ಕರೆಯುತ್ತಾರೆ.
ಸುತ್ತು ಪಾಳಿಯ ಈ ಮನೆಯ ಈಶಾನ್ಯ ಭಾಗದಲ್ಲಿ ನಾಗಬನವಿದ್ದು ಇದರಲ್ಲಿ ನಾಗ ಹಾಗೂ ರಕ್ತೇಶ್ವರಿ ಸಾನಿಧ್ಯಗಳಿವೆ.
ನಾಗ ಹಾಗೂ ರಕ್ತೇಶ್ವರಿ ಸಾನಿಧ್ಯ
ಬೊಳ್ಳೊಳ್ಳಿಮಾರು ಗುತ್ತು ಕುಟುಂಬಸ್ಥರಿಗೆ ಕಾಂತೇರಿ ಧೂಮಾವತಿಯು ಪ್ರಧಾನ ದೈವವಾಗಿದೆ. ದೈವದ ಗುಂಡ ಮತ್ತು ಚಾವಡಿಯು ಮಣ್ಣಿನಿಂದ ಕೂಡಿತ್ತು. ಶುಭ ದಿನಗಳ ಸಂದರ್ಭದಲ್ಲಿ ಚಾವಡಿಯ ಹೊರಗೆ ಸೆಗಣಿ ಸಾರುತ್ತಿದ್ದರು. ೧೯೮೨ರಲ್ಲಿ ಹೊರಗೆ ಸಿಮೆಂಟ್ ಹಾಕಿ ರಿಪೇರಿ ಮಾಡಿಸಲಾಯಿತು.
ಗುಂಡದ ಒಳಗೆ ಹುತ್ತ ಬಂದು ಬಾಗಿಲಿನಲ್ಲಿ ಹುತ್ತ ಬೆಳೆದು ದೈವಸ್ಥಾನವು ೪ ವರ್ಷಗಳಲ್ಲಿ ಅಜೀರ್ಣಾವಸ್ಥೆಯಲ್ಲಿತ್ತು. ನಂತರ ಕುಟುಂಬಿಕರೆಲ್ಲಾ ಒಂದಾಗಿ ಹೊರಗಿನ ಭಾಗವನ್ನು ಬಿಟ್ಟು ಗುಂಡದ ಒಳಭಾಗವನ್ನು ಸಂಪೂರ್ಣ ನೆಲಸಮ ಮಾಡಿ ಹೊಸ ಕೆಸರುಕಲ್ಲು ಹಾಕಿ ಬೇರೆಯೇ ಪಂಚಾಂಗ ಹಾಕಿ ಗುಂಡವನ್ನು ಪುನರ್ನಿರ್ಮಿಸಲಾಯಿತು.
ಕಾಂತೇರಿ ಧೂಮಾವತಿ ಚಾವಡಿ
೨೫-೦೪-೧೯೯೯ ರಂದು ಕುಟುಂಬಿಕರು ಸೇರಿ ವಿಜೃಂಭಣೆಯಿಂದ ಬ್ರಹ್ಮಕಲಶ ನಡೆಯಿತು.
೦೮-೦೨-೨೦೦೦ - ೦೯-೦೨-೨೦೦೦ ವರೆಗೆ ವಿಜೃಂಭಣೆಯಿಂದ ಧರ್ಮನೇಮೋತ್ಸವವು ನಡೆಯಿತು.
ಕಾಂತೇರಿ ಧೂಮಾವತಿಯ ಗುಂಡದೊಳಗೆ ಧೂಮಾವತಿಗೆ ಬಂಗಾರದ ನಾಲಗೆಯಿಂದ ಕೂಡಿದ ಮುಗವಿದೆ ಜೊತೆಗೆ ಅಗಲವಾದ ಮತ್ತು ಉದ್ದ ಇರುವ ಬೆಳ್ಳಿಯ ಖಡ್ಗ ಜುಮಾದಿಗಿದ್ದು, ಅಗಲ ಮತ್ತು ಉದ್ದದಲ್ಲಿ ಕಡಿಮೆ ಇರುವ ಬೆಳ್ಳಿಯ ಖಡ್ಗವು ಬಂಟನದ್ದಾಗಿದೆ. ಮನೆಯ ದೈವದ ಗುಂಡದ ಒಳಗೆ ಗಡಿಹಿಡಿದವರು (ಮಾಡ) ಅಥವಾ ಪೆಜತ್ತಾಯರು (ಬ್ರಾಹ್ಮಣರು) ಅಥವಾ ಮುಕ್ಕಾಲ್ದಿಯು ಹೋಗಬಹುದು. ಬೇರೆ ಯಾರು ಒಳ ಹೋಗುವ ಹಾಗಿಲ್ಲ.
ಕಾಂತೇರಿ ಧೂಮಾವತಿಯ ಗುಂಡ
ಗುತ್ತಿನ ಚಾವಡಿಯಲ್ಲಿ ಸತ್ಯ ದೇವತೆಯ ಸಾನಿಧ್ಯವಿದೆ. ಮೊದಲು ಬರೀ ಚಿಕ್ಕ ಮನೆ ಇತ್ತು. ೧೯೯೦ ರಲ್ಲಿ ಕುಟುಂಬಿಕರೆಲ್ಲಾ ಒಟ್ಟಾಗಿ ಮಂಚ, ಬೆಳ್ಳಿಯಮೂರ್ತಿ ಮಾಡಿ ಬ್ರಹ್ಮ ಕಲಶ ಮಾಡಲಾಯಿತು.
ಸತ್ಯ ದೇವತೆ
ಮನೆಯ ಎಡಭಾಗದ ಎತ್ತರ ಪ್ರದೇಶದಲ್ಲಿ ಪಿಲಿಚಾಮಂಡಿ ಮತ್ತು ಬ್ರಹ್ಮನ್ ದೇವತೆಯ ಸ್ಥಾನಗಳಿವೆ. ಹುಲಿ ಚಾಮುಂಡಿಯು ದೇವಿಯ ಅಂಶವಾಗಿದೆ. ಈ ದೈವವು ಬಾಳೊಳಿನಾಡಿನ ಮನೆಯವರ ಆರಾಧ್ಯ ದೈವವಾಗಿತ್ತು.
ಸುತ್ತು ಪಾಳಿಯ ಈ ಮನೆಯ ಈಶಾನ್ಯ ಭಾಗದಲ್ಲಿ ನಾಗಬನವಿದ್ದು ಇದರಲ್ಲಿ ನಾಗ ಹಾಗೂ ರಕ್ತೇಶ್ವರಿ ಸಾನಿಧ್ಯಗಳಿವೆ.
ನಾಗ ಹಾಗೂ ರಕ್ತೇಶ್ವರಿ ಸಾನಿಧ್ಯ
ಬೊಳ್ಳೊಳ್ಳಿಮಾರು ಗುತ್ತು ಕುಟುಂಬಸ್ಥರಿಗೆ ಕಾಂತೇರಿ ಧೂಮಾವತಿಯು ಪ್ರಧಾನ ದೈವವಾಗಿದೆ. ದೈವದ ಗುಂಡ ಮತ್ತು ಚಾವಡಿಯು ಮಣ್ಣಿನಿಂದ ಕೂಡಿತ್ತು. ಶುಭ ದಿನಗಳ ಸಂದರ್ಭದಲ್ಲಿ ಚಾವಡಿಯ ಹೊರಗೆ ಸೆಗಣಿ ಸಾರುತ್ತಿದ್ದರು. ೧೯೮೨ರಲ್ಲಿ ಹೊರಗೆ ಸಿಮೆಂಟ್ ಹಾಕಿ ರಿಪೇರಿ ಮಾಡಿಸಲಾಯಿತು.
ಗುಂಡದ ಒಳಗೆ ಹುತ್ತ ಬಂದು ಬಾಗಿಲಿನಲ್ಲಿ ಹುತ್ತ ಬೆಳೆದು ದೈವಸ್ಥಾನವು ೪ ವರ್ಷಗಳಲ್ಲಿ ಅಜೀರ್ಣಾವಸ್ಥೆಯಲ್ಲಿತ್ತು. ನಂತರ ಕುಟುಂಬಿಕರೆಲ್ಲಾ ಒಂದಾಗಿ ಹೊರಗಿನ ಭಾಗವನ್ನು ಬಿಟ್ಟು ಗುಂಡದ ಒಳಭಾಗವನ್ನು ಸಂಪೂರ್ಣ ನೆಲಸಮ ಮಾಡಿ ಹೊಸ ಕೆಸರುಕಲ್ಲು ಹಾಕಿ ಬೇರೆಯೇ ಪಂಚಾಂಗ ಹಾಕಿ ಗುಂಡವನ್ನು ಪುನರ್ನಿರ್ಮಿಸಲಾಯಿತು.
ಕಾಂತೇರಿ ಧೂಮಾವತಿ ಚಾವಡಿ
೨೫-೦೪-೧೯೯೯ ರಂದು ಕುಟುಂಬಿಕರು ಸೇರಿ ವಿಜೃಂಭಣೆಯಿಂದ ಬ್ರಹ್ಮಕಲಶ ನಡೆಯಿತು.
೦೮-೦೨-೨೦೦೦ - ೦೯-೦೨-೨೦೦೦ ವರೆಗೆ ವಿಜೃಂಭಣೆಯಿಂದ ಧರ್ಮನೇಮೋತ್ಸವವು ನಡೆಯಿತು.
ಕಾಂತೇರಿ ಧೂಮಾವತಿಯ ಗುಂಡದೊಳಗೆ ಧೂಮಾವತಿಗೆ ಬಂಗಾರದ ನಾಲಗೆಯಿಂದ ಕೂಡಿದ ಮುಗವಿದೆ ಜೊತೆಗೆ ಅಗಲವಾದ ಮತ್ತು ಉದ್ದ ಇರುವ ಬೆಳ್ಳಿಯ ಖಡ್ಗ ಜುಮಾದಿಗಿದ್ದು, ಅಗಲ ಮತ್ತು ಉದ್ದದಲ್ಲಿ ಕಡಿಮೆ ಇರುವ ಬೆಳ್ಳಿಯ ಖಡ್ಗವು ಬಂಟನದ್ದಾಗಿದೆ. ಮನೆಯ ದೈವದ ಗುಂಡದ ಒಳಗೆ ಗಡಿಹಿಡಿದವರು (ಮಾಡ) ಅಥವಾ ಪೆಜತ್ತಾಯರು (ಬ್ರಾಹ್ಮಣರು) ಅಥವಾ ಮುಕ್ಕಾಲ್ದಿಯು ಹೋಗಬಹುದು. ಬೇರೆ ಯಾರು ಒಳ ಹೋಗುವ ಹಾಗಿಲ್ಲ.
ಕಾಂತೇರಿ ಧೂಮಾವತಿಯ ಗುಂಡ
ಗುತ್ತಿನ ಚಾವಡಿಯಲ್ಲಿ ಸತ್ಯ ದೇವತೆಯ ಸಾನಿಧ್ಯವಿದೆ. ಮೊದಲು ಬರೀ ಚಿಕ್ಕ ಮನೆ ಇತ್ತು. ೧೯೯೦ ರಲ್ಲಿ ಕುಟುಂಬಿಕರೆಲ್ಲಾ ಒಟ್ಟಾಗಿ ಮಂಚ, ಬೆಳ್ಳಿಯಮೂರ್ತಿ ಮಾಡಿ ಬ್ರಹ್ಮ ಕಲಶ ಮಾಡಲಾಯಿತು.
ಸತ್ಯ ದೇವತೆ
ಮನೆಯ ಎಡಭಾಗದ ಎತ್ತರ ಪ್ರದೇಶದಲ್ಲಿ ಪಿಲಿಚಾಮಂಡಿ ಮತ್ತು ಬ್ರಹ್ಮನ್ ದೇವತೆಯ ಸ್ಥಾನಗಳಿವೆ. ಹುಲಿ ಚಾಮುಂಡಿಯು ದೇವಿಯ ಅಂಶವಾಗಿದೆ. ಈ ದೈವವು ಬಾಳೊಳಿನಾಡಿನ ಮನೆಯವರ ಆರಾಧ್ಯ ದೈವವಾಗಿತ್ತು.
ದೈವ ಬಂದ ದಾರಿ
ಗುತ್ತಿನ ಗಡಿ ಬೂಲ್ಯವನ್ನು ಪಡೆಯಬೇಕೆಂದು ಮಂಜು ಪೂಂಜರು ಪುತ್ತೆ(ಪುತ್ತಿಗೆ)ಯ ಊರಿನ ಅರಸರಲ್ಲಿಗೆ ಹೋಗುತ್ತಾರೆ. ಯಾವ ಕಾರ್ಯಕ್ಕಾಗಿ ಬಂದಿರುವೆ ಎಂದು ಅರಸರು ಕೇಳುವಾಗ ಮಂಜು ಪೂಂಜರು ಒಂದು ಗುತ್ತಿನ ಗಡಿ ಬೂಲ್ಯವನ್ನು ಕೊಡಬೇಕೆಂದು ಕೇಳುತ್ತಾರೆ.
ಅದಕ್ಕೆ ಅರಸರು "ಏದೇಕಿ ನಡ್ಕ ಆಗಬಹುದಾ? ಕುಂದೋಡಿ ಬಾವ ಆಗಬಹುದಾ? ಅವನೊಚ್ಚಿ ಬರ್ಕೆ ಆಗಬಹುದಾ?" ಎಂದು ಕೇಳಿದಾಗ ಮಂಜು ಪೂಂಜರು "ಕೊಡುವುದಾದರೆ ತುಂಬೆ ಜಾಲ ಗುತ್ತಿನ ಗಡಿ ಬೂಲ್ಯ ಕೊಡಿ" ಎಂದು ಕೇಳುತ್ತಾರೆ.
ಒಂದು ತಿಂಗಳ ನಂತರ ಗಡಿ ಬೂಲ್ಯವನ್ನು ಪಡೆದ ಮಂಜು ಪೂಂಜರು ಸುಟ್ಟು ಹೋದ ಗುಡ್ಡದಂತ ಜಾಗವನ್ನು ದೈವ ದೇವರ ಕೃಪೆಯಿಂದ ಸಂಪತ್ತುಳ್ಳ ಸ್ಥಳವನ್ನಾಗಿ ಮಾಡಿದರು.
ಆದರೆ ಸ್ವಲ್ಪ ಸಮಯದಲ್ಲೆ ಊರಿನಲ್ಲಿ ಕಳ್ಳರ ಸಂಖ್ಯೆ ಜಾಸ್ತಿಯಾಯಿತು. ತಾನು ಬೆಳೆಸಿದ ಬೆಳೆಯನ್ನು ಕಳ್ಳರು ಕದ್ದುಕೊಂಡು ಹೋಗುತ್ತಿದ್ದರು. ಎಷ್ಟೇ ಪ್ರಯತ್ನ ಮಾಡಿದರೂ ಕಳ್ಳರ ಕಾಟವನ್ನು ತಪ್ಪಿಸಿಕೊಳ್ಳಲಾಗಲಿಲ್ಲ. ಮಂಜು ಪಂಜರಿಗೆ. ತಾನು ಬೆಳೆದ ಬೆಳೆಯನ್ನು ರಕ್ಷಿಸಬೇಕೆಂದು ಯೋಚಿಸಿದರು. ಅದಕ್ಕಾಗಿ ತಾನು ಬೆಳೆಸಿದ ಬೆಳೆಯ ಉಳಿವಿಗಾಗಿ ಬಾಳೊಳಿ ನಾಡಿಗೆ ಹೋಗಿ ತನ್ನ ಭಾವ ಬಾಳೊಳಿಯಲ್ಲಿ ದೈವವನ್ನು ಯಾಚಿಸಿದರು.
ಇದಕ್ಕೆ ಬಾಳೊಳಿಯು ಒಪ್ಪಿದಾಗ ಮಂಜುಪೂಂಜರು ಬಾಳೊಳಿಯ ಪ್ರೀತಿಯ ಕುಲ ದೈವವಾದ ಹುಲಿ ಚಾಮುಂಡಿಯನ್ನು ಕೇಳಿದರು. ಆದರೆ ಬಾಳೊಳಿಯು ಆ ದೈವವನ್ನು ಕೊಡಲು ನಿರಾಕರಿಸಿದಾಗ, ಮಂಜು ಪೂಂಜರು ಹಣದ ಆಮಿಷ ಒಡ್ಡಿದಾಗ ಬಾಳೊಳಿ ನಾಡಿನ ಬಾಳೊಳಿಯು ದೈವದ ಭಕ್ತಿ ಕಡಿಮೆ ಆಗಿ ಬಂಗಾರದ ಆಸೆಯು ಹೆಚ್ಚಾಗಿ ದೈವವನ್ನು ಕೊಡಲು ಒಪ್ಪಿದರು. ಅವರು ವೀಳ್ಯದೆಲೆಯಲ್ಲಿ ಹುಲಿ ಚಾಮುಂಡಿಯ ರೂಪ ಬರೆದು ಕೊಟ್ಟರು. ಬಂಗಾರದ ಪ್ರೀತಿಯೇ ಹೆಚ್ಚಾಗಿ ದೈವದ ಭಕ್ತಿ ಕಡಿಮೆ ಆದ ಬಾಳೊಳಿಯ ಸಂತಾನವನ್ನು ಹುಲಿ ಚಾಮುಂಡಿಯು ಅಳಿಸಿ ಮಂಜು ಪೂಂಜರೊಂದಿಗೆ ತುಂಬೆ ಮಜಾಲಗುತ್ತಿಗೆ ಬರುತ್ತದೆ. ತುಂಬೆ ಜಾಲಗುತ್ತಿನಲ್ಲಿ ಮಂಜುಪೂಂಜರು ದೈವಕ್ಕೆ ಚಾವಡಿಯನ್ನು ಕಟ್ಟಿಸುತ್ತಾರೆ.
ತುಂಬೆ ಜಾಲಗುತ್ತಿಗೆ ಬಂದಿರುವಂತಹ ಕಷ್ಟವನ್ನು ಪರಿಹರಿಸಿ ಸತ್ಯದ ದೈವ ಎಂದು ಹುಲಿ ಚಾಮುಂಡಿಯು ಹೇಳಿಸಿಕೊಂಡನು. ದೈವವು ಇಲ್ಲಿಂದ ಮುಂದುವರಿದು ತನಗೆ ಇನ್ನೊಂದು ಊರು ಬೇಕೆಂದು ಪೆರಾರದ ಊರಿಗೆ ಬಂತು. ಆ ಊರಿನಲ್ಲಿ ಅತೀ ಪ್ರಬಲವಾದ ಬಲವಾಂಡಿ ದೈವವು ಉಳಿದ ಯಾವ ದೈವಗಳಿಗೂ ಪೆರಾರ ಊರಿನಲ್ಲಿ ಅವಕಾಶ ಉಳಿಯಲು ಅವಕಾಶ ನೀಡುತ್ತಿರಲಿಲ್ಲ. ಆದರೆ ಹುಲಿ ಚಾಮುಂಡಿ ದೈವ ಪಟ್ಟುಬಿಡದೆ ತನಗೆ ಸ್ಥಾನ ನೀಡಬೇಕೆಂದು ಛಲ ಹಿಡಿಯಿತು. ಆಗ ಬಲವಾಂಡಿ ದೈವವು ಕರಾರನ್ನು ಹಾಕಿತು. ಸತ್ಯದ ದೈವ ಆಗಿ ನನ್ನ ರಾಜ್ಯಕ್ಕೆ ಬರಬೇಕೆಂಬ ಅಪೇಕ್ಷೆ ಇದ್ದರೆ
೧) ಪಾದೆಯ (ಪತ್ತ್) ಹಿಡಿತವನ್ನು ತೆಗೆ
೨) ಒನಕೆ (ಉಜ್ಜೆರ್)ನ ನಾರನ್ನು ತೆಗೆ
೩) ಸತ್ತು ಹೋದ ಮಗು (ಬಾಲೆ) ಸೇಮುದರನ್ನು ಜೀವ ಮಾಡಿಕೊಡು
೪) ನಿನ್ನ ಬಾಳೊಳಿ ನಾಡಿನ ಕೈಯ ಖಡ್ಗವನ್ನು (ಕರ್ಸಲೆ) ಮರಿ ಕೊಟ್ಟ ಅಂಗಳಕ್ಕೆ ಹಾಕು. ಹೀಗೆ ಮಾಡಿದರೆ ನಿನಗೆ ನನ್ನ ಊರಿನಲ್ಲಿ ಇರಲು ಅವಕಾಶ ಮಾಡಿಕೊಡುತ್ತೇನೆ ಎಂದಿತು ಬಲವಾಂಡಿ ದೈವ.
ಕ್ಷಣಾರ್ಧದಲ್ಲೇ ಹುಲಿ ಚಾಮುಂಡಿಯು ಪಾದೆಯ ಹಿಡಿತವನ್ನು ತೆಗೆಯಿತು, ಒನಕೆಯ (ಉಜ್ಜೆರಿನ) ನಾರನ್ನು ತೆಗೆಯಿತು, ಸೇಮುದರನ್ನು ಜೀವ ಮಾಡಿತು, ತನ್ನ ಕೈಯ ಖಡ್ಗ (ಕರ್ಸಲೆಯನ್ನು) ಮರಿಮುಟ್ಟ ಅಂಗನಕ್ಕೆ ಇಳಿಸಿತು. ಅಷ್ಟು ಹೊತ್ತಿಗೆ ತನ್ನಂತೆ ಪ್ರಬಲವಾದ ದೈವ ಎಂದು ಅರಿತ ಬಲವಾಂಡಿಯು ಮಾತಿನಂತೆ "ಒಂದು ದಿನದ ಎರಡು ನೇಮ ನಮಗೆ, ಒಂದು ದಿನದ ಒಂದು ನೇಮ ನಿನಗೆ, ಬಂಟನೇಮ ನಿನಗೆ, ಬಂಡಿ ನಿನಗೆ, ಹಾಕಿದ ಹರಕೆ ನಿನಗೆ, ಆಯ ನ್ಯಾಯ ನಿನಗೆ, ಗಡಿ ನುಡಿ ನಿನಗೆ" ಎಂದು ಹೇಳಿತು.
ಹೀಗೆ ಪೆರಾರದಲ್ಲಿ ಸತ್ಯದ ದೈವ ಎಂದು ಮೆರೆಯುತ್ತ ಬಂದ ಹುಲಿಚಾಮುಂಡಿಯು ಇನ್ನೂ ಸತ್ಯದ ರಾಜ್ಯ ಬೇಕು ಎಂದು ಪರರ ಊರಿಂದ ಮುಂದುವರಿದು, ಬಲದಲ್ಲಿ ಬ್ರಹ್ಮರನ್ನು ಹಾಗೂ ಎಡದಲ್ಲಿ ಬ್ರಹ್ಮನ್ ದೇವತೆಯನ್ನು ಇರಿಸಿ ಪಶ್ಚಿಮ (ಪಡ್ಡಾಯಿ) ಸಮುದ್ರ ಸ್ನಾನ ಮಾಡಲು ಬಂದಾಗ ಭಟ್ರಗೋಳಿಯಲ್ಲಿ ಬ್ರಹ್ಮರನ್ನು ನಿಲ್ಲಿಸುತ್ತಾನೆ.
ಭಟ್ರಗೋಳಿ ಬ್ರಹ್ಮಸ್ಥಾನ
ಅಲ್ಲಿಂದ ಮುಂದುವರಿದು ಸಮುದ್ರ ಸ್ನಾನ ಮಾಡಿ ಕಾಯರ್ ಕಟ್ಟೆಗೆ ಬಂದಾಗ ಹಾಲಿಗೆ ಹಾಲಿರುವಂತಹ ನೀರಿಗೆ ನೀರಿರುವಂತಹ ಪೆರ್ಮುದೆ ಗ್ರಾಮ ಕಣ್ಣಿಗೆ ಗೋಚರಿಸಿತು.
ಪೆರ್ಮುದೆ ಗ್ರಾಮ

ಅಲ್ಲಿಂದ ದೈವವು ಒಂದು ಹೆಜ್ಜೆಯನ್ನು ತ್ಯಾಂಪರ ಪಾದೆಗೆ ಇಟ್ಟಿತು. ಆ ಹೊತ್ತಿಗೆ ದೊಡ್ಡದಾದ ಹೆಬ್ಬಾವು ಇಡೀ ಪೆರ್ಮುದೆ ಊರನ್ನು ನುಂಗಲು ಬಂದಾಗ ಹುಲಿಚಾಮುಂಡಿ ತನ್ನ ಆಯುಧದಿಂದ ಆ ಹಾವನ್ನು ಕೊಚ್ಚಿ ಕೊಚ್ಚಿ ಹಾಕಿತು.
ತ್ಯಾಂಪರ ಪಾದೆ

ಈಗಲೂ ಸಹ ಆ ಪಾದೆಯಲ್ಲಿ ಕೊಚ್ಚಿದ ಗುರುತುಗಳಿವೆ. ಅಲ್ಲಿ ಸೋಮನಾಥ ದೇವರ ಒಪ್ಪಿಗೆ ಪಡೆದು ನೆಲೆಯಾಗಲು ತನ್ನ ಒಂದು ಹೆಜ್ಜೆಯನ್ನು ಬೊಳ್ಳೊಳ್ಳಿಮಾರುಗುತ್ತಿನ ಮಂಜಪ್ಪ ಬಾಕ್ಯಾರ್ ಗದ್ದೆಯ ಮಂಜಪ್ಪ ಪಾದೆಗೆ ಇರಿಸಿತು.
ಮಂಜಪ್ಪ ಬಾಕ್ಯಾರು

ಮಂಜಪ್ಪ ಪಾದೆ

ಆ ಹೊತ್ತಿಗೆ ಮಾಯೆಯಿಂದ ತಾನು ಬಂದ ವಿಷಯ ಮನೆಯವರಿಗೆ ತಿಳಿಯುವುದಕ್ಕಾಗಿ, ತೊಟ್ಟಿಲಿನ ಮಗುವಿಗೆ ಕಾಯಿಲೆ, ಹಟ್ಟಿಯ ದನಕರುಗಳಿಗೆ ಕಾಯಿಲೆ ಕಾಣಿಸಿತು. ಜೋತಿಷ್ಯರಲ್ಲಿ ಕೇಳಿದಾಗ ಹುಲಿಚಾಮುಂಡಿ ದೈವ ಬಂದಿದೆ. ಅದಕ್ಕೆ ಹಾಗೂ ಬ್ರಹ್ಮನ್ ದೇವತೆಗೆ ಸಾನ ಕಟ್ಟಿಸಿ ನಂಬಬೇಕೆಂದು ಕಾಣಿಸಿತು.
ಅಂತೆಯೇ, ಬೊಳ್ಳೊಳ್ಳಿಮಾರಿನಲ್ಲಿ ೭ ಅಡಿ ಉದ್ದದ ಸಾನ ಹುಲಿಚಾಮುಂಡಿಗೂ, ೭ ಅಡಿ ಎತ್ತರದ ಪಚ್ಚೋಲಿ ಮಾಡಿನ ಸಾನವನ್ನು ದೇವತೆಗೆ ಕಟ್ಟಿಸಿದರು.
ಬೊಳ್ಳೊಳ್ಳಿಮಾರು ಗುತ್ತು ಹುಲಿಚಾಮುಂಡಿ ಹಾಗೂ ಬ್ರಹ್ಮನ್ ದೇವತೆ ಸಾನ

ಸತ್ಯದ ದೈವ ಹುಲಿಚಾಮುಂಡಿಗೆ ಬೊಳ್ಳೊಳ್ಳಿಮಾರು ಗುತ್ತಿನಲ್ಲಿ ಹಾಳೆಯ ಮುಖ ಮಾಡಿ ವಿಜೃಂಭಣೆಯಿಂದ ಧರ್ಮ ನೇಮವನ್ನು ಕೊಟ್ಟರು.
ಈ ನೇಮವನ್ನು ನೋಡಲೆಂದು ಬಂದಿರುವ ಮುಕ್ಕೋಡಿ ಮನೆಯ ದೂಮ ಎಂಬ ಅಲ್ಲಿಯ ಯಜಮಾನ ಪ್ರಸಾದವನ್ನು ಸ್ವೀಕರಿಸುವಾಗ ದೆವವು ಮುಕ್ಕೋಡಿ ದೂಮನಲ್ಲಿ ನಾನು ನಿನ್ನೊಂದಿಗೆ ಬರುವೆ. ನಾನು ಬೊಳ್ಳೊಳ್ಳಿ ಮಾರು ಗುತ್ತಿನಲ್ಲಿಯೇ ಉಳಿದರೆ ಅವರ ಮನೆ ದೈವವಾಗುತ್ತೇನೆ. ನಾನು ರಾಜ್ಯದ ದೈವ ಆಗಬೇಕು ಅದ್ದರಿಂದ ನಿನ್ನ ಮನೆಯಲ್ಲಿ ನನ್ನನ್ನು ನಂಬಿ ಸ್ಥಾನ ಕಟ್ಟಿಸಿ ನಿನ್ನ ಮನೆಯ ನನಗೊಂದು ಮಾಣಿ (ಪಾತ್ರಿ) ಬೇಕೆಂದು ಕೇಳಿತು. ಆತ ಸಂತೋಷವಾಗಿ ಒಪ್ಪಿದ. ದೈವವು ಆತನೊಂದಿಗೆ ಹೊರಟಿತು. ತನ್ನ ಒಂದು ಪಾದವನ್ನು ಮಂಜೊಟ್ಟಿ ಪಾದೆಗೆ ಇಟ್ಟಿತು.
ಮಂಜೊಟ್ಟಿ ಪಾದೆ

ಇನ್ನೊಂದು ಪಾದವನ್ನು ಕಲ್ಲಂಡ ಪಾದೆಗೆ ಇಟ್ಟು ಮುಕ್ಕೊಡಿ ಪ್ರವೇಶಿಸಿತು. ಮುಕ್ಕೋಡಿಯಲ್ಲಿ ವಳ ಗುಡ್ಡ ಸಾನವನ್ನು ಗ್ರಾಮಸ್ಥರಿಂದ ನಿರ್ಮಿಸಿ ಅಲ್ಲೂ ಕಾಲಾವಧಿ ಸೇವೆಯನ್ನು ಸ್ವೀಕರಿಸಿ ಗ್ರಾಮ ದೈವವಾಗಿ ನೆಲೆಯಾಯಿತು.
ಮುಕ್ಕೋಡಿ ವಳ ಗುಡ್ಡ ಸಾನ
ಪಾರಾಳೆಗುತ್ತು ಪಾಲೆದಡಿ ಸಾನದಲ್ಲಿ ಹುಲಿಚಾಮುಂಡಿ ದೈವ ಬರುವುದಕ್ಕೆ ಮುಂಚೆ ಆ ದೈವಗಳಿಗೆ ನೇಮವಾಗುತ್ತಿತ್ತು. ಆ ಹೊತ್ತಿಗೆ ಪಿಲಿಚಾಮುಂಡಿ ದೈವವು ಪಾಲೆಯ ಮರದಲ್ಲಿ ಬಂದು ಉಳಿದ ದೈವಗಳಿಗೆ ನೇಮವಾಗುವಾಗ ನೇಮಕ್ಕೆ ಉರಿಸಿದ ದೀಪವನ್ನು ನಂದಿಸಿತು. ಕಾರಣವೇನೆಂದು ಕೇಳಿದಾಗ ಉಳಿದ ದೈವಗಳು ಹುಲಿಚಾಮುಂಡಿ ದೈವ ತನಗೂ ಸಹ ಇಲ್ಲಿ ನೇಮ ಕೊಡಬೇಕೆಂದು ಕೇಳುತಿದೆ ಎಂದರಿತು ಅದಕ್ಕೆ ಕೊನೆಯ ತಮ್ಮಣದ ದೊಚ್ಚಿ (ಔತಣದ ಊಟ) ನೇಮ ಕೊಡಲು ನಿರ್ಧರಿಸಿ ಅಲ್ಲಿಂದ ಪಾಲೆದಡಿ ಸಾನದಲ್ಲಿ ಪಿಲಿಚಾಮುಂಡಿ ದೈವಕ್ಕೆ ಕೊನೆಯ ನೇಮವು ಶಾಶ್ವತವಾಯ್ತು.
ಬೊಳ್ಳೊಳ್ಳಿಮಾರು ಗುತ್ತಿನಿಂದ ಹುಲಿ ಚಾಮುಂಡಿಯು ಗ್ರಾಮದ ದ್ಯೆವ ಆಗುವ ಉದ್ದೇಶದಿಂದ ಹೊರಡುವ ವೇಳೆ, ದೇವತೆಯು "ನನಗೇನಿದೆ" ಎಂದು ಕೇಳಿದಾಗ ಚಾಮುಂಡಿಯು ನನ್ನ ಒಂದು ದಿವಸದ ನೇಮದಂದು ಮೂರು ಸುತ್ತು ಬಳಿ ನಿನಗೆ" ಎಂದಿತ್ತು. ಅದರಂತೆ ಮೂರು ಸುತ್ತು ಬಳಿ ದೇವತೆಗೂ ವಿಜ್ರಂಭಣೆಯಿಂದ ನಡೆಯುತ್ತದೆ.
ಪಾಲೆದಡಿ ಸಾನ
ಬೊಳ್ಳೊಳ್ಳಿಮಾರಿನಲ್ಲಿ ಹುಲಿಚಾಮುಂಡಿ ದೈವದ ದರ್ಶನ ಮಾಡುವುದಾದರೆ ಕೈಯಲ್ಲಿ ಹಿಂಗಾರದ ಹಾಳೆಯನ್ನು ಕೊಟ್ಟು ದರ್ಶನ ಬರಿಸುವ ಕ್ರಮ ಇದೆ.
ಹುಲಿಚಾಮುಂಡಿಗೆ ಬೊಳ್ಳೊಳ್ಳಿಮಾರು ಗುತ್ತು ಪಾದ ಮಂಜೊಟ್ಟಿ ಬಾಳಿಕೆ ಎದೆ ಮುಕ್ಕೊಡಿ ತಲೆಯಾಗಿದೆ. ಹುಲಿಚಾಮುಂಡಿಗೆ ಮುಕ್ಕೋಡಿಗಿಂತಲೂ ಬೊಳ್ಳೊಳ್ಳಿಮಾರು ಗುತ್ತು ಪ್ರಧಾನ ಮನೆಯೆಂದು ಅಷ್ಟಮಂಗಳ ಪ್ರಶ್ನೆಯಲ್ಲಿ ಕಂಡು ಬಂದಿತ್ತು.
ಹಿಂದಿನ ಕಾಲದಿಂದಲೂ ಹುಲಿ ಚಾಮುಂಡಿ ಪಾತ್ರಿಗಳು ನೇಮದಲ್ಲಿ ಗುತ್ತುಗಳ ಯಜಮಾನರನ್ನು ಕರೆಯುವಾಗ ಮಾಡರನ್ನು "ಮಾಡೆರೇ" ಎಂದು ದೊಡ್ಡ ದನಿಯಲ್ಲಿ ಕರೆದು ಬೊಳ್ಳೊಳ್ಳಿಮಾರಿಗೂ ಹುಲಿ ಚಾಮುಂಡಿ ದೈವಕ್ಕೂ ಇರುವ ಸಂಬಂಧವನ್ನು ತೋರಿಸುತ್ತಿದ್ದರು.
ಮನೆಯ ಈಶಾನ್ಯ ಭಾಗದಲ್ಲಿರುವ ಮಂಜಪ್ಪ ಬಾಕ್ಯರ್ ಗದ್ದೆ ಪಿಲಿ ಚಾಮುಂಡಿ ಪಾದವಿರಿಸಿದ ಸ್ಥಳ. ಈ ಗದ್ದೆಯಲ್ಲಿ ಚಪ್ಪರ ಬಲಿ ನೇಮ ದೊಂಪದ ಬಲಿ ಆಗುವ ಕಾರಣ ಇಲ್ಲಿ ತರಕಾರಿ ಮಾಡುವುದಕ್ಕೂ ಚಪ್ಪರ ಹಾಕಬಾರದು.
ಹುಲಿ ಚಾಮುಂಡಿ ಸಾನದ ಎಡಭಾಗದಲ್ಲಿ ಬ್ರಹ್ಮನ್ ದೇವತೆಯ ಸಾನವಿದೆ. ಇದು ಏಳು ಅಡಿ ಎತ್ತರವಿದ್ದು ಪಚ್ಚೋಲಿ ಮಾಡವನ್ನು ಹೊಂದಿದೆ. ೧೯೮೭ರಲ್ಲಿ ಬ್ರಹ್ಮನ್ ದೇವತೆಗೆ ಹೊಸದಾಗಿ ಸಾನವನ್ನು ಕಟ್ಟಲಾಯಿತು.
ಬ್ರಹ್ಮನ್ ದೇವತೆ
ಬೊಳ್ಳೊಳ್ಳಿಮಾರು ಗುತ್ತಿನ ಹಿರಿಯರ ತಿಳುವಳಿಕೆಯ ಪ್ರಕಾರ ಒಂದು ಚಪ್ಪರ ಬಲಿನೇಮವು ಮಂಜಪ್ಪ ಬಾಕೂರಲ್ಲಿ ನಡೆದಿತ್ತು. ಇದು ಹರಕೆಯ ಚಪ್ಪರ ಬಲಿನೇಮವಾಗಿತ್ತು. ಸಿದ್ಧಣ್ಣ ಮಾಡರಿಗೆ ಹಲವು ವರ್ಷ ಮಕ್ಕಳಾಗದೆ ಇದ್ದಾಗ ಮಕ್ಕಳಾದರೆ ಚಪ್ಪರ ಬಲಿನೇಮ ಕೊಡುವುದಾಗಿ ಹರಕೆ ಹೇಳಿದರು. ಆದರೆ ಹರಕೆಯನ್ನು ಅವರಿಂದ ಸಲ್ಲಿಸಲಾಗಲಿಲ್ಲ. ಅವರ ನಂತರ ಅವರ ಅಳಿಯ ಆ ಸೇವೆಯನ್ನು ಒಪ್ಪಿಸಿದರು.
೧೯೮೭ರಲ್ಲಿ ಬ್ರಹ್ಮನ್ ದೇವತೆಗೆ ಹೊಸದಾಗಿ ಸಾನ ಕಟ್ಟಿಸಿ ಕಾಂತೇರಿ ಧೂಮಾವತಿ ಹಾಗೂ ಪಿಲಿಚಾಮುಂಡಿಗೆ ದರ್ಶನ ಮಾಡಿಸಿದಾಗ ದೈವವು "ತಾನು ಬೊಳ್ಳೊಳ್ಳಿಮಾರು ಗುತ್ತಿನಲ್ಲಿ ಸೇವೆಯನ್ನು ಸಂತೋಷವಾಗಿ ಸ್ವೀಕರಿಸಲಿಲ್ಲ. ಆದ್ದರಿಂದ ನಮಗೆ ಬೇರೆಯೇ ನೇಮ ಕೊಡಬೇಕೆಂದು" ಕೇಳಿತ್ತು. ಕಾರಣ ಸೇವೆ ನಡೆಯುವ ಹೊತ್ತು ಬೊಳ್ಳೊಳ್ಳಿ ಮಾರುಗುತ್ತಿನ ಕುಟುಂಬಿಕರು ಆಮೆಂii ಕಾರಣ ದೂರವೇ ನಿಂತಿದ್ದರು. ಆ ಕಾರಣಕ್ಕಾಗಿ ೮-೨-೨೦೦೦ ಹಾಗೂ ೯-೨-೨೦೦೦ದಂದು ವಿಜೃಂಭಣೆಯಿಂದ ಧರ್ಮನೇಮ ನಡೆಸಲಾಯಿತು.
ಪಿಲಿಚಾಮುಂಡಿ ಸಾನದ ಎಡಭಾಗದಲ್ಲಿ ಕಡಲ್ತಾಯ ಪಂಜುರ್ಲಿಯ ಸಾನಿಧ್ಯವಿದೆ. ಇದು ಅನಾದಿಯ ಕುಟುಂಬದ ದೈವದಲ್ಲಿ ಎಷ್ಟೇ ತಲೆಮಾರುಗಳ ಹಿಂದೆ ಮುಕ್ಕೋಡಿಯಲ್ಲಿ ನಡೆಯುವ ನೇಮಕ್ಕೆ ಹೋದವರು ರಾತ್ರಿ ಹಿಂದೆ ಬರುವಾಗ ನೇಗಿಲಿಗಾಗಿ ಮುಕ್ಕೋಡಿಯಿಂದ ಒಂದು ತುಂಡು ಮರವನ್ನು ತಂದಿದ್ದರಂತೆ ಆ ಮರದ ತುಂಡಿನ ಒಟ್ಟಿಗೆ ಮುಕ್ಕೋಡಿಯಲ್ಲಿದ್ದ ಕಡಲ್ತಾಯ ಪಂಜುರ್ಲಿ ಬಂದು ಪಿಲಿ ಚಾಮುಂಡಿಯ ಎಡ ಭಾಗದಲ್ಲಿರುತ್ತೇನೆ ನನಗೊಂದು ಸಾನ ಕಟ್ಟಿಸಬೇಕೆಂದು ಕೇಳಿತು.
ಮೊದಲು ಮಣ್ಣಿನಿಂದ ಕಟ್ಟಿದ ಈ ಸಾನ ೨೦೦೩ ರಲ್ಲಿ ಆಯ ಪ್ರಮಾಣ ಪ್ರಕಾರ ಹೊಸದಾಗಿ ಕಟ್ಟಲಾಯ್ತು.
ಕಡಲ್ತಾಯ ಪಂಜುರ್ಲಿ
ಮನೆಯ ನೈಋತ್ಯ ಭಾಗದಲ್ಲಿ ವರ್ತೆ ಪಂಜರ್ಲಿ ಹಾಗೂ ಜಾಗದ ಪಂಜುರ್ಲಿ ದೈವದ ಸಾನಿಧ್ಯಗಳಿವೆ. ಆದಿಯಲ್ಲಿ ಇದಕ್ಕೆ ಮುಳಿಹುಲ್ಲಿನ ಸಾನವಿತ್ತಂತೆ. ಅನಂತರ ಇದು ಗಾಳಿ ಮಳೆಗೆ ಬಿದ್ದು ಹೋಯ್ತು. ಅನಂತರ ಅಲ್ಲಿ ಬರೀ ಕಲ್ಲುಗಳಿಗೆ ಆರಾಧನೆ ಮಾಡಲಾಗುತ್ತಿತ್ತು. ೨೦೦೦ ಇಸವಿಯಲ್ಲಿ ಈ ದೈವಗಳಿಗೂ ಸಾನ ಕಟ್ಟಿಸಲಾಯಿತು.
ವರ್ತೆ ಪಂಜರ್ಲಿ ಹಾಗೂ ಜಾಗದ ಪಂಜುರ್ಲಿ
ಮನೆಯ ವಾಯುವ್ಯ ಮೂಲೆಯಲ್ಲಿ ರಾಹು ದೈವದ ಸಾನಿಧ್ಯವಿದೆ.
ರಾಹು ಪೀಠ
ಅದಕ್ಕೆ ಅರಸರು "ಏದೇಕಿ ನಡ್ಕ ಆಗಬಹುದಾ? ಕುಂದೋಡಿ ಬಾವ ಆಗಬಹುದಾ? ಅವನೊಚ್ಚಿ ಬರ್ಕೆ ಆಗಬಹುದಾ?" ಎಂದು ಕೇಳಿದಾಗ ಮಂಜು ಪೂಂಜರು "ಕೊಡುವುದಾದರೆ ತುಂಬೆ ಜಾಲ ಗುತ್ತಿನ ಗಡಿ ಬೂಲ್ಯ ಕೊಡಿ" ಎಂದು ಕೇಳುತ್ತಾರೆ.
ಒಂದು ತಿಂಗಳ ನಂತರ ಗಡಿ ಬೂಲ್ಯವನ್ನು ಪಡೆದ ಮಂಜು ಪೂಂಜರು ಸುಟ್ಟು ಹೋದ ಗುಡ್ಡದಂತ ಜಾಗವನ್ನು ದೈವ ದೇವರ ಕೃಪೆಯಿಂದ ಸಂಪತ್ತುಳ್ಳ ಸ್ಥಳವನ್ನಾಗಿ ಮಾಡಿದರು.
ಆದರೆ ಸ್ವಲ್ಪ ಸಮಯದಲ್ಲೆ ಊರಿನಲ್ಲಿ ಕಳ್ಳರ ಸಂಖ್ಯೆ ಜಾಸ್ತಿಯಾಯಿತು. ತಾನು ಬೆಳೆಸಿದ ಬೆಳೆಯನ್ನು ಕಳ್ಳರು ಕದ್ದುಕೊಂಡು ಹೋಗುತ್ತಿದ್ದರು. ಎಷ್ಟೇ ಪ್ರಯತ್ನ ಮಾಡಿದರೂ ಕಳ್ಳರ ಕಾಟವನ್ನು ತಪ್ಪಿಸಿಕೊಳ್ಳಲಾಗಲಿಲ್ಲ. ಮಂಜು ಪಂಜರಿಗೆ. ತಾನು ಬೆಳೆದ ಬೆಳೆಯನ್ನು ರಕ್ಷಿಸಬೇಕೆಂದು ಯೋಚಿಸಿದರು. ಅದಕ್ಕಾಗಿ ತಾನು ಬೆಳೆಸಿದ ಬೆಳೆಯ ಉಳಿವಿಗಾಗಿ ಬಾಳೊಳಿ ನಾಡಿಗೆ ಹೋಗಿ ತನ್ನ ಭಾವ ಬಾಳೊಳಿಯಲ್ಲಿ ದೈವವನ್ನು ಯಾಚಿಸಿದರು.
ಇದಕ್ಕೆ ಬಾಳೊಳಿಯು ಒಪ್ಪಿದಾಗ ಮಂಜುಪೂಂಜರು ಬಾಳೊಳಿಯ ಪ್ರೀತಿಯ ಕುಲ ದೈವವಾದ ಹುಲಿ ಚಾಮುಂಡಿಯನ್ನು ಕೇಳಿದರು. ಆದರೆ ಬಾಳೊಳಿಯು ಆ ದೈವವನ್ನು ಕೊಡಲು ನಿರಾಕರಿಸಿದಾಗ, ಮಂಜು ಪೂಂಜರು ಹಣದ ಆಮಿಷ ಒಡ್ಡಿದಾಗ ಬಾಳೊಳಿ ನಾಡಿನ ಬಾಳೊಳಿಯು ದೈವದ ಭಕ್ತಿ ಕಡಿಮೆ ಆಗಿ ಬಂಗಾರದ ಆಸೆಯು ಹೆಚ್ಚಾಗಿ ದೈವವನ್ನು ಕೊಡಲು ಒಪ್ಪಿದರು. ಅವರು ವೀಳ್ಯದೆಲೆಯಲ್ಲಿ ಹುಲಿ ಚಾಮುಂಡಿಯ ರೂಪ ಬರೆದು ಕೊಟ್ಟರು. ಬಂಗಾರದ ಪ್ರೀತಿಯೇ ಹೆಚ್ಚಾಗಿ ದೈವದ ಭಕ್ತಿ ಕಡಿಮೆ ಆದ ಬಾಳೊಳಿಯ ಸಂತಾನವನ್ನು ಹುಲಿ ಚಾಮುಂಡಿಯು ಅಳಿಸಿ ಮಂಜು ಪೂಂಜರೊಂದಿಗೆ ತುಂಬೆ ಮಜಾಲಗುತ್ತಿಗೆ ಬರುತ್ತದೆ. ತುಂಬೆ ಜಾಲಗುತ್ತಿನಲ್ಲಿ ಮಂಜುಪೂಂಜರು ದೈವಕ್ಕೆ ಚಾವಡಿಯನ್ನು ಕಟ್ಟಿಸುತ್ತಾರೆ.
ತುಂಬೆ ಜಾಲಗುತ್ತಿಗೆ ಬಂದಿರುವಂತಹ ಕಷ್ಟವನ್ನು ಪರಿಹರಿಸಿ ಸತ್ಯದ ದೈವ ಎಂದು ಹುಲಿ ಚಾಮುಂಡಿಯು ಹೇಳಿಸಿಕೊಂಡನು. ದೈವವು ಇಲ್ಲಿಂದ ಮುಂದುವರಿದು ತನಗೆ ಇನ್ನೊಂದು ಊರು ಬೇಕೆಂದು ಪೆರಾರದ ಊರಿಗೆ ಬಂತು. ಆ ಊರಿನಲ್ಲಿ ಅತೀ ಪ್ರಬಲವಾದ ಬಲವಾಂಡಿ ದೈವವು ಉಳಿದ ಯಾವ ದೈವಗಳಿಗೂ ಪೆರಾರ ಊರಿನಲ್ಲಿ ಅವಕಾಶ ಉಳಿಯಲು ಅವಕಾಶ ನೀಡುತ್ತಿರಲಿಲ್ಲ. ಆದರೆ ಹುಲಿ ಚಾಮುಂಡಿ ದೈವ ಪಟ್ಟುಬಿಡದೆ ತನಗೆ ಸ್ಥಾನ ನೀಡಬೇಕೆಂದು ಛಲ ಹಿಡಿಯಿತು. ಆಗ ಬಲವಾಂಡಿ ದೈವವು ಕರಾರನ್ನು ಹಾಕಿತು. ಸತ್ಯದ ದೈವ ಆಗಿ ನನ್ನ ರಾಜ್ಯಕ್ಕೆ ಬರಬೇಕೆಂಬ ಅಪೇಕ್ಷೆ ಇದ್ದರೆ
೧) ಪಾದೆಯ (ಪತ್ತ್) ಹಿಡಿತವನ್ನು ತೆಗೆ
೨) ಒನಕೆ (ಉಜ್ಜೆರ್)ನ ನಾರನ್ನು ತೆಗೆ
೩) ಸತ್ತು ಹೋದ ಮಗು (ಬಾಲೆ) ಸೇಮುದರನ್ನು ಜೀವ ಮಾಡಿಕೊಡು
೪) ನಿನ್ನ ಬಾಳೊಳಿ ನಾಡಿನ ಕೈಯ ಖಡ್ಗವನ್ನು (ಕರ್ಸಲೆ) ಮರಿ ಕೊಟ್ಟ ಅಂಗಳಕ್ಕೆ ಹಾಕು. ಹೀಗೆ ಮಾಡಿದರೆ ನಿನಗೆ ನನ್ನ ಊರಿನಲ್ಲಿ ಇರಲು ಅವಕಾಶ ಮಾಡಿಕೊಡುತ್ತೇನೆ ಎಂದಿತು ಬಲವಾಂಡಿ ದೈವ.
ಕ್ಷಣಾರ್ಧದಲ್ಲೇ ಹುಲಿ ಚಾಮುಂಡಿಯು ಪಾದೆಯ ಹಿಡಿತವನ್ನು ತೆಗೆಯಿತು, ಒನಕೆಯ (ಉಜ್ಜೆರಿನ) ನಾರನ್ನು ತೆಗೆಯಿತು, ಸೇಮುದರನ್ನು ಜೀವ ಮಾಡಿತು, ತನ್ನ ಕೈಯ ಖಡ್ಗ (ಕರ್ಸಲೆಯನ್ನು) ಮರಿಮುಟ್ಟ ಅಂಗನಕ್ಕೆ ಇಳಿಸಿತು. ಅಷ್ಟು ಹೊತ್ತಿಗೆ ತನ್ನಂತೆ ಪ್ರಬಲವಾದ ದೈವ ಎಂದು ಅರಿತ ಬಲವಾಂಡಿಯು ಮಾತಿನಂತೆ "ಒಂದು ದಿನದ ಎರಡು ನೇಮ ನಮಗೆ, ಒಂದು ದಿನದ ಒಂದು ನೇಮ ನಿನಗೆ, ಬಂಟನೇಮ ನಿನಗೆ, ಬಂಡಿ ನಿನಗೆ, ಹಾಕಿದ ಹರಕೆ ನಿನಗೆ, ಆಯ ನ್ಯಾಯ ನಿನಗೆ, ಗಡಿ ನುಡಿ ನಿನಗೆ" ಎಂದು ಹೇಳಿತು.
ಹೀಗೆ ಪೆರಾರದಲ್ಲಿ ಸತ್ಯದ ದೈವ ಎಂದು ಮೆರೆಯುತ್ತ ಬಂದ ಹುಲಿಚಾಮುಂಡಿಯು ಇನ್ನೂ ಸತ್ಯದ ರಾಜ್ಯ ಬೇಕು ಎಂದು ಪರರ ಊರಿಂದ ಮುಂದುವರಿದು, ಬಲದಲ್ಲಿ ಬ್ರಹ್ಮರನ್ನು ಹಾಗೂ ಎಡದಲ್ಲಿ ಬ್ರಹ್ಮನ್ ದೇವತೆಯನ್ನು ಇರಿಸಿ ಪಶ್ಚಿಮ (ಪಡ್ಡಾಯಿ) ಸಮುದ್ರ ಸ್ನಾನ ಮಾಡಲು ಬಂದಾಗ ಭಟ್ರಗೋಳಿಯಲ್ಲಿ ಬ್ರಹ್ಮರನ್ನು ನಿಲ್ಲಿಸುತ್ತಾನೆ.
ಭಟ್ರಗೋಳಿ ಬ್ರಹ್ಮಸ್ಥಾನ
ಅಲ್ಲಿಂದ ಮುಂದುವರಿದು ಸಮುದ್ರ ಸ್ನಾನ ಮಾಡಿ ಕಾಯರ್ ಕಟ್ಟೆಗೆ ಬಂದಾಗ ಹಾಲಿಗೆ ಹಾಲಿರುವಂತಹ ನೀರಿಗೆ ನೀರಿರುವಂತಹ ಪೆರ್ಮುದೆ ಗ್ರಾಮ ಕಣ್ಣಿಗೆ ಗೋಚರಿಸಿತು.
ಪೆರ್ಮುದೆ ಗ್ರಾಮ
ಅಲ್ಲಿಂದ ದೈವವು ಒಂದು ಹೆಜ್ಜೆಯನ್ನು ತ್ಯಾಂಪರ ಪಾದೆಗೆ ಇಟ್ಟಿತು. ಆ ಹೊತ್ತಿಗೆ ದೊಡ್ಡದಾದ ಹೆಬ್ಬಾವು ಇಡೀ ಪೆರ್ಮುದೆ ಊರನ್ನು ನುಂಗಲು ಬಂದಾಗ ಹುಲಿಚಾಮುಂಡಿ ತನ್ನ ಆಯುಧದಿಂದ ಆ ಹಾವನ್ನು ಕೊಚ್ಚಿ ಕೊಚ್ಚಿ ಹಾಕಿತು.
ತ್ಯಾಂಪರ ಪಾದೆ
ಈಗಲೂ ಸಹ ಆ ಪಾದೆಯಲ್ಲಿ ಕೊಚ್ಚಿದ ಗುರುತುಗಳಿವೆ. ಅಲ್ಲಿ ಸೋಮನಾಥ ದೇವರ ಒಪ್ಪಿಗೆ ಪಡೆದು ನೆಲೆಯಾಗಲು ತನ್ನ ಒಂದು ಹೆಜ್ಜೆಯನ್ನು ಬೊಳ್ಳೊಳ್ಳಿಮಾರುಗುತ್ತಿನ ಮಂಜಪ್ಪ ಬಾಕ್ಯಾರ್ ಗದ್ದೆಯ ಮಂಜಪ್ಪ ಪಾದೆಗೆ ಇರಿಸಿತು.
ಮಂಜಪ್ಪ ಬಾಕ್ಯಾರು
ಮಂಜಪ್ಪ ಪಾದೆ
ಆ ಹೊತ್ತಿಗೆ ಮಾಯೆಯಿಂದ ತಾನು ಬಂದ ವಿಷಯ ಮನೆಯವರಿಗೆ ತಿಳಿಯುವುದಕ್ಕಾಗಿ, ತೊಟ್ಟಿಲಿನ ಮಗುವಿಗೆ ಕಾಯಿಲೆ, ಹಟ್ಟಿಯ ದನಕರುಗಳಿಗೆ ಕಾಯಿಲೆ ಕಾಣಿಸಿತು. ಜೋತಿಷ್ಯರಲ್ಲಿ ಕೇಳಿದಾಗ ಹುಲಿಚಾಮುಂಡಿ ದೈವ ಬಂದಿದೆ. ಅದಕ್ಕೆ ಹಾಗೂ ಬ್ರಹ್ಮನ್ ದೇವತೆಗೆ ಸಾನ ಕಟ್ಟಿಸಿ ನಂಬಬೇಕೆಂದು ಕಾಣಿಸಿತು.
ಅಂತೆಯೇ, ಬೊಳ್ಳೊಳ್ಳಿಮಾರಿನಲ್ಲಿ ೭ ಅಡಿ ಉದ್ದದ ಸಾನ ಹುಲಿಚಾಮುಂಡಿಗೂ, ೭ ಅಡಿ ಎತ್ತರದ ಪಚ್ಚೋಲಿ ಮಾಡಿನ ಸಾನವನ್ನು ದೇವತೆಗೆ ಕಟ್ಟಿಸಿದರು.
ಬೊಳ್ಳೊಳ್ಳಿಮಾರು ಗುತ್ತು ಹುಲಿಚಾಮುಂಡಿ ಹಾಗೂ ಬ್ರಹ್ಮನ್ ದೇವತೆ ಸಾನ
ಸತ್ಯದ ದೈವ ಹುಲಿಚಾಮುಂಡಿಗೆ ಬೊಳ್ಳೊಳ್ಳಿಮಾರು ಗುತ್ತಿನಲ್ಲಿ ಹಾಳೆಯ ಮುಖ ಮಾಡಿ ವಿಜೃಂಭಣೆಯಿಂದ ಧರ್ಮ ನೇಮವನ್ನು ಕೊಟ್ಟರು.
ಈ ನೇಮವನ್ನು ನೋಡಲೆಂದು ಬಂದಿರುವ ಮುಕ್ಕೋಡಿ ಮನೆಯ ದೂಮ ಎಂಬ ಅಲ್ಲಿಯ ಯಜಮಾನ ಪ್ರಸಾದವನ್ನು ಸ್ವೀಕರಿಸುವಾಗ ದೆವವು ಮುಕ್ಕೋಡಿ ದೂಮನಲ್ಲಿ ನಾನು ನಿನ್ನೊಂದಿಗೆ ಬರುವೆ. ನಾನು ಬೊಳ್ಳೊಳ್ಳಿ ಮಾರು ಗುತ್ತಿನಲ್ಲಿಯೇ ಉಳಿದರೆ ಅವರ ಮನೆ ದೈವವಾಗುತ್ತೇನೆ. ನಾನು ರಾಜ್ಯದ ದೈವ ಆಗಬೇಕು ಅದ್ದರಿಂದ ನಿನ್ನ ಮನೆಯಲ್ಲಿ ನನ್ನನ್ನು ನಂಬಿ ಸ್ಥಾನ ಕಟ್ಟಿಸಿ ನಿನ್ನ ಮನೆಯ ನನಗೊಂದು ಮಾಣಿ (ಪಾತ್ರಿ) ಬೇಕೆಂದು ಕೇಳಿತು. ಆತ ಸಂತೋಷವಾಗಿ ಒಪ್ಪಿದ. ದೈವವು ಆತನೊಂದಿಗೆ ಹೊರಟಿತು. ತನ್ನ ಒಂದು ಪಾದವನ್ನು ಮಂಜೊಟ್ಟಿ ಪಾದೆಗೆ ಇಟ್ಟಿತು.
ಮಂಜೊಟ್ಟಿ ಪಾದೆ
ಇನ್ನೊಂದು ಪಾದವನ್ನು ಕಲ್ಲಂಡ ಪಾದೆಗೆ ಇಟ್ಟು ಮುಕ್ಕೊಡಿ ಪ್ರವೇಶಿಸಿತು. ಮುಕ್ಕೋಡಿಯಲ್ಲಿ ವಳ ಗುಡ್ಡ ಸಾನವನ್ನು ಗ್ರಾಮಸ್ಥರಿಂದ ನಿರ್ಮಿಸಿ ಅಲ್ಲೂ ಕಾಲಾವಧಿ ಸೇವೆಯನ್ನು ಸ್ವೀಕರಿಸಿ ಗ್ರಾಮ ದೈವವಾಗಿ ನೆಲೆಯಾಯಿತು.
ಮುಕ್ಕೋಡಿ ವಳ ಗುಡ್ಡ ಸಾನ
ಪಾರಾಳೆಗುತ್ತು ಪಾಲೆದಡಿ ಸಾನದಲ್ಲಿ ಹುಲಿಚಾಮುಂಡಿ ದೈವ ಬರುವುದಕ್ಕೆ ಮುಂಚೆ ಆ ದೈವಗಳಿಗೆ ನೇಮವಾಗುತ್ತಿತ್ತು. ಆ ಹೊತ್ತಿಗೆ ಪಿಲಿಚಾಮುಂಡಿ ದೈವವು ಪಾಲೆಯ ಮರದಲ್ಲಿ ಬಂದು ಉಳಿದ ದೈವಗಳಿಗೆ ನೇಮವಾಗುವಾಗ ನೇಮಕ್ಕೆ ಉರಿಸಿದ ದೀಪವನ್ನು ನಂದಿಸಿತು. ಕಾರಣವೇನೆಂದು ಕೇಳಿದಾಗ ಉಳಿದ ದೈವಗಳು ಹುಲಿಚಾಮುಂಡಿ ದೈವ ತನಗೂ ಸಹ ಇಲ್ಲಿ ನೇಮ ಕೊಡಬೇಕೆಂದು ಕೇಳುತಿದೆ ಎಂದರಿತು ಅದಕ್ಕೆ ಕೊನೆಯ ತಮ್ಮಣದ ದೊಚ್ಚಿ (ಔತಣದ ಊಟ) ನೇಮ ಕೊಡಲು ನಿರ್ಧರಿಸಿ ಅಲ್ಲಿಂದ ಪಾಲೆದಡಿ ಸಾನದಲ್ಲಿ ಪಿಲಿಚಾಮುಂಡಿ ದೈವಕ್ಕೆ ಕೊನೆಯ ನೇಮವು ಶಾಶ್ವತವಾಯ್ತು.
ಬೊಳ್ಳೊಳ್ಳಿಮಾರು ಗುತ್ತಿನಿಂದ ಹುಲಿ ಚಾಮುಂಡಿಯು ಗ್ರಾಮದ ದ್ಯೆವ ಆಗುವ ಉದ್ದೇಶದಿಂದ ಹೊರಡುವ ವೇಳೆ, ದೇವತೆಯು "ನನಗೇನಿದೆ" ಎಂದು ಕೇಳಿದಾಗ ಚಾಮುಂಡಿಯು ನನ್ನ ಒಂದು ದಿವಸದ ನೇಮದಂದು ಮೂರು ಸುತ್ತು ಬಳಿ ನಿನಗೆ" ಎಂದಿತ್ತು. ಅದರಂತೆ ಮೂರು ಸುತ್ತು ಬಳಿ ದೇವತೆಗೂ ವಿಜ್ರಂಭಣೆಯಿಂದ ನಡೆಯುತ್ತದೆ.
ಪಾಲೆದಡಿ ಸಾನ
ಬೊಳ್ಳೊಳ್ಳಿಮಾರಿನಲ್ಲಿ ಹುಲಿಚಾಮುಂಡಿ ದೈವದ ದರ್ಶನ ಮಾಡುವುದಾದರೆ ಕೈಯಲ್ಲಿ ಹಿಂಗಾರದ ಹಾಳೆಯನ್ನು ಕೊಟ್ಟು ದರ್ಶನ ಬರಿಸುವ ಕ್ರಮ ಇದೆ.
ಹುಲಿಚಾಮುಂಡಿಗೆ ಬೊಳ್ಳೊಳ್ಳಿಮಾರು ಗುತ್ತು ಪಾದ ಮಂಜೊಟ್ಟಿ ಬಾಳಿಕೆ ಎದೆ ಮುಕ್ಕೊಡಿ ತಲೆಯಾಗಿದೆ. ಹುಲಿಚಾಮುಂಡಿಗೆ ಮುಕ್ಕೋಡಿಗಿಂತಲೂ ಬೊಳ್ಳೊಳ್ಳಿಮಾರು ಗುತ್ತು ಪ್ರಧಾನ ಮನೆಯೆಂದು ಅಷ್ಟಮಂಗಳ ಪ್ರಶ್ನೆಯಲ್ಲಿ ಕಂಡು ಬಂದಿತ್ತು.
ಹಿಂದಿನ ಕಾಲದಿಂದಲೂ ಹುಲಿ ಚಾಮುಂಡಿ ಪಾತ್ರಿಗಳು ನೇಮದಲ್ಲಿ ಗುತ್ತುಗಳ ಯಜಮಾನರನ್ನು ಕರೆಯುವಾಗ ಮಾಡರನ್ನು "ಮಾಡೆರೇ" ಎಂದು ದೊಡ್ಡ ದನಿಯಲ್ಲಿ ಕರೆದು ಬೊಳ್ಳೊಳ್ಳಿಮಾರಿಗೂ ಹುಲಿ ಚಾಮುಂಡಿ ದೈವಕ್ಕೂ ಇರುವ ಸಂಬಂಧವನ್ನು ತೋರಿಸುತ್ತಿದ್ದರು.
ಮನೆಯ ಈಶಾನ್ಯ ಭಾಗದಲ್ಲಿರುವ ಮಂಜಪ್ಪ ಬಾಕ್ಯರ್ ಗದ್ದೆ ಪಿಲಿ ಚಾಮುಂಡಿ ಪಾದವಿರಿಸಿದ ಸ್ಥಳ. ಈ ಗದ್ದೆಯಲ್ಲಿ ಚಪ್ಪರ ಬಲಿ ನೇಮ ದೊಂಪದ ಬಲಿ ಆಗುವ ಕಾರಣ ಇಲ್ಲಿ ತರಕಾರಿ ಮಾಡುವುದಕ್ಕೂ ಚಪ್ಪರ ಹಾಕಬಾರದು.
ಹುಲಿ ಚಾಮುಂಡಿ ಸಾನದ ಎಡಭಾಗದಲ್ಲಿ ಬ್ರಹ್ಮನ್ ದೇವತೆಯ ಸಾನವಿದೆ. ಇದು ಏಳು ಅಡಿ ಎತ್ತರವಿದ್ದು ಪಚ್ಚೋಲಿ ಮಾಡವನ್ನು ಹೊಂದಿದೆ. ೧೯೮೭ರಲ್ಲಿ ಬ್ರಹ್ಮನ್ ದೇವತೆಗೆ ಹೊಸದಾಗಿ ಸಾನವನ್ನು ಕಟ್ಟಲಾಯಿತು.
ಬ್ರಹ್ಮನ್ ದೇವತೆ
ಬೊಳ್ಳೊಳ್ಳಿಮಾರು ಗುತ್ತಿನ ಹಿರಿಯರ ತಿಳುವಳಿಕೆಯ ಪ್ರಕಾರ ಒಂದು ಚಪ್ಪರ ಬಲಿನೇಮವು ಮಂಜಪ್ಪ ಬಾಕೂರಲ್ಲಿ ನಡೆದಿತ್ತು. ಇದು ಹರಕೆಯ ಚಪ್ಪರ ಬಲಿನೇಮವಾಗಿತ್ತು. ಸಿದ್ಧಣ್ಣ ಮಾಡರಿಗೆ ಹಲವು ವರ್ಷ ಮಕ್ಕಳಾಗದೆ ಇದ್ದಾಗ ಮಕ್ಕಳಾದರೆ ಚಪ್ಪರ ಬಲಿನೇಮ ಕೊಡುವುದಾಗಿ ಹರಕೆ ಹೇಳಿದರು. ಆದರೆ ಹರಕೆಯನ್ನು ಅವರಿಂದ ಸಲ್ಲಿಸಲಾಗಲಿಲ್ಲ. ಅವರ ನಂತರ ಅವರ ಅಳಿಯ ಆ ಸೇವೆಯನ್ನು ಒಪ್ಪಿಸಿದರು.
೧೯೮೭ರಲ್ಲಿ ಬ್ರಹ್ಮನ್ ದೇವತೆಗೆ ಹೊಸದಾಗಿ ಸಾನ ಕಟ್ಟಿಸಿ ಕಾಂತೇರಿ ಧೂಮಾವತಿ ಹಾಗೂ ಪಿಲಿಚಾಮುಂಡಿಗೆ ದರ್ಶನ ಮಾಡಿಸಿದಾಗ ದೈವವು "ತಾನು ಬೊಳ್ಳೊಳ್ಳಿಮಾರು ಗುತ್ತಿನಲ್ಲಿ ಸೇವೆಯನ್ನು ಸಂತೋಷವಾಗಿ ಸ್ವೀಕರಿಸಲಿಲ್ಲ. ಆದ್ದರಿಂದ ನಮಗೆ ಬೇರೆಯೇ ನೇಮ ಕೊಡಬೇಕೆಂದು" ಕೇಳಿತ್ತು. ಕಾರಣ ಸೇವೆ ನಡೆಯುವ ಹೊತ್ತು ಬೊಳ್ಳೊಳ್ಳಿ ಮಾರುಗುತ್ತಿನ ಕುಟುಂಬಿಕರು ಆಮೆಂii ಕಾರಣ ದೂರವೇ ನಿಂತಿದ್ದರು. ಆ ಕಾರಣಕ್ಕಾಗಿ ೮-೨-೨೦೦೦ ಹಾಗೂ ೯-೨-೨೦೦೦ದಂದು ವಿಜೃಂಭಣೆಯಿಂದ ಧರ್ಮನೇಮ ನಡೆಸಲಾಯಿತು.
ಪಿಲಿಚಾಮುಂಡಿ ಸಾನದ ಎಡಭಾಗದಲ್ಲಿ ಕಡಲ್ತಾಯ ಪಂಜುರ್ಲಿಯ ಸಾನಿಧ್ಯವಿದೆ. ಇದು ಅನಾದಿಯ ಕುಟುಂಬದ ದೈವದಲ್ಲಿ ಎಷ್ಟೇ ತಲೆಮಾರುಗಳ ಹಿಂದೆ ಮುಕ್ಕೋಡಿಯಲ್ಲಿ ನಡೆಯುವ ನೇಮಕ್ಕೆ ಹೋದವರು ರಾತ್ರಿ ಹಿಂದೆ ಬರುವಾಗ ನೇಗಿಲಿಗಾಗಿ ಮುಕ್ಕೋಡಿಯಿಂದ ಒಂದು ತುಂಡು ಮರವನ್ನು ತಂದಿದ್ದರಂತೆ ಆ ಮರದ ತುಂಡಿನ ಒಟ್ಟಿಗೆ ಮುಕ್ಕೋಡಿಯಲ್ಲಿದ್ದ ಕಡಲ್ತಾಯ ಪಂಜುರ್ಲಿ ಬಂದು ಪಿಲಿ ಚಾಮುಂಡಿಯ ಎಡ ಭಾಗದಲ್ಲಿರುತ್ತೇನೆ ನನಗೊಂದು ಸಾನ ಕಟ್ಟಿಸಬೇಕೆಂದು ಕೇಳಿತು.
ಮೊದಲು ಮಣ್ಣಿನಿಂದ ಕಟ್ಟಿದ ಈ ಸಾನ ೨೦೦೩ ರಲ್ಲಿ ಆಯ ಪ್ರಮಾಣ ಪ್ರಕಾರ ಹೊಸದಾಗಿ ಕಟ್ಟಲಾಯ್ತು.
ಕಡಲ್ತಾಯ ಪಂಜುರ್ಲಿ
ಮನೆಯ ನೈಋತ್ಯ ಭಾಗದಲ್ಲಿ ವರ್ತೆ ಪಂಜರ್ಲಿ ಹಾಗೂ ಜಾಗದ ಪಂಜುರ್ಲಿ ದೈವದ ಸಾನಿಧ್ಯಗಳಿವೆ. ಆದಿಯಲ್ಲಿ ಇದಕ್ಕೆ ಮುಳಿಹುಲ್ಲಿನ ಸಾನವಿತ್ತಂತೆ. ಅನಂತರ ಇದು ಗಾಳಿ ಮಳೆಗೆ ಬಿದ್ದು ಹೋಯ್ತು. ಅನಂತರ ಅಲ್ಲಿ ಬರೀ ಕಲ್ಲುಗಳಿಗೆ ಆರಾಧನೆ ಮಾಡಲಾಗುತ್ತಿತ್ತು. ೨೦೦೦ ಇಸವಿಯಲ್ಲಿ ಈ ದೈವಗಳಿಗೂ ಸಾನ ಕಟ್ಟಿಸಲಾಯಿತು.
ವರ್ತೆ ಪಂಜರ್ಲಿ ಹಾಗೂ ಜಾಗದ ಪಂಜುರ್ಲಿ
ಮನೆಯ ವಾಯುವ್ಯ ಮೂಲೆಯಲ್ಲಿ ರಾಹು ದೈವದ ಸಾನಿಧ್ಯವಿದೆ.
ರಾಹು ಪೀಠ
ಬೊಳ್ಳೊಳ್ಳಿಮಾರು ಗುತ್ತು ಮನೆ
ಬೊಳ್ಳೊಳ್ಳಿಮಾರು ಗುತ್ತು ಪೆರ್ಮುದೆ ಗ್ರಾಮದ ಮೂರನೆಯ ಸ್ಥಾನಮಾನದ ಸುತ್ತು ಪಾಳಿಯ ಮನೆಯಗಿದ್ದು ಸಾಲಿಯಾನ ಅಂದರೆ ತಾಳಿಯನ್ ಬಳಿಯನ್ನು ಹೊಂದಿರುವವರು. ಇವರು ಹೆಚ್ಚು ಕಡಿಮೆ ೪೦ ಎಕರೆ ಮೂಲಗೇಣಿಯ ಭೂಮಿಯನ್ನು ಹೊಂದಿದ್ದು ವರ್ಷಕ್ಕೆ ಮೂರು ಬೆಳೆಯ ಜೊತೆಗೆ, ತೆಂಗು, ಕಂಗು ಬಾಳೆಗಳನ್ನು ನೆಟ್ಟು ಉತ್ತಮ ಫಸಲನ್ನು ಪಡೆಯುತ್ತಿದ್ದಾರೆ.

ಬೊಳ್ಳೊಳ್ಳಿಮಾರು ಗುತ್ತು
ಸುತ್ತು ಪಾಳಿಯ ಈ ಮನೆಯ ಪೂರ್ವ ದಿಕ್ಕಿಗೆ ಆಯಕಟ್ಟಿನ ಮೊಗಸಾಲೆ ಇದೆ.
ಮೊಗಸಾಲೆ
ಮನೆಯ ನಡು ಅಂಗಳದಲ್ಲಿ ಆಯಕಟ್ಟಿನ ದೊಡ್ಡ ತುಳಸಿ ಕಟ್ಟೆಯು "ಗುತ್ತಿನ ಮನೆ" ಎಂದು ಎತ್ತಿ ತೋರಿಸುವಂತಿದೆ. ಈ ತುಳಸಿ ಕಟ್ಟೆ ಇರುವ ಅಂಗಳಕ್ಕೂ ಕೆಲವೊಂದು ವರ್ಗದವರು ಬರಬಾರದು ಎಂಬ ಕಟ್ಟುಪಾಡು ಇದೆ.
ನಡು ಅಂಗಳ ಅಂಗಳದಲ್ಲಿ ಆಯಕಟ್ಟಿನ ತುಳಸಿ ಕಟ್ಟೆ
ಬೊಳ್ಳೊಳ್ಳಿಮಾರು ಗುತ್ತಿನ ದೈವಗಳ ಸೇವೆ ಮಾಡಲು ದೈವಗಳಿಂದ ಹಾಗೂ ಊರವರ ಸಮ್ಮುಖದಲ್ಲಿ ಗಡಿ ನೀಡಿ ಅವರನ್ನು ಮನೆಯ ಯಜಮಾನ ಎಂದು ಗುರುತಿಸುತ್ತಾರೆ. ಇಲ್ಲಿ ಗಡಿ ನೀಡಿದ ವ್ಯಕ್ತಿಗೆ "ಮಾಡ" ಎನ್ನುವ ಹೆಸರಿನಿಂದ ಕರೆಯುತ್ತಾರೆ.
ಈಗಿರುವ ಪೀಳಿಗೆಯು ಉಮ್ಮಲು ಹೆಂಗ್ಸಿನ ಸಂತಾನವಾಗಿದೆ. ಇವರ ತಮ್ಮ ಕಂಪು ಮಾಡರು ನಮ್ಮ ತಿಳುವಳಿಕೆಯ ಮೊದಲ ಮಾಡರು. ಇವರು ನಡೆಯಲು ಅಶಕ್ತರಾದ ಸಮಯದಲ್ಲೂ ಸಹ ದೈವಸ್ಥಾನಗಳಿಗೆ ಊರುಗೋಲನ್ನು ಹಿಡಿದು ಹೋಗುತ್ತಿದ್ದರಂತೆ. ಇದು ಅವರಿಗೆ ಮನೆ ಹಾಗೂ ದೈವಗಳ ಮೇಲಿರುವ ಭಕ್ತಿಯನ್ನು ತೋರಿಸುತ್ತದೆ. ಸೋಮನಾಥ ದೇವಸ್ಥಾನದಿಂದ ಜಳಕದ ಕೆರೆಗೆ ಇಳಿಯುವ ಮೆಟ್ಟಿಲನ್ನು ಇವರು ತಮ್ಮ ಕಾಲದಲ್ಲಿ ಮಾಡಿದ್ದರು. (ಇತ್ತೀಚೆಗೆ ಇದನ್ನು ಮತ್ತೆ ಕಾಂಕ್ರೀಟಿನಿಂದ ಮಾಡಲಾಗಿದೆ.)
ಇವರ ಕಾಲ ನಂತರ ಇವರ ಅಳಿಯ ರಾಮಣ್ಣ ಮಾಡರು ಗಡಿ ಹಿಡಿದಿರುತ್ತಾರೆ.
ಇವರ ನಂತರ ಸಿದ್ಧಣ್ಣ ಮಾಡರು ಗಡಿ ಹಿಡಿದಿರುತ್ತಾರೆ. ಇವರು ರಾಮಣ್ಣ ಮಾಡರಿಗೆ ಅಳಿಯರಾಗಿರುತ್ತಾರೆ. ಅಪಾರ ದೈವ ಭಕ್ತಿಯಿದ್ದಿರುವ ಇವರು ದೇಹದಲ್ಲಿ ಬಲಾಡ್ಯರಾಗಿದ್ದರು. ತಮ್ಮ ಗತ್ತಿನ ನಡೆ ನುಡಿಗಳಿಂದ ತುಂಬಾ ಹೆಸರುವಾಸಿಯಾಗಿದ್ದರು.
ಇವರ ನಂತರ ಗಡಿ ಹಿಡಿದವರು ಇವರ ತಮ್ಮ ಸಂಜೀವ ಮಾಡರು. ದೈವ ದೇವರಲ್ಲಿ ಅಪಾರ ಭಕ್ತಿ ಇದ್ದ ಇವರು ಸರಳ ಸ್ವಭಾವದವರಾಗಿದ್ದರು. ತುಂಬಾ ಮಡಿವಂತರಾಗಿದ್ದರು.
ಇವರ ಕಾಲದಲ್ಲಿಯೇ ಹೆಚ್ಚಿನ ಧಾರ್ಮಿಕ ಸೇವೆಗಳು, ದೈವಸ್ಥಾನದ ಪುನರ್ ನಿರ್ಮಾಣವು ಆಗಿತ್ತು.
ಇವರು ೨೦೦೮ ಮೇ ೧೨ ರಂದು ದೈವಾಧೀನರಾದರು.
ಬೊಳ್ಳೊಳ್ಳಿಮಾರು ಅನಾದಿಯಲ್ಲಿ ಜೈನ ಮನೆತನಕ್ಕೆ ಸೇರಿದ ಭೂಮಿ ಕಾಲ ಕ್ರಮೇಣ ಈ ಮನೆಯ ಪೂರ್ವಿಕರ ಸ್ವಾಧೀನವಾಯಿತು. ಈ ಮನೆತನಕ್ಕೆ ಕವತ್ತಾರು ಆಲಡೆಯಾಗಿದ್ದು, ಇಲ್ಲಿಯ ಕುಟುಂಬಸ್ಥರು ಸಾಲಿಯಾನ್ನ (ತಾಲಿಯನ್ನ ಬಳಿಯವರು) ಬರಿಯವರು. ಈ ಮನೆಯಲ್ಲಿ ಹಿಂದಿನಿಂದಲೂ ಅಳಿಯ ಸಂತಾನದ ಕಟ್ಟನ್ನು ಪಾಲಿಸುತ್ತಾ ಬಂದಿದ್ದಾರೆ.
ಪೆರ್ಮುದೆ ಗ್ರಾಮದಲ್ಲಿರುವ ಹೆಚ್ಚಿನ ಎಲ್ಲಾ ಮನೆಗಳು ಗೇಣಿಪಾಲಿನ ಮನೆಗಳು ಆದರೆ ಬೊಳ್ಳೊಳ್ಳಿಮಾರು ಗುತ್ತು ಮೂಲಗೇಣಿಯ ಮನೆ. ಮೊದ ಮೊದಲು ಗೇಣಿಪಾಲಿನ ಮನೆಯವರು ತಮ್ಮ ಧಣಿಗಳಿಗೆ ಸಕಾಲದಲ್ಲಿ ಗೇಣಿ ಕೊಡದಿದ್ದರೆ ವಸೂಲಿಗಾಗಿ ಅವರ ಮನೆಯ ವಸ್ತುಗಳನ್ನು ಕೊಂಡುಹೋಗುವ ಪರಿಪಾಠವಿತ್ತು. ಆ ಕಾರಣಕ್ಕಾಗಿಯೇ ಪೆರ್ಮುದೆ ಗ್ರಾಮದ ದೈವದ ಬಂಗಾರ (ಪದ್ದೆಯಿ) ಬೊಳ್ಳೊಳ್ಳಿಮಾರು ಗುತ್ತಿನಲ್ಲಿ ಇರಿಸಿದ್ದಾರೆ. ಕಾರಣ ಈ ಮನೆಯವರಿಗೆ ಗೇಣಿ ಕೊಡುವ ಭಯವಿಲ್ಲ.
ಬೇಸಾಯವನ್ನೇ ಮುಖ್ಯ ಕಸುಬಾಗಿ ತಿಳಿದಿರುವ ಇಲ್ಲಿಯ ಹಿಂದಿನ ತಲೆಮಾರು ವರ್ಷಕ್ಕೆ ೩ ಬೆಳೆಗಳನ್ನೂ ಬೆಳೆಸುತ್ತಿದ್ದರು. ಬೈಲು-ಬೆಟ್ಟುಗದ್ದೆಗಳಿಂದಲೂ ಉತ್ತಮ ಫಸಲನ್ನು ತೆಗೆಯುತ್ತಿದ್ದರು. ರಸಗೊಬ್ಬರದಬದಲು ಹಟ್ಟಿಗೊಬ್ಬರವನ್ನೇ ಹಾಕಿ ಉತ್ತಮ ಫಸಲನ್ನು ಪಡೆಯುವುದರ ಜೊತೆಗೆ ಕಷ್ಟಪಟ್ಟು ಬೆವರು ಸುರಿಸಿ ದುಡಿದುದರ ಫಲವಾಗಿ ಉತ್ತಮ ಆರೋಗ್ಯವನ್ನು ಪಡೆದಿದ್ದರು. ಕಲ್ಮಶ ರಹಿತವಾಗಿ ದೈವದೇವರ ಬಗ್ಗೆ ಭಕ್ತಿಯನ್ನಿರಿಸಿ ಗುರುಹಿರಿಯರಿಗೆ ವಿಧೇಯರಾಗಿ ನಡೆದು ಮನೆ ಬಾಗಿಲಿಗೆ ಬಂದ ಬಡ ಬಗ್ಗರಿಗೆ ಸಹಾಯ ಮಾಡಿ ಬೊಳ್ಳೊಳ್ಳಿ ಮಾರು ಗುತ್ತಿನ ಜನರು ಒಳ್ಳೆಯವರೆಂದು ಹೊಗಳಿಸಿಕೊಂಡಿದ್ದರು.
ಹಿಂದೆ ಮನೆಯ ಯಜಮಾನ ತಾನೇ ಎಲ್ಲಾ ಸಾಗುವಳಿ ನಡೆಸಿ ಮನೆಯನ್ನು ನಡೆಸುತ್ತಿದ್ದರು. ಆಗ ಎಲ್ಲರೂ ಒಂದೇ ಮನೆಯಲ್ಲಿ ವಾಸವಾಗಿದ್ದರು.
ಅನೇಕ ಒಕ್ಕಲು ಮನೆ (ಒಕ್ಕೆಲ್ದ್ ಇಲ್ಲ್) ಹೊಂದಿದ್ದ ಈ ಮನೆ ಕಾಲಕಾಲಕ್ಕೆ ಅವರಿಂದ ಸಹಾಯ ಪಡೆಯುತ್ತಿದ್ದರು. ಹಬ್ಬ ಹರಿದಿನಗಳ ಸಂದರ್ಭದಲ್ಲಿ ಒಕ್ಕಲು ಮನೆಯವರಿಗೆ ೧ ಸೇರು ಅಕ್ಕಿ ಮತ್ತು ಒಂದು ತೆಂಗಿನಕಾಯಿ ಕೊಡುವ ಪದ್ಧತಿ ಇತ್ತು.
ನಮ್ಮ ಮನೆಯ ತೆಂಕು ದಿಕ್ಕಿನಲ್ಲಿರುವ ತಿಮಾರ ಬಾಕ್ಯಾರ (ತಿಮಲಾಕ್ಯರ್) ಇದು ಮನೆಯ ಯಜಮಾನ (ಗಡಿ ಹಿಡಿದವರು) ನಿಗೆ ದೈವದ ವಿನಿಯೋಗದ ಖರ್ಚಿಗಾಗಿ ಬಿಟ್ಟ ಗದ್ದೆ. ಮಾಡರು ಸತ್ತ ನಂತರ ಅವರನ್ನು ಇದೇ ಗದ್ದೆಯಲ್ಲಿ ಸುಡಬೇಕು. ಯಜಮಾನರಲ್ಲದೆ ಅನ್ಯರನ್ನು ಈ ಗದ್ದೆಯಲ್ಲಿ ಸುಡಬಾರದು.
ನಮ್ಮ ಬೈಲುಗದ್ದೆಯ ಪೈಕಿ ಮೂಡಣಗದ್ದೆ (ಮುಡಾಯಿ)ಯನ್ನು ನಾಟಿ ಮಾಡುವ ದಿನ ಮನೆಯ ಯಜಮಾನ ನಾಟಿ ಮುಗಿಸುವವರೆಗೆ ಉಪವಾಸವಿದ್ದು, ಮುಗಿದ ಮೇಲೆ ಗದ್ದೆಯ ಮಧ್ಯ ಭಾಗದಲ್ಲಿ ತೆಂಗಿನ ಹಸಿ ಗರಿ (ಮಡಲ್) ಯಿಂದ ಹುಲಿಯ ರೂಪ ಮಾಡಿ ಅದನ್ನು ನಿಲ್ಲಿಸಿ ಅದರ ಮುಖದ ಭಾಗಕ್ಕೆ ಕಂಗಿನ ಹಾಳೆಯ (ಪಾಲೆ) ಕೊಂಬಾರ್ (ಟೊಪ್ಪಿ) ಮಾಡಿ ಇಟ್ಟು ನಾಟಿ ಮಾಡಿದವರೆಲ್ಲಾ "ಉಧೊ" "ಉಧೊ" ಎಂದು ಹೇಳಬೇಕು. ನಮ್ಮ ಮನೆಯ ಬೆಳೆಯನ್ನು ಹುಲಿಯ ರೂಪ (ಕಾಪು) ಕಾಯಬೇಕೆಂಬ ದೃಷ್ಟಿಯ ಪ್ರಾರ್ಥನೆ ಇದರಲ್ಲಿ ಅಡಗಿದೆ. ಈ ಗದ್ದೆಗೆ ಮುಟ್ಟಾದ ಹೆಂಗಸರು ಇಳಿಯಬಾರದು.
ನಮ್ಮ ಮನೆಯ ಬಾವಿಯು ಮನೆಯ ಉತ್ತರ ದಿಕ್ಕಿಗಿದೆ. ಮುಟ್ಟಾಗಿ ೫ ದಿನ ಆಗದ ಮನೆಯ ಹೆಂಗಸರು, ಆಮೆ ಸೂತಕವಿರುವ ಯಾರಾದರೂ ಹೊರಗಿನವರು, ಮತ್ತೆ ಕೆಲವೊಂದು ವರ್ಗದವರು ಈ ಬಾವಿಯನ್ನು ಮುಟ್ಟುವಾಗಿಲ್ಲ. ಒಂದು ವೇಳೆ ಇದನ್ನು ಪಾಲಿಸಿಕೊಂಡು ಬರದಿದ್ದರೆ, ಬಾವಿಯ ನೀರು ದೈವಕ್ಕೆ ನಿಷಿದ್ಧವಾಗಿ ಮನೆಯವರಿಗೆ ದೋಷ ಕಾಣಿಸಿಕೊಳ್ಳುತ್ತದೆ. ರಾತ್ರಿ ಹೊತ್ತು ಮನೆಯಲ್ಲಿ ದೀಪ ಉರಿಸಿದ ನಂತರ ಯಾರೂ ಬಾವಿಯಿಂದ ನೀರು ತೆಗೆಯಬಾರದು.
ಮನೆಯ ಬಾವಿ
ನಮ್ಮ ಮನೆಯ ದೈವ ಚಾವಡಿಯ ಒಳಗೆ ಕೆಲವೊಂದು ವರ್ಗದವರು ಬರಬಾರದು. ನವಜಾತ ಶಿಶುವನ್ನು ನೋಡಲು ಹೋದರೆ, ಆ iಗು ಹುಟ್ಟಿ ೫ ದಿನಗಳಾಗಿರದಿದ್ದರೆ ಸ್ನಾನ ಮಾಡಿಯೇ ಮನೆಯನ್ನು ಪ್ರವೇಶಿಸಬೇಕು. ಹಾಗೆಯೇ ಅಂತ್ಯ ಕ್ರಿಯೆಗೆ ಹೋದರೂ ಸ್ನಾನ ಮಾಡಿ ಬೇರೆ ಬಟ್ಟೆಯನ್ನು ಉಟ್ಟೇ ಮನೆಯನ್ನು ಪ್ರವೇಶಿಸಬೇಕು. ಮುಟ್ಟಾದ ಮನೆಯ ಹೆಂಗಸರೂ ೫ ದಿನವಾಗದೆ ದೈವದ ಚಾವಡಿಯನ್ನು ಪ್ರವೇಶಿಸುವಾಗಿಲ್ಲ. ಮನೆಯ ಹೆಂಗಸರು ಪ್ರಸವವಾದರೆ (ಹೆತ್ತರೆ) ೯ ದಿನಗಳ ನಂತರವೇ ನಮ್ಮ ಮನೆಗೆ ಬರಬೇಕು. ಅದಕ್ಕಾಗಿಯೇ ಬರಕಲದ ವ್ಯವಸ್ಥೆ ಮಾಡಲಾಗಿತ್ತು.
ನಮ್ಮ ಇಡೀ ಪೆರ್ಮುದೆ ಊರಿಗೆ ಅನ್ವಯಿಸುವಂತೆ ಬೊಳ್ಳೊಳ್ಳಿ ಮಾರುಗುತ್ತಿನ ದನದ ಹಟ್ಟಿಗೆ ಬಾಗಿಲು ಮಾಡುವಾಗಿಲ್ಲ. ಯಾಕೆಂದರೆ ಪೆರ್ಮುದೆ ಊರಿನಲ್ಲಿ ಹುಲಿಚಾಮುಂಡಿ ಪ್ರಮುಖ ದೈವವಾಗಿರುವುದರಿಂದ ಹಟ್ಟಿಯ ದನ ಕರುಗಳನ್ನು ರಕ್ಷಿಸುತ್ತದೆ. ಪಿಲಿಚಾಮುಂಡಿ ದೈವದ ರಕ್ಷಣೆ ಇರುವ ಕಾರಣ ದನಕರುಗಳನ್ನು ಕದ್ದೊಯ್ಯುವ ಕಳ್ಳರ ಭಯವೇ ಇಲ್ಲ ಇಲ್ಲಿ. ಊರಿನಲ್ಲಿ ಹುಲಿಯ ವೇಷ ಹಾಕಿ ಕುಣಿಯುದಾಗಲೀ, ಅಥವಾ ಯಾವುದೇ ಮನೋರಂಜನೆಯಲ್ಲಿ ಹುಲಿಯ ವೇಷವನ್ನು ಧರಿಸುವಾಗಿಲ್ಲ. ಇದಕ್ಕೆ ನಿದರ್ಶನವೆಂಬಂತೆ, ಈ ಹಿಂದೆ ತಿಳಿಯದೆ ಪ್ರಮಾದವಶಾತ ಹುಲಿವೇಷ ಪೆರ್ಮುದೆ ಊರಿಗೆ ಬಂದಾಗ ಹುಲಿವೇಷಧಾರಿ ರಕ್ರಕಾರಿ ಸತ್ತಿದ್ದಾನೆ ಎಂಬ ಪ್ರತೀತಿ ಇದೆ. ಕರ್ಕಾಟಕ ತಿಂಗಳಲ್ಲಿ (ಆಟಿ) ಕೆಲವು ಕಡೆ ನಲ್ಕೆಯವರು ಆಟಿ ಕಳಂಜನ ವೇಷ ಹಾಕಿ ಬರುತ್ತಾರೆ. ಆದರೆ ಪೆರ್ಮುದೆ ಊರಿನ ಮಾರಿಮಗ್ಗವನ್ನು ಪಿಲಿಚಾಂಡಿಯೇ ಹೋಗಲಾಡಿಸುತ್ತಾನೆಯಾದ ಕಾರಣ ಆಟಿಕಳಂಜ ಇಲ್ಲಿಗೆ ಬರುವಾಗಿಲ್ಲ.
ಮುಂಡಾಲು ಜಾತಿಯವರು ಈ ಊರಿನಲ್ಲಿ ಇರಬಾರದು. ಕೋಡ್ದಬ್ಬು ದೈವವು ಪೆರ್ಮುದೆ ಊರಿನಲ್ಲಿಲ್ಲ. ಆ ದೈವದ ಕರಿಯ ಗಂಧವನ್ನು ಹಾಕಿ ಈ ಊರಿಗೆ ಬರಬಾರದು. ಮಾಟ ಮಂತ್ರ ಕಳೆಯಲು ಜ್ಯೋತಿಷ್ಯರು ಮಾಡಿಕೊಟ್ಟ ತಾಯಿತವನ್ನು ಬೊಳ್ಳೊಳ್ಳಿಮಾರಿನವರು ಕಟ್ಟಬಾರದು.
ಮನೆಯ ಯಾವನೇ ಹುಡುಗ ಅಥವಾ ಹುಡುಗಿಗೆ ಮದುವೆಯಾದರೆ ನಮ್ಮ ಮನೆಯಿಂದಲೇ ದಿಬ್ಬಣ ಹೊರಡುವುದಾದರೆ ನಮ್ಮ ದೈವ ಚಾವಡಿಯ ಎದುರು ಮಾವಿನ ತೋರಣ ಕಟ್ಟಬೇಕು.
ನಾಗಬನದ ಬಳಿ ತೋಡಿನ ಬದಿಯಲ್ಲಿ ಒಂದು ಆಲದ ಮರವಿದೆ. ಅದರ ಬುಡದಲ್ಲಿ ಒಂದು ಸಣ್ಣ ಹೊಂಡವಿದೆ. ಆ ಜಾಗವನ್ನು ಅಶುದ್ಧ ಮಾಡಬಾರದು ಹಾಗೂ ಆ ಜಾಗಕ್ಕೆ ಹಾರೆ ಕತ್ತಿ, ಪಿಕ್ಕಾಸು ಹಾಕಬಾರದು. ಇದು ನಾಗಬನವನ್ನು ಹೊಸದಾಗಿ ಕಟ್ಟಿದಾಗ ನಾಗ ಪ್ರತಿಷ್ಠೆಯ ದಿನ ಪಾತ್ರಿ ನಾಗದರ್ಶನದಲ್ಲಿ ಹೇಳಿದ ವಿಷಯ. ಬನದ ಸುತ್ತಮುತ್ತ ನಾಗನ ಸಂಚಾರವಿರುವ ಕಾರಣ ತೋಟಕ್ಕೆ ಹಟ್ಟಿ ಗೊಬ್ಬರ ಕೂಡ ಹಾಕುವಾಗಿಲ್ಲ, ಬೂದಿಯನ್ನು ಹಾಕುವಾಗಿಲ್ಲ.
ಮನೆಯ ಮೊಗಸಾಲೆಯ ಎದುರು ಮಂಜಪ್ಪ ಬಾಕ್ಯರಿನ ತೆಂಕು ಮೂಲೆಯಲ್ಲಿ ಇರುವ ಈ ಅನುಗ್ರಹ ಹುತ್ತದಲ್ಲಿ ನಾಗ ಸನ್ನಿಧಾನವಿದೆ. ಆದ್ದರಿಂದ ಆ ಜಾಗದಲ್ಲಿ ಮುಟ್ಟಾದ ಹೆಂಗಸರು ಹೋಗಬಾರದು ಹಿಂದೆ "ಮಾಡರು" ಮೊಗಸಾಲೆಯಲ್ಲಿ ಕುಳಿತು ಈ ಬಾಕ್ಯರಿನ ಕಡೆ ದೃಷ್ಟಿಯನ್ನು ಇಟ್ಟು ಯಾವುದೇ ಮಾತು ಆಡಿದರೆ ಅದು ೧೦೦ ಕ್ಕೆ ೧೦೦ ಸತ್ಯವಾಗುತಿತ್ತಂತೆ.
ಅನುಗ್ರಹ ಹುತ್ತ
ಹುಲಿ ಚಾಮುಂಡಿ ದೈವಸ್ಥಾನದ ಎದುರು ಇರುವ ಕಾಯರ್ ಮರವು ಹುಲಿಚಾಮುಂಡಿಯು ತನ್ನ ವಾಹನವಾದ ಹುಲಿಯನ್ನು ಕಟ್ಟುವ ಮರ. ಇದರ ಗೆಲ್ಲನ್ನು ಕಡಿಯಬೇಕಾದ ಅನಿವಾರ್ಯತೆ ಬಂದಾಗ ಕೂಡ ದೈವಕ್ಕೆ ಕೈ ಮುಗಿದು ಪ್ರಾರ್ಥಿಸಿಯೇ ಮುಂದುವರಿಯಬೇಕು.
ಕುಟುಂಬದಲ್ಲಿ ಆಮೆಕರ ಬಂದರೆ, ದೈವ ಶುದ್ಧವಾಗಲು ಶುದ್ಧದ ಹೋಮ ಆಗಬೇಕು. ದೀಪಾವಳಿಯ ಸಂದರ್ಭ ಸೂತಕದಿಂದಾಗಿ ದೈವಗಳಿಗೆ ಹಬ್ಬ ಆಗದಿದ್ದರೆ ದೀಪಾವಳಿ ಆಗುವವರೆಗೆ ಇಲ್ಲಿ ಗಟ್ಟಿ ಅವಲಕ್ಕಿ ಮಾಡುವಾಗಿಲ್ಲ. ದೀಪಾವಳಿಯ ರಾತ್ರಿ ರಾಜನ್ ದೈವಗಳಿಗೆ ಹಬ್ಬವಾಗಿ ಅದರ ಮರುದಿನ ಪಂಜುರ್ಲಿ ದೈವಗಳಿಗೆ ಹಬ್ಬವಾಗುತ್ತದೆ. ದೀಪಾವಳಿಯ ದಿನ ಕಿನ್ನಿಗುರಿಯವರು ಬಂದು ಪಿಲಿಚಾಮುಂಡಿ ದೈವದ ಆವರಣ(ಅಂಗಣ)ದ ಹುಲ್ಲು ತೆಗೆದು ದೈವಸಾನದ ಮೂಲೆ ಮೂಲೆಗಳಿಗೆ ಮಾವಿನ ತುದಿ ಎಲೆ ಕಟ್ಟಿ ಬಲಿಯೇಂದ್ರನನ್ನು ಕರೆಯುವ ಬಲಕಿ ಮರವನ್ನು ನೆಟ್ಟು ಹೋಗಬೇಕು.
ಬಜಪೆಯ ನೆಲ್ಲಿದಡಿಗುತ್ತಿನವರು ಮತ್ತು ಬೊಳ್ಳೊಳ್ಳಿಮಾರಿನವರು ಒಂದೇ ಕುಟುಂಬಿಕರು. ಹಿಂದೆ ಈ ಕುಟುಂಬಿಕರಿಗೆ ವೃದ್ಧಿಕ್ಷಯ (ಆಮೆಕರ) ಇತ್ತು. ಬೊಳ್ಳೊಳ್ಳಿಮಾರಿನವರು ವರ್ಷಕ್ಕೆ ಒಮ್ಮೆ ಯಾದರು ನೆಲ್ಲಿದಡಿ ಗುತ್ತಿನ ನೀರು ಕುಡಿಯಬೇಕೆಂಬ ಕ್ರಮ ಇದೆ. ದೀಪಾವಳಿ ಹಬ್ಬದ ದಿನ ಬೊಳ್ಳೊಳ್ಳಿಮಾರಿನವರು ನೆಲ್ಲಿದಡಿ ಗುತ್ತಿಗೆ ಹೋಗದಿದ್ದರೆ ಗಟ್ಟಿ (ಅಕ್ಕಿಯ ತಿಂಡಿ) ಸರಿಯಾಗಿ ಬೇಯುತ್ತಿರಲಿಲ್ಲ. ಕಾಲ ಕ್ರಮೇಣ ಇದು ದೂರವಾಗಿದೆ.
ಹಿಂದಿನ ಕಾಲದಲ್ಲಿ ದೈವ ದೇವರು ಇರುವ ಮನೆಗಳಲ್ಲಿ ದೇವರಿಗೆ ಕುಟುಂಬದ ಪರವಾಗಿ ವರ್ಷಂಪ್ರತಿ ಹಣ ಸಂಗ್ರಹಿಸಿ ಅದನ್ನು ಡಬ್ಬಿಯಲ್ಲಿ ಹಾಕಿ ತುಂಬಿದ ನಂತರ ಕುಟುಂಬದ ಹಿರಿಯರು ಯಾವ ದೇವರಿಗೆ ಸಂದಾಯವಾಗಬೇಕು ಆ ದೇವರ ಸನ್ನಿಧಾನಕ್ಕೆ ಹೋಗಿ ಸಲ್ಲಿಸುತ್ತಿದ್ದರು. ಇದನ್ನು ಹುಂಡಿ (ಮುಡಿಪು) ಅಥವಾ ಪಣವು ಕಟ್ಟುವುದು ಎಂದು ಹೇಳುತ್ತಿದ್ದರು. ಇದನ್ನು ವರ್ಷಂಪ್ರತಿ ದೀಪಾವಳಿಯ ದಿನ ಕುಟುಂಬಿಕರು ಸೇರಿ ಕಟ್ಟುವ ಕ್ರಮ ಇದೆ. ಇಲ್ಲಿ ೨ ಹುಂಡಿಗಳಿದ್ದು, ದೊಡ್ಡ ಡಬ್ಬಿ ತಿರುಪತಿ ತಿಮ್ಮಪ್ಪನಿಗೆ, ಚಿಕ್ಕ ಡಬ್ಬಿ ಧರ್ಮಸ್ಥಳ ಮಂಜುನಾಥ ಸ್ವಾಮಿಗೆ ಸೇರಿದ್ದು.
ಪ್ರತಿ ತಿಂಗಳ ಸಂಕ್ರಮಣದಂದು ಮಾಡರು ದೈವಸಾನದ ಬಾಗಿಲು ತೆರೆದು ಸಂಕ್ರಮಣ ಕಳೆಯುತ್ತಾರೆ. ಅಲ್ಲದೆ ಪ್ರತಿ ಶ್ರಾವಣ ಮಾಸದಲ್ಲಿ (ಸೋಣ) ನಿತ್ಯವೂ ದೈವಸಾನದ ಬಾಗಿಲು ತೆಗೆದು ದೀಪ ಇಡುವ ಕ್ರಮ ಅನಾದಿ ಕಾಲದಿಂದಲೂ ಬಂದಂತಹುದು. ಪರಿವಾರ ದೈವಗಳಿಗೆ ವರ್ಷಂಪ್ರತಿ ಮಾಡುವ ತಂಬಿಲವು ಮೇ (ಬೇಷ) ತಿಂಗಳ ಸಂಕ್ರಮಣದಂದು ನಡೆಯುತ್ತದೆ. ಧೂಮವತಿಯ ಸಾನದ ಬಾಗಿಲನ್ನು ಮನೆಯ ಗಡಿಹಿಡಿದ ಯಜಮಾನ ಮಾತ್ರ ತೆರೆದು ಒಳಗೆ ಹೋಗಬಹುದು. ದೈವಗಳಿಗೆ ಮನೆಯವನೇ ಗಡಿಹಿಡಿದು ಆರಾಧನೆಗೈಯ್ದರೆ ತುಂಬಾ ತೃಪ್ತಿ. ಒಂದು ವೇಳೆ ಗಡಿ ಹಿಡಿದವರು ಇಲ್ಲದಿದ್ದರೆ, ಮುಕ್ಕಾಲ್ದಿ ಅಥವಾ ಬ್ರಾಹ್ಮಣರು ಒಳಗೆ ಹೋಗಿ ಆರಾಧನೆಗೈಯಬಹುದು. ನಮ್ಮ ಮನೆಯಲ್ಲಿ ರಾಜನ್ ದೈವಗಳಿಗೆ ಸಂಬಂಧಪಟ್ಟ ಯಾವುದೇ ಕಾರ್ಯವು ಪೆಜತ್ತಾಯರ ನೇತೃತ್ವದಲ್ಲಿಯೇ ನಡೆಯುತ್ತದೆ. ಯಾವುದೇ ಧಾರ್ಮಿಕ ಕಾರ್ಯ ನಡೆಯುವುದಾಗಿ ಮನೆತನದ ಮನೆಗಳಿಗೆ ಹಾಗೂ ಮುಕ್ಕೋಡಿ ಮನೆಗೆ ವಿಷಯ ತಿಳಿಸುವ ಕ್ರಮ ಇದೆ. ಹಾಗೆಯೇ ಉಳಿದ ಮನೆಗಳಲ್ಲೂ ಸಹ ದೈವದ ಕಾರ್ಯವಾಗುವಾಗ ಈ ಮನೆಗೂ ತಿಳಿಸುತ್ತಾರೆ. ಮನೆಯಲ್ಲಿ ಶುಭ ಕಾರ್ಯಗಳು ಹಾಗೂ ಮನೆಯವರು ಪರ ಊರಿಗೆ ಹೋಗುವಾಗ ಚಾವಡಿಯಲ್ಲಿ ದೀಪ ಉರಿಸಿ ಪ್ರಾರ್ಥಿಸುವ ಕ್ರಮ ಇಂದಿಗೂ ಇದೆ.
ನಮ್ಮ ಮನೆಯ ಒಕ್ಕೆಲ ಮೆನೆಯಲ್ಲಿ ಯಾರಿಗಾದರೂ ಮದುವೆಯಾಗುದಾದರೆ ಮದುವೆಗೆ ಮುಂಚಿನದಿನ ಮದುವೆಯ ಹುಡುಗ ಯಾ ಹುಡುಗಿ ಮನೆಯವರೊಂದಿಗೆ ಬಂದು ಕೈ ಮುಗಿದು ಹೋಗಬೇಕು. ಈ ಸಂದರ್ಭದಲ್ಲಿ ಅವರು ಹರಿವಾಣದಲ್ಲಿ ಎಲೆ ಅಡಿಕೆ ತೆಂಗಿನಕಾಯಿ ಹಾಗೂ ಮಲ್ಲಿಗೆ ಹೂ ದೈವದ ಚಾವಡಿಯ ಹೊಸ್ತಿಲಿನಲ್ಲಿ (ತಡ್ಯ) ಇಟ್ಟು ಕೈ ಮುಗಿದು ಹೋಗಬೇಕು. ಯಜಮಾನ ಮನೆ ಎನ್ನುವ ದೃಷ್ಟಿಯಿಂದ ಹೆಸರು ಬೇಳೆ ಹಾಗೂ ಬೆಲ್ಲ ಕೊಡುತ್ತಿದ್ದರು. ಯಾಕೆಂದರೆ ಮದುವೆಯ ಲೆಕ್ಕದಲ್ಲಿ ಪಾಯಸ ಮಾಡಿ ಬಾಯಿ ಸಿಹಿ ಮಾಡಲೆಂದು ಹೀಗೆ ಮಾಡುತ್ತಿದ್ದರು.
ತುಳುವಿನ ಪುಯಿಂತೆಲ್ ತಿಂಗಳ ಹುಣ್ಣಿಮೆಯಂದು ಸೋಮನಾಥ ದೇವಸ್ಥಾನದಲ್ಲಿ ಧ್ವಜಾರೋಹಣವಾಗಿ ೪ ದಿನಗಳ ವರ್ಷಾವಧಿ ಜಾತ್ರೆಯು ನಡೆಯುತ್ತದೆ. ಧ್ವಜಾರೋಹಣ ಆದ ಮೇಲೆ ದೇವರ ಕೈಯಿಂದ ಮನೆತನದ ಮನೆಗಳಿಗೆ ಪ್ರಸಾದ ಸಿಗುತ್ತದೆ. ಅದನ್ನು ಗಡಿಹಿಡಿದವರು ಪಡೆಯುತ್ತಾರೆ. ಜಾತ್ರೆಯ ದಿನವೂ ರಾತ್ರಿ ದೇವರ ಕೈಯಿಂದ ಪ್ರಸಾದ ಸಿಗುತ್ತದೆ. ದೇವಸ್ಥಾನದ ಜಾತ್ರೆಗೆ ಸ್ವಲ್ಪ ದಿನ ಮುಂಚೆ ಜಾತ್ರೆಯ ಖರ್ಚಿಗಾಗಿ ಅಕ್ಕಿ ಹಾಗೂ ತರಕಾರಿಗಳನ್ನು ಕೊಡುತ್ತಾರೆ. ಜೊತೆಗೆ ಶಕ್ತ್ಯಾನುಸಾರ ಹಣವನ್ನು ಸಂಗ್ರಹಿಸಿ ಕೊಡುತ್ತಾರೆ. ದೇವಾಲಯದಲ್ಲಿ ನಡೆಯುವ ಯಾವುದೇ ಸಭೆಗಳಿಗೆ ಈ ಮನೆಯಿಂದ ಯಾರಾದರೂ ಹಾಜರಾಗಲೇಬೇಕು.
ಬೊಳ್ಳೊಳ್ಳಿಮಾರು ಗುತ್ತಿನ ಕುಟುಂಬಿಕರ ಪರವಾಗಿ ಊರಿನ ಜಾತ್ರೆಯ ಸಂದರ್ಭದಲ್ಲಿ ಕಟೀಲು ಶ್ರೀದುರ್ಗಾ ಪರಮೇಶ್ವರಿ ಯಕ್ಷಗಾನ ಮಂಡಳಿಯವರಿಂದ ಯಕ್ಷಗಾನ ಸೇವೆಯಾಟವು ನಡೆಯುತ್ತದೆ.
ಈ ಮನೆಯಲ್ಲಿ ಕೋಳಿಯನ್ನು ಮರಿ ಮಾಡುವ ಪದ್ಧತಿ ಇಲ್ಲ. ಇದು ಮನೆಯಲ್ಲಿ ಒಳಜಗಳವಾಗುವುದನ್ನು ತಪ್ಪಿಸಲು ಮನೆಯ ಗುರಿಕಾರ ಈ ಮನೆಯಲ್ಲಿ ಕೋಳಿ ಮರಿ ಮಾಡಬಾರದೆಂದು ಹೇಳಿದ್ದರಂತೆ. ಈ ಪದ್ಧತಿಯು ಇಂದಿಗೂ ರೂಢಿಯಲ್ಲಿದೆ.
ಬೊಳ್ಳೂಳ್ಳಿ ಮಾರು ಗುತ್ತಿನಲ್ಲಿ ನಮ್ಮ ಹಿರಿಯರ ತಿಳುವಳಿಕೆಯ ಕೆಲವು ಸತ್ಯ ಘಟನೆಗಳು:-
೧. ಹಿಂದೆ ಕಂಪ ಮಾಡರ ಯಜಮಾನಿಕೆಯ ಸಂದರ್ಭದಲ್ಲಿ ಕಾಯೆರ್ ಕಟ್ಟೆಯಲ್ಲಿ ಗಡುಪಾಡಿನ ನೇಮ ಆಗುತ್ತಿರುವಾಗ ಕಡೆಗೆ ಪಿಲಿಚಾಂಡಿ ಮಾರಿ ಓಡಿಸುವ ಸಂದರ್ಭದಲ್ಲಿ ಕೋಳಿ ಕಡಿದಾದ ಮೇಲೆ ಪಿಲಿಚಾಂಡಿ "ನನಗೆ ರಕ್ತದ ಆಹಾರ ಕಡಿಮೆಯಾಯಿ"ತೆಂದು ಹೇಳಿದಾಗ ಕಂಪ ಮಾಡರ ತಮ್ಮ ದಾಸ ಶೆಟ್ಟಿ ತನ್ನ ಕೈಯನ್ನು ಕಲ್ಲಿಗೆ ಬಡಿದು ರಕ್ತವನ್ನು ಸುರಿಸಿ ಪಿಲಿಚಾಂಡಿಯತ್ರ "ನಿನಗೆ ರಕ್ತದ ಆಹಾರ ಬೇಕಾದರೆ ಸ್ವೀಕರಿಸು" ಎಂದಿದ್ದರಂತೆ.
೨. ಹಿಂದೆ ಬಜಪೆಯ ನೆಲ್ಲಿದಡಿಗುತ್ತಿನವರಿಗೂ ಬೊಳ್ಳೊಳ್ಳಿಮಾರು ಗುತ್ತಿಗೂ ಆಮೆಕರ ಇತ್ತು. ಅಂದರೆ ಎರಡು ಕಡೆಯವರು ಒಂದೇ ಕುಟುಂಬಿಕರು ಆಗಿದ್ದರು. ಆಗ ನೆಲ್ಲಿದಡಿ ಗುತ್ತಿನಲ್ಲಿ ಆಗುವ ಎಲ್ಲಾ ಪರ್ವಗಳಿಗೂ ಬೊಳ್ಳೊಳ್ಳಿಮಾರಿನವರು ಹೋಗಬೇಕಾಗಿತ್ತು. ಒಂದು ಸಲ ದೀಪಾವಳಿ ಹಬ್ಬಕ್ಕೆ ಬೊಳ್ಳೊಳ್ಳಿಮಾರಿನವರಿಗೆ ಅವರು ತಿಳಿಸಿರಲಿಲ್ಲ. ದೀಪಾವಳಿಯ ಗಟ್ಟಿ ಅಡ್ಡೆಯನ್ನು ಅಲ್ಲಿಯ ಕುಟುಂಬಿಕರು ಎಷ್ಟೇ ಬೇಯಿಸಿದರೂ ಅದು ಬೇಯಲಿಲ್ಲ ಕಡೆಗೆ ಅಲ್ಲಿಯ ಯಜಮಾನನ ಮಾತಿನಂತೆ ಆ ಮನೆಯಿಂದ ಬೊಳ್ಳೊಳ್ಳಿಮಾರಿಗೆ ಜನ ಕಳಿಸಿದರು. ಆಗ ಚಂದು ಶೆಡ್ತಿ ಅಲ್ಲಿಗೆ ಹೋಗಿ ಗಟ್ಟಿಯನ್ನು ಬೇಯಿಸಲು ಇಟ್ಟ ಪಾತ್ರೆಯ ಬಾಯಿ ತೆರೆದು ಗಟ್ಟಿಯನ್ನು ಅಡಿಮೇಲು ಮಾಡಿ ಇಟ್ಟು ಒಲೆಗೆ ಕಟ್ಟಿಗೆ ಇಟ್ಟಾಕ್ಷಣ ಗಟ್ಟಿ ಬೇಯಿತಂತೆ. ಬೊಳ್ಳೊಳ್ಳಿಮಾರಿನವರು ಅಲ್ಲಿಗೆ ಹೋಗದಿದ್ದರೆ ಗಟ್ಟಿ ಬೇಯುತ್ತಿರಲಿಲ್ಲವಂತೆ.
೩. ಪಿಲಿ ಚಾಮುಂಡಿಗೆ ಬೊಳ್ಳೊಳ್ಳಿಮಾರು ಗುತ್ತು ಅತೀ ಪ್ರಾಮುಖ್ಯವಾದ ಮನೆಯಾಗಿದೆ. ಹಿಂದೆ ಈ ಗುತ್ತಿನ ಮನೆಯ ದನವೊಂದನ್ನು ಗುಡ್ಡೆಯಲ್ಲಿ ಮೇಯಲು ಕಟ್ಟಲಾಗಿತ್ತು. ಅದನ್ನು ತಿನ್ನಲು ಹುಲಿಯೊಂದು ಓಡಿ ಬರುತ್ತಿತ್ತು. ಆ ಹೊತ್ತಿಗೆ ಕಿನ್ನಿಗುರಿಯ ಸೋಂಪಾ ತಾಳೆ ಮರದಿಂದ ಶೇಂದಿ ತೆಗೆಯಲು ಮರಕ್ಕೆ ಏರಿದ್ದ. ಅವನು ಆ ದೃಶ್ಯವನ್ನು ಕಂಡು ಜೋರಾಗಿ "ಅದು ದನ ಬೊಳ್ಳೊಳ್ಳಿಮಾರಿನದ್ದು ಅದನ್ನು ತಿನ್ನಬೇಡ" ಎಂದನಂತೆ. ಇದನ್ನು ಕೇಳಿದ ಹುಲಿ ದನವನ್ನು ಬಿಟ್ಟು ಹೋಯಿತಂತೆ.
೪. ಕುತ್ತೆತ್ತೂರು, ಸೂರಿಂಜೆ ಗ್ರಾಮದ ಮನೆತನಗಳಲ್ಲಿ, "ಜಂತಬೆಟ್ಟು ಮಿತ್ತೋಡಿ ಬಾಳಿಕೆ" ಒಂದನೆಯ ಸ್ಥಾನಮಾನದ ಮನೆ. ಜುಮಾದಿ, ಜುಮಾದಿ ಬಂಟ ಮನೆಯ ಪ್ರಧಾನ ದ್ಯೆವವಾಗಿದೆ. ಅನಾದಿಯಲ್ಲಿ ಜೈನ ಮನೆತನಕ್ಕೆ ಸೇರಿದ ಭೂಮಿ ಕಾಲ ಕ್ರಮೇಣ ಈ ಮನೆಯ ಸ್ವಾಧೀನವಾಯಿತು. ಹಿಂದೆ ಈ ಮನೆಯಲ್ಲಿ "ಪ್ರಶ್ನೆ" ಯನ್ನು ಇಟ್ಟಾಗ, ಮನೆಯ ಬಾವಿಯೊಳಗೆ ನಿಧಿ ಇದೆ ಎಂದು ತಿಳಿದು ಬಂತು. ಇದನ್ನು ಅರಿತ ಮನೆಯವರು ಕೆಲವು ಕಾಲದ ನಂತರ ಬಾವಿಯನ್ನು ಮತ್ತೆ ಅಗೆದರು. ಅಂತೆಯೆ ಇವರಿಗೆ ಬಂಗಾರದ ಮೂರ್ತಿಯೊಂದು ಸಿಕ್ಕಿತು. ಈ ಮೂರ್ತಿಯಲ್ಲಿ ದೇವತಾ ಮನೋಭಾವನೆಯನ್ನು ಕಂಡು ದೈವಸ್ಥಾನದೊಳಗಿಟ್ಟರು. ತದ ನಂತರ ಮನೆಯವರಿಗೆ ನಾನಾ ತರಹದ ಕಷ್ಟ ಕಾರ್ಪಣ್ಯಗಳು ಕಂಡು ಬಂದ ಕಾರಣ ಮನೆಯಲ್ಲಿ ಪ್ರಶ್ನೆಯನ್ನು ಇಟ್ಟರು. ಜೈನ ಮನೆತನಕ್ಕೆ ಸೇರಿದ ಮೂರ್ತಿಯೊಂದನ್ನು ದೈವಸ್ಥಾನದೊಳಗಿಟ್ಟಿರುವ ಕಾರಣ ದೈವ ಉಗ್ರರೂಪದಲ್ಲಿದ್ದಾನೆ. ಕೂಡಲೆ ಮೂರ್ತಿಯನ್ನು ತೆಗೆದು ದೈವಸ್ಥಾನವನ್ನು ಶುದ್ಧ ಮಾಡಬೇಕು. ಅದಕ್ಕಾಗಿ ಪೂರ್ವದಲ್ಲಿ ಸಾರಮಾನ್ಯ ದೈವದ ಮಣ್ಣಿಗೆ ಸಮನಾದ ಬೊಳ್ಳೊಳ್ಳಿಮಾರು ಗುತ್ತು ಎಂಬ ಮನೆಯೊಂದಿದೆ. ಆ ಮನೆಯ ಬಾವಿಯಿಂದ ನೀರನ್ನು ತಂದು ದ್ಯೆವಸ್ಥಾನಕ್ಕೆ ಸಿಂಪಡಿಸಿದರೆ ದ್ಯೆವಸ್ಥಾನವು ಶುದ್ಧವಾಗಿ ದೋಷ ಪರಿಹಾರವಾಗುವುದೆಂದು ತಿಳಿದು ಬಂತು. ಅಂತೆಯೆ ಅವರು ದೋಷ ಪರಿಹಾರಮಾಡಿಸಿದ್ದರು. ಈ ವಿಷಯವನ್ನು ಮಿತ್ತೋಡಿ ಬಾಳಕೆಯವರು ಈಗಲು ನೆನಪಿಸಿಕೊಳ್ಳುತ್ತಿದ್ದಾರೆ.
೫. ಬೊಳ್ಳೊಳ್ಳಿಮಾರುಗುತ್ತಿನ ಸಿದ್ಧಣ್ಣ ಮಾಡರು ಅವರ ತಂಗಿ ಗಿರಿಜಾಳ ಊರಾದ ಪೇಜಾವರದ ಪಡ್ಪುವಿನಲ್ಲಿ ನಡೆಯುವ ಗುಳಿಗನ ಕೋಲಕ್ಕೆ ಹೋಗಿದ್ದರು. ಅಲ್ಲಿಯ ಗುಳಿಗ ತುಂಬಾ ಕಾರ್ನಿಕದ ದೈವ ಅದು ಬಾರಣೆ (ಆಹಾರ) ಸ್ವೀಕರಿಸುತ್ತಿರುವಾಗ ಸಿದ್ಧಣ್ಣ ಮಾಡರು "ಏನು ನಿನ್ನ ಅವತಾರ ಬೇಗ ಬಾರಣೆ ಸ್ವೀಕರಿಸು" ಎಂದರಂತೆ. ಆಗ ಗುಳಿಗ ಕಣ್ಣರಳಿಸಿ ಇವರನ್ನು ನೋಡಿದಾಗ ಇವರಿಗೆ ಶರೀರದಲ್ಲಿ ಏನೋ ಸಂಕಟ ಆದ ಅನುಭವವಾಯ್ತು. ಆಗ ಅವರು ತನ್ನ ಪಂಚೆಯ ಕೊನೆಯಿಂದ ಪಿಲಿ ಚಾಮುಂಡಿಯ ಗಂಧವನ್ನು ಹಣೆಗೆ ಹಾಕಿದಾಗ ಅವರ ಸಂಕಟ ದೂರವಾಯಿತಂತೆ.
೬. ಹಿಂದೆ ಬೊಳ್ಳೊಳ್ಳಿಮಾರುಗುತ್ತಿಗೆ ಹತ್ತಿರದಲ್ಲಿದ್ದ ಕೊಡ್ಯಂಡದ ದೈವಗಳು ಅಜೀರ್ಣಾವಸ್ಥೆಯಲ್ಲಿದ್ದವು. ಅವುಗಳಿಗೆ ಸಾನವಿರಲಿಲ. ಆಗ ಬೊಳ್ಳೊಳ್ಳಿಮಾರಿನ ತಿಮ್ಮಪ್ಪ ಹೆಗಡೆಯವರು ಕೊಡ್ಯಂಡದ ಭೂಮಿಯನ್ನು ಗೇಣಿಗಾಗಿ ಸಾಗುವಳಿ ಮಾಡುತಿದ್ದರು. ಆದರೆ ಅಲ್ಲಿ ಸಾಗುವಳಿ ಮಾಡುವವರಿಗೆ ಸುಖವಿರುತ್ತಿರಲಿಲ್ಲ. ಒಂದು ಸಲ ತಿಮ್ಮಪ್ಪ ಹೆಗಡೆಯವರ ಕೋಣ ಕೊಡ್ಯಂಡದ ಗದ್ದೆಯನ್ನು ಉಳುತ್ತಿರುವಾಗ ತನ್ನಷ್ಟಕ್ಕೆ ಬಿದ್ದು ಬಿಟ್ಟಿತು. ಜ್ಯೋತಿಷ್ಯರಲ್ಲಿ ಹೋಗಿ ಕೇಳಿದಾಗ, "ಆ ಭೂಮಿಯ ದೈವಗಳಿಗೆ ಬಾಯಿಗೆ ನೀರು ಇಲ್ಲದ ಕಾರಣ ಅವು ಕೋಪದಿಂದ ಹಾಗೆ ಮಾಡಿದ್ದು, ಇನ್ನು ಮುಂದೆ ಆ ಜಾಗದ ಸಾಗುವಳಿ ಬಿಡಬೇಕು" ಎಂದು ಹೇಳಿದ್ದರು. ಅಲ್ಲಿಯ ದೈವಗಳು ತಿಮ್ಮಪ್ಪ ಹೆಗಡೆಯವರ ಒಟ್ಟಿಗೆ ಬೊಳ್ಳೊಳ್ಳಿ ಮಾರಿಗೆ ಬಂದಿದ್ದವಂತೆ, ಆದರೆ ಪಿಲಿಚಾಮುಂಡಿ ಅವುಗಳನ್ನು ಹಿಂದಕ್ಕೆ ಓಡಿಸಿದ್ದಾನೆ ಎಂದೂ ತಿಳಿದು ಬಂದಿತ್ತು.
೭. ೧೯೬೦ ರಲ್ಲಿ ಸಿದ್ದಣ್ಣ ಮಾಡರ ಯಜಮಾನಿಕೆಯ ಸಂದರ್ಭದಲ್ಲಿ ಪಂಜುರ್ಲಿ ದೈವಗಳಿಗೆ ಆಗುವ ತಂಬಿಲದ ದಿನ ನಿಗದಿಪಡಿಸುವಲ್ಲಿ ಕುಟುಂಬಿಕರ ಮಧ್ಯೆ ಭಿನ್ನಾಭಿಪ್ರಾಯ ಮೂಡಿದಾಗ ಹುಲಿಯೊಂದು ದನದ ಅರ್ಧಭಾಗವನ್ನು ಹಿಡಿದು ಪಿಲಿಚಾಮುಂಡಿ ಸಾನದ ಎದುರು ತಂದು ಇಟ್ಟು ಹೋಯಿತಂತೆ.
೮. ಇದು ೧೯೭೦ರಲ್ಲಿ ನಡೆದ ಘಟನೆ ಆ ಹೊತ್ತಿಗೆ ಬೊಳ್ಳೊಳ್ಳಿಮಾರುಗುತ್ತಿನ ಬಾವಿಗೆ ಕಟ್ಟೆ ಇರಲಿಲ್ಲ. ಮರದ ಕಂಬಗಳನ್ನು ನೆಲಕ್ಕೆ ಊರಿ ಅದಕ್ಕೆ ರಾಟೆ ಹಾಕಿ ನೀರು ಎಳೆಯುತ್ತಿದ್ದರು. ದಂಡೆ ಇಲ್ಲದ ಕಾರಣ ನೀರು ಎಳೆಯುವಾಗ ತುಂಬಾ ಜಾಗ್ರತೆವಹಿಸ ಬೇಕಾಗಿತ್ತು. ಮೇ ತಿಂಗಳಲ್ಲಿ ಬಾವಿಯಲ್ಲಿ ನೀರು ಸ್ವಲ್ಪ ಕಡಿಮೆ ಇದ್ದ ಕಾರಣ, ಮನೆಯವರು ಬೆಳಿಗ್ಗೆ ಬೇಗನೆ ಎದ್ದು ನೀರು ತುಂಬಿಸಿಡುತ್ತಿದ್ದರು. ಹೀಗೆ ಬೆಳಿಗ್ಗೆ ನೀರು ತರಲು ಹೋದಾಗ ಒಬ್ಬರು ಮಣ್ಣು ಕುಸಿದು ಬಾವಿಗೆ ಬಿದ್ದರೂ ಪುಣ್ಯವಶಾತ್ ಅವರಿಗೆ ಸ್ವಲ್ಪವೂ ಗಾಯವಾಗದೆ ಬದುಕುಳಿದರು. ಸ್ವಲ್ಪ ದಿನದ ನಂತರ ಜ್ಯೋತಿಷ್ಯರಲ್ಲಿ ಕೇಳಿದಾಗ ಹುಲಿಚಾಮುಂಡಿ ದೈವವು ಬಿದ್ದವಳನ್ನು ತನ್ನ ಕೈಗಳಿಂದ ಹಿಡಿದು ರಕ್ಷಿಸಿತೆಂದು ತಿಳಿದು ಬಂತು.
೯. ಸಂಜೀವ ಮಾಡರಿಗೆ ಗಡಿ ಹಿಡಿಯುವ ದಿನ ರಾತ್ರಿ ಅವರ ಪತ್ನಿಯನ್ನು ಕೊಳಂಬೆಯಿಂದ ಕಾರಿನಲ್ಲಿ ಕರೆದುಕೊಂಡು ಬರುವಾಗ ಒಂದು ಗಡುಪಾಡಿನ ಜಾಗವಾದ ಥ್ಯಾಕರ್ ಕಟ್ಟೆಯ ಹತ್ತಿರ ಕಾರಿನ ಚಾಲಕ ಹಿಂದೆ ಪೆರ್ಮುದೆ ಊರಿನಲ್ಲಿ ಯಾವಾಗಲೂ ಹುಲಿ ಕಾಣಿಸಿಕೊಂಡು ದೈವ ಪಿಲಿ ಚಾಮುಂಡಿಯ ಕಾರ್ನಿಕ ತೋರುತಿತ್ತಂತೆ. ಆದರೆ ಈಗ ಕಾಲ ಬದಲಾಗಿದೆ. ಈಗ ಕಾಣ ಸಿಗಲಿಕ್ಕಿಲ್ಲ ಎಂದು ಹೇಳಿದಾಕ್ಷಣ ಮಾರ್ಗದ ಮಧ್ಯದಲ್ಲಿ ೨ ಹುಲಿಗಳು ಅತ್ತ ಇತ್ತ ಹೋದವಂತೆ.
೧೦. ೧೯೯೭ ನಡೆದ ಘಟನೆ: ಆಗಿನ ಗಡಿಹಿಡಿದವರಾದ ಸಂಜೀವ ಮಾಡರು ಹೆಚ್ಚಾಗಿ ತನ್ನ ಪತ್ನಿ ಪುತ್ರರೊಡನೆ ಪತ್ನಿಯ ಊರಾದ ಕೊಳಂಬೆಯಲ್ಲಿ ಇರುತ್ತಿದ್ದರು. ಸಂಕ್ರಮಣದ ದಿನಗಳಲ್ಲಿ ಹಾಗೂ ದೈವಗಳ ಪರ್ವದಿನಗಳಲ್ಲಿ ಹಾಗೂ ನೇಮಗಳ ದಿನಗಳಲ್ಲಿ ಇಲ್ಲಿಗೆ ಬಂದು ಹೋಗುತ್ತಿದ್ದರು. ಆರೋಗ್ಯವಂತರಾದ ಅವರು ಒಮ್ಮಿಂದೊಮ್ಮೆಗೆ ಮಾನಸಿಕ ರೋಗಿಯಂತೆ ತನ್ನ ಮೈಯನ್ನು ಪರಚಿಕೊಂಡು ಏನೇನೋ ಮಾತಾಡಿ ಹುಲಿ ಕಾಣಿಸುತ್ತಿದೆ ಎಂದು ಬೊಬ್ಬೆ ಹಾಕಿದಾಗ ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತು. ನಂತರ ಜ್ಯೋತಿಷ್ಯರಲ್ಲಿ ಕೇಳಿದಾಗ "ಸಂಜೀವ ಮಾಡರು ಬೊಳ್ಳೊಳ್ಳಿಮಾರಿನಲ್ಲಿ ಹೆಚ್ಚಾಗಿ ಇರದೆ ತನ್ನ ಹೆಂಡತಿ ಮನೆಯಲ್ಲಿಯೇ ಇರುತ್ತಾರೆ. ಆದ್ದರಿಂದ ಹುಲಿ ಚಾಮುಂಡಿ ಕೋಪವಿದೆಯೆಂದು ತೋರಿ ಬಂತು.
ಬೊಳ್ಳೊಳ್ಳಿಮಾರು ಗುತ್ತು
ಸುತ್ತು ಪಾಳಿಯ ಈ ಮನೆಯ ಪೂರ್ವ ದಿಕ್ಕಿಗೆ ಆಯಕಟ್ಟಿನ ಮೊಗಸಾಲೆ ಇದೆ.
ಮೊಗಸಾಲೆ
ಮನೆಯ ನಡು ಅಂಗಳದಲ್ಲಿ ಆಯಕಟ್ಟಿನ ದೊಡ್ಡ ತುಳಸಿ ಕಟ್ಟೆಯು "ಗುತ್ತಿನ ಮನೆ" ಎಂದು ಎತ್ತಿ ತೋರಿಸುವಂತಿದೆ. ಈ ತುಳಸಿ ಕಟ್ಟೆ ಇರುವ ಅಂಗಳಕ್ಕೂ ಕೆಲವೊಂದು ವರ್ಗದವರು ಬರಬಾರದು ಎಂಬ ಕಟ್ಟುಪಾಡು ಇದೆ.
ನಡು ಅಂಗಳ ಅಂಗಳದಲ್ಲಿ ಆಯಕಟ್ಟಿನ ತುಳಸಿ ಕಟ್ಟೆ
ಬೊಳ್ಳೊಳ್ಳಿಮಾರು ಗುತ್ತಿನ ದೈವಗಳ ಸೇವೆ ಮಾಡಲು ದೈವಗಳಿಂದ ಹಾಗೂ ಊರವರ ಸಮ್ಮುಖದಲ್ಲಿ ಗಡಿ ನೀಡಿ ಅವರನ್ನು ಮನೆಯ ಯಜಮಾನ ಎಂದು ಗುರುತಿಸುತ್ತಾರೆ. ಇಲ್ಲಿ ಗಡಿ ನೀಡಿದ ವ್ಯಕ್ತಿಗೆ "ಮಾಡ" ಎನ್ನುವ ಹೆಸರಿನಿಂದ ಕರೆಯುತ್ತಾರೆ.
ಈಗಿರುವ ಪೀಳಿಗೆಯು ಉಮ್ಮಲು ಹೆಂಗ್ಸಿನ ಸಂತಾನವಾಗಿದೆ. ಇವರ ತಮ್ಮ ಕಂಪು ಮಾಡರು ನಮ್ಮ ತಿಳುವಳಿಕೆಯ ಮೊದಲ ಮಾಡರು. ಇವರು ನಡೆಯಲು ಅಶಕ್ತರಾದ ಸಮಯದಲ್ಲೂ ಸಹ ದೈವಸ್ಥಾನಗಳಿಗೆ ಊರುಗೋಲನ್ನು ಹಿಡಿದು ಹೋಗುತ್ತಿದ್ದರಂತೆ. ಇದು ಅವರಿಗೆ ಮನೆ ಹಾಗೂ ದೈವಗಳ ಮೇಲಿರುವ ಭಕ್ತಿಯನ್ನು ತೋರಿಸುತ್ತದೆ. ಸೋಮನಾಥ ದೇವಸ್ಥಾನದಿಂದ ಜಳಕದ ಕೆರೆಗೆ ಇಳಿಯುವ ಮೆಟ್ಟಿಲನ್ನು ಇವರು ತಮ್ಮ ಕಾಲದಲ್ಲಿ ಮಾಡಿದ್ದರು. (ಇತ್ತೀಚೆಗೆ ಇದನ್ನು ಮತ್ತೆ ಕಾಂಕ್ರೀಟಿನಿಂದ ಮಾಡಲಾಗಿದೆ.)
ಇವರ ಕಾಲ ನಂತರ ಇವರ ಅಳಿಯ ರಾಮಣ್ಣ ಮಾಡರು ಗಡಿ ಹಿಡಿದಿರುತ್ತಾರೆ.
ಇವರ ನಂತರ ಸಿದ್ಧಣ್ಣ ಮಾಡರು ಗಡಿ ಹಿಡಿದಿರುತ್ತಾರೆ. ಇವರು ರಾಮಣ್ಣ ಮಾಡರಿಗೆ ಅಳಿಯರಾಗಿರುತ್ತಾರೆ. ಅಪಾರ ದೈವ ಭಕ್ತಿಯಿದ್ದಿರುವ ಇವರು ದೇಹದಲ್ಲಿ ಬಲಾಡ್ಯರಾಗಿದ್ದರು. ತಮ್ಮ ಗತ್ತಿನ ನಡೆ ನುಡಿಗಳಿಂದ ತುಂಬಾ ಹೆಸರುವಾಸಿಯಾಗಿದ್ದರು.
ಇವರ ನಂತರ ಗಡಿ ಹಿಡಿದವರು ಇವರ ತಮ್ಮ ಸಂಜೀವ ಮಾಡರು. ದೈವ ದೇವರಲ್ಲಿ ಅಪಾರ ಭಕ್ತಿ ಇದ್ದ ಇವರು ಸರಳ ಸ್ವಭಾವದವರಾಗಿದ್ದರು. ತುಂಬಾ ಮಡಿವಂತರಾಗಿದ್ದರು.
ಇವರ ಕಾಲದಲ್ಲಿಯೇ ಹೆಚ್ಚಿನ ಧಾರ್ಮಿಕ ಸೇವೆಗಳು, ದೈವಸ್ಥಾನದ ಪುನರ್ ನಿರ್ಮಾಣವು ಆಗಿತ್ತು.
ಇವರು ೨೦೦೮ ಮೇ ೧೨ ರಂದು ದೈವಾಧೀನರಾದರು.
ಬೊಳ್ಳೊಳ್ಳಿಮಾರು ಅನಾದಿಯಲ್ಲಿ ಜೈನ ಮನೆತನಕ್ಕೆ ಸೇರಿದ ಭೂಮಿ ಕಾಲ ಕ್ರಮೇಣ ಈ ಮನೆಯ ಪೂರ್ವಿಕರ ಸ್ವಾಧೀನವಾಯಿತು. ಈ ಮನೆತನಕ್ಕೆ ಕವತ್ತಾರು ಆಲಡೆಯಾಗಿದ್ದು, ಇಲ್ಲಿಯ ಕುಟುಂಬಸ್ಥರು ಸಾಲಿಯಾನ್ನ (ತಾಲಿಯನ್ನ ಬಳಿಯವರು) ಬರಿಯವರು. ಈ ಮನೆಯಲ್ಲಿ ಹಿಂದಿನಿಂದಲೂ ಅಳಿಯ ಸಂತಾನದ ಕಟ್ಟನ್ನು ಪಾಲಿಸುತ್ತಾ ಬಂದಿದ್ದಾರೆ.
ಪೆರ್ಮುದೆ ಗ್ರಾಮದಲ್ಲಿರುವ ಹೆಚ್ಚಿನ ಎಲ್ಲಾ ಮನೆಗಳು ಗೇಣಿಪಾಲಿನ ಮನೆಗಳು ಆದರೆ ಬೊಳ್ಳೊಳ್ಳಿಮಾರು ಗುತ್ತು ಮೂಲಗೇಣಿಯ ಮನೆ. ಮೊದ ಮೊದಲು ಗೇಣಿಪಾಲಿನ ಮನೆಯವರು ತಮ್ಮ ಧಣಿಗಳಿಗೆ ಸಕಾಲದಲ್ಲಿ ಗೇಣಿ ಕೊಡದಿದ್ದರೆ ವಸೂಲಿಗಾಗಿ ಅವರ ಮನೆಯ ವಸ್ತುಗಳನ್ನು ಕೊಂಡುಹೋಗುವ ಪರಿಪಾಠವಿತ್ತು. ಆ ಕಾರಣಕ್ಕಾಗಿಯೇ ಪೆರ್ಮುದೆ ಗ್ರಾಮದ ದೈವದ ಬಂಗಾರ (ಪದ್ದೆಯಿ) ಬೊಳ್ಳೊಳ್ಳಿಮಾರು ಗುತ್ತಿನಲ್ಲಿ ಇರಿಸಿದ್ದಾರೆ. ಕಾರಣ ಈ ಮನೆಯವರಿಗೆ ಗೇಣಿ ಕೊಡುವ ಭಯವಿಲ್ಲ.
ಬೇಸಾಯವನ್ನೇ ಮುಖ್ಯ ಕಸುಬಾಗಿ ತಿಳಿದಿರುವ ಇಲ್ಲಿಯ ಹಿಂದಿನ ತಲೆಮಾರು ವರ್ಷಕ್ಕೆ ೩ ಬೆಳೆಗಳನ್ನೂ ಬೆಳೆಸುತ್ತಿದ್ದರು. ಬೈಲು-ಬೆಟ್ಟುಗದ್ದೆಗಳಿಂದಲೂ ಉತ್ತಮ ಫಸಲನ್ನು ತೆಗೆಯುತ್ತಿದ್ದರು. ರಸಗೊಬ್ಬರದಬದಲು ಹಟ್ಟಿಗೊಬ್ಬರವನ್ನೇ ಹಾಕಿ ಉತ್ತಮ ಫಸಲನ್ನು ಪಡೆಯುವುದರ ಜೊತೆಗೆ ಕಷ್ಟಪಟ್ಟು ಬೆವರು ಸುರಿಸಿ ದುಡಿದುದರ ಫಲವಾಗಿ ಉತ್ತಮ ಆರೋಗ್ಯವನ್ನು ಪಡೆದಿದ್ದರು. ಕಲ್ಮಶ ರಹಿತವಾಗಿ ದೈವದೇವರ ಬಗ್ಗೆ ಭಕ್ತಿಯನ್ನಿರಿಸಿ ಗುರುಹಿರಿಯರಿಗೆ ವಿಧೇಯರಾಗಿ ನಡೆದು ಮನೆ ಬಾಗಿಲಿಗೆ ಬಂದ ಬಡ ಬಗ್ಗರಿಗೆ ಸಹಾಯ ಮಾಡಿ ಬೊಳ್ಳೊಳ್ಳಿ ಮಾರು ಗುತ್ತಿನ ಜನರು ಒಳ್ಳೆಯವರೆಂದು ಹೊಗಳಿಸಿಕೊಂಡಿದ್ದರು.
ಹಿಂದೆ ಮನೆಯ ಯಜಮಾನ ತಾನೇ ಎಲ್ಲಾ ಸಾಗುವಳಿ ನಡೆಸಿ ಮನೆಯನ್ನು ನಡೆಸುತ್ತಿದ್ದರು. ಆಗ ಎಲ್ಲರೂ ಒಂದೇ ಮನೆಯಲ್ಲಿ ವಾಸವಾಗಿದ್ದರು.
ಅನೇಕ ಒಕ್ಕಲು ಮನೆ (ಒಕ್ಕೆಲ್ದ್ ಇಲ್ಲ್) ಹೊಂದಿದ್ದ ಈ ಮನೆ ಕಾಲಕಾಲಕ್ಕೆ ಅವರಿಂದ ಸಹಾಯ ಪಡೆಯುತ್ತಿದ್ದರು. ಹಬ್ಬ ಹರಿದಿನಗಳ ಸಂದರ್ಭದಲ್ಲಿ ಒಕ್ಕಲು ಮನೆಯವರಿಗೆ ೧ ಸೇರು ಅಕ್ಕಿ ಮತ್ತು ಒಂದು ತೆಂಗಿನಕಾಯಿ ಕೊಡುವ ಪದ್ಧತಿ ಇತ್ತು.
ನಮ್ಮ ಮನೆಯ ತೆಂಕು ದಿಕ್ಕಿನಲ್ಲಿರುವ ತಿಮಾರ ಬಾಕ್ಯಾರ (ತಿಮಲಾಕ್ಯರ್) ಇದು ಮನೆಯ ಯಜಮಾನ (ಗಡಿ ಹಿಡಿದವರು) ನಿಗೆ ದೈವದ ವಿನಿಯೋಗದ ಖರ್ಚಿಗಾಗಿ ಬಿಟ್ಟ ಗದ್ದೆ. ಮಾಡರು ಸತ್ತ ನಂತರ ಅವರನ್ನು ಇದೇ ಗದ್ದೆಯಲ್ಲಿ ಸುಡಬೇಕು. ಯಜಮಾನರಲ್ಲದೆ ಅನ್ಯರನ್ನು ಈ ಗದ್ದೆಯಲ್ಲಿ ಸುಡಬಾರದು.
ನಮ್ಮ ಬೈಲುಗದ್ದೆಯ ಪೈಕಿ ಮೂಡಣಗದ್ದೆ (ಮುಡಾಯಿ)ಯನ್ನು ನಾಟಿ ಮಾಡುವ ದಿನ ಮನೆಯ ಯಜಮಾನ ನಾಟಿ ಮುಗಿಸುವವರೆಗೆ ಉಪವಾಸವಿದ್ದು, ಮುಗಿದ ಮೇಲೆ ಗದ್ದೆಯ ಮಧ್ಯ ಭಾಗದಲ್ಲಿ ತೆಂಗಿನ ಹಸಿ ಗರಿ (ಮಡಲ್) ಯಿಂದ ಹುಲಿಯ ರೂಪ ಮಾಡಿ ಅದನ್ನು ನಿಲ್ಲಿಸಿ ಅದರ ಮುಖದ ಭಾಗಕ್ಕೆ ಕಂಗಿನ ಹಾಳೆಯ (ಪಾಲೆ) ಕೊಂಬಾರ್ (ಟೊಪ್ಪಿ) ಮಾಡಿ ಇಟ್ಟು ನಾಟಿ ಮಾಡಿದವರೆಲ್ಲಾ "ಉಧೊ" "ಉಧೊ" ಎಂದು ಹೇಳಬೇಕು. ನಮ್ಮ ಮನೆಯ ಬೆಳೆಯನ್ನು ಹುಲಿಯ ರೂಪ (ಕಾಪು) ಕಾಯಬೇಕೆಂಬ ದೃಷ್ಟಿಯ ಪ್ರಾರ್ಥನೆ ಇದರಲ್ಲಿ ಅಡಗಿದೆ. ಈ ಗದ್ದೆಗೆ ಮುಟ್ಟಾದ ಹೆಂಗಸರು ಇಳಿಯಬಾರದು.
ನಮ್ಮ ಮನೆಯ ಬಾವಿಯು ಮನೆಯ ಉತ್ತರ ದಿಕ್ಕಿಗಿದೆ. ಮುಟ್ಟಾಗಿ ೫ ದಿನ ಆಗದ ಮನೆಯ ಹೆಂಗಸರು, ಆಮೆ ಸೂತಕವಿರುವ ಯಾರಾದರೂ ಹೊರಗಿನವರು, ಮತ್ತೆ ಕೆಲವೊಂದು ವರ್ಗದವರು ಈ ಬಾವಿಯನ್ನು ಮುಟ್ಟುವಾಗಿಲ್ಲ. ಒಂದು ವೇಳೆ ಇದನ್ನು ಪಾಲಿಸಿಕೊಂಡು ಬರದಿದ್ದರೆ, ಬಾವಿಯ ನೀರು ದೈವಕ್ಕೆ ನಿಷಿದ್ಧವಾಗಿ ಮನೆಯವರಿಗೆ ದೋಷ ಕಾಣಿಸಿಕೊಳ್ಳುತ್ತದೆ. ರಾತ್ರಿ ಹೊತ್ತು ಮನೆಯಲ್ಲಿ ದೀಪ ಉರಿಸಿದ ನಂತರ ಯಾರೂ ಬಾವಿಯಿಂದ ನೀರು ತೆಗೆಯಬಾರದು.
ಮನೆಯ ಬಾವಿ
ನಮ್ಮ ಮನೆಯ ದೈವ ಚಾವಡಿಯ ಒಳಗೆ ಕೆಲವೊಂದು ವರ್ಗದವರು ಬರಬಾರದು. ನವಜಾತ ಶಿಶುವನ್ನು ನೋಡಲು ಹೋದರೆ, ಆ iಗು ಹುಟ್ಟಿ ೫ ದಿನಗಳಾಗಿರದಿದ್ದರೆ ಸ್ನಾನ ಮಾಡಿಯೇ ಮನೆಯನ್ನು ಪ್ರವೇಶಿಸಬೇಕು. ಹಾಗೆಯೇ ಅಂತ್ಯ ಕ್ರಿಯೆಗೆ ಹೋದರೂ ಸ್ನಾನ ಮಾಡಿ ಬೇರೆ ಬಟ್ಟೆಯನ್ನು ಉಟ್ಟೇ ಮನೆಯನ್ನು ಪ್ರವೇಶಿಸಬೇಕು. ಮುಟ್ಟಾದ ಮನೆಯ ಹೆಂಗಸರೂ ೫ ದಿನವಾಗದೆ ದೈವದ ಚಾವಡಿಯನ್ನು ಪ್ರವೇಶಿಸುವಾಗಿಲ್ಲ. ಮನೆಯ ಹೆಂಗಸರು ಪ್ರಸವವಾದರೆ (ಹೆತ್ತರೆ) ೯ ದಿನಗಳ ನಂತರವೇ ನಮ್ಮ ಮನೆಗೆ ಬರಬೇಕು. ಅದಕ್ಕಾಗಿಯೇ ಬರಕಲದ ವ್ಯವಸ್ಥೆ ಮಾಡಲಾಗಿತ್ತು.
ನಮ್ಮ ಇಡೀ ಪೆರ್ಮುದೆ ಊರಿಗೆ ಅನ್ವಯಿಸುವಂತೆ ಬೊಳ್ಳೊಳ್ಳಿ ಮಾರುಗುತ್ತಿನ ದನದ ಹಟ್ಟಿಗೆ ಬಾಗಿಲು ಮಾಡುವಾಗಿಲ್ಲ. ಯಾಕೆಂದರೆ ಪೆರ್ಮುದೆ ಊರಿನಲ್ಲಿ ಹುಲಿಚಾಮುಂಡಿ ಪ್ರಮುಖ ದೈವವಾಗಿರುವುದರಿಂದ ಹಟ್ಟಿಯ ದನ ಕರುಗಳನ್ನು ರಕ್ಷಿಸುತ್ತದೆ. ಪಿಲಿಚಾಮುಂಡಿ ದೈವದ ರಕ್ಷಣೆ ಇರುವ ಕಾರಣ ದನಕರುಗಳನ್ನು ಕದ್ದೊಯ್ಯುವ ಕಳ್ಳರ ಭಯವೇ ಇಲ್ಲ ಇಲ್ಲಿ. ಊರಿನಲ್ಲಿ ಹುಲಿಯ ವೇಷ ಹಾಕಿ ಕುಣಿಯುದಾಗಲೀ, ಅಥವಾ ಯಾವುದೇ ಮನೋರಂಜನೆಯಲ್ಲಿ ಹುಲಿಯ ವೇಷವನ್ನು ಧರಿಸುವಾಗಿಲ್ಲ. ಇದಕ್ಕೆ ನಿದರ್ಶನವೆಂಬಂತೆ, ಈ ಹಿಂದೆ ತಿಳಿಯದೆ ಪ್ರಮಾದವಶಾತ ಹುಲಿವೇಷ ಪೆರ್ಮುದೆ ಊರಿಗೆ ಬಂದಾಗ ಹುಲಿವೇಷಧಾರಿ ರಕ್ರಕಾರಿ ಸತ್ತಿದ್ದಾನೆ ಎಂಬ ಪ್ರತೀತಿ ಇದೆ. ಕರ್ಕಾಟಕ ತಿಂಗಳಲ್ಲಿ (ಆಟಿ) ಕೆಲವು ಕಡೆ ನಲ್ಕೆಯವರು ಆಟಿ ಕಳಂಜನ ವೇಷ ಹಾಕಿ ಬರುತ್ತಾರೆ. ಆದರೆ ಪೆರ್ಮುದೆ ಊರಿನ ಮಾರಿಮಗ್ಗವನ್ನು ಪಿಲಿಚಾಂಡಿಯೇ ಹೋಗಲಾಡಿಸುತ್ತಾನೆಯಾದ ಕಾರಣ ಆಟಿಕಳಂಜ ಇಲ್ಲಿಗೆ ಬರುವಾಗಿಲ್ಲ.
ಮುಂಡಾಲು ಜಾತಿಯವರು ಈ ಊರಿನಲ್ಲಿ ಇರಬಾರದು. ಕೋಡ್ದಬ್ಬು ದೈವವು ಪೆರ್ಮುದೆ ಊರಿನಲ್ಲಿಲ್ಲ. ಆ ದೈವದ ಕರಿಯ ಗಂಧವನ್ನು ಹಾಕಿ ಈ ಊರಿಗೆ ಬರಬಾರದು. ಮಾಟ ಮಂತ್ರ ಕಳೆಯಲು ಜ್ಯೋತಿಷ್ಯರು ಮಾಡಿಕೊಟ್ಟ ತಾಯಿತವನ್ನು ಬೊಳ್ಳೊಳ್ಳಿಮಾರಿನವರು ಕಟ್ಟಬಾರದು.
ಮನೆಯ ಯಾವನೇ ಹುಡುಗ ಅಥವಾ ಹುಡುಗಿಗೆ ಮದುವೆಯಾದರೆ ನಮ್ಮ ಮನೆಯಿಂದಲೇ ದಿಬ್ಬಣ ಹೊರಡುವುದಾದರೆ ನಮ್ಮ ದೈವ ಚಾವಡಿಯ ಎದುರು ಮಾವಿನ ತೋರಣ ಕಟ್ಟಬೇಕು.
ನಾಗಬನದ ಬಳಿ ತೋಡಿನ ಬದಿಯಲ್ಲಿ ಒಂದು ಆಲದ ಮರವಿದೆ. ಅದರ ಬುಡದಲ್ಲಿ ಒಂದು ಸಣ್ಣ ಹೊಂಡವಿದೆ. ಆ ಜಾಗವನ್ನು ಅಶುದ್ಧ ಮಾಡಬಾರದು ಹಾಗೂ ಆ ಜಾಗಕ್ಕೆ ಹಾರೆ ಕತ್ತಿ, ಪಿಕ್ಕಾಸು ಹಾಕಬಾರದು. ಇದು ನಾಗಬನವನ್ನು ಹೊಸದಾಗಿ ಕಟ್ಟಿದಾಗ ನಾಗ ಪ್ರತಿಷ್ಠೆಯ ದಿನ ಪಾತ್ರಿ ನಾಗದರ್ಶನದಲ್ಲಿ ಹೇಳಿದ ವಿಷಯ. ಬನದ ಸುತ್ತಮುತ್ತ ನಾಗನ ಸಂಚಾರವಿರುವ ಕಾರಣ ತೋಟಕ್ಕೆ ಹಟ್ಟಿ ಗೊಬ್ಬರ ಕೂಡ ಹಾಕುವಾಗಿಲ್ಲ, ಬೂದಿಯನ್ನು ಹಾಕುವಾಗಿಲ್ಲ.
ಮನೆಯ ಮೊಗಸಾಲೆಯ ಎದುರು ಮಂಜಪ್ಪ ಬಾಕ್ಯರಿನ ತೆಂಕು ಮೂಲೆಯಲ್ಲಿ ಇರುವ ಈ ಅನುಗ್ರಹ ಹುತ್ತದಲ್ಲಿ ನಾಗ ಸನ್ನಿಧಾನವಿದೆ. ಆದ್ದರಿಂದ ಆ ಜಾಗದಲ್ಲಿ ಮುಟ್ಟಾದ ಹೆಂಗಸರು ಹೋಗಬಾರದು ಹಿಂದೆ "ಮಾಡರು" ಮೊಗಸಾಲೆಯಲ್ಲಿ ಕುಳಿತು ಈ ಬಾಕ್ಯರಿನ ಕಡೆ ದೃಷ್ಟಿಯನ್ನು ಇಟ್ಟು ಯಾವುದೇ ಮಾತು ಆಡಿದರೆ ಅದು ೧೦೦ ಕ್ಕೆ ೧೦೦ ಸತ್ಯವಾಗುತಿತ್ತಂತೆ.
ಅನುಗ್ರಹ ಹುತ್ತ
ಹುಲಿ ಚಾಮುಂಡಿ ದೈವಸ್ಥಾನದ ಎದುರು ಇರುವ ಕಾಯರ್ ಮರವು ಹುಲಿಚಾಮುಂಡಿಯು ತನ್ನ ವಾಹನವಾದ ಹುಲಿಯನ್ನು ಕಟ್ಟುವ ಮರ. ಇದರ ಗೆಲ್ಲನ್ನು ಕಡಿಯಬೇಕಾದ ಅನಿವಾರ್ಯತೆ ಬಂದಾಗ ಕೂಡ ದೈವಕ್ಕೆ ಕೈ ಮುಗಿದು ಪ್ರಾರ್ಥಿಸಿಯೇ ಮುಂದುವರಿಯಬೇಕು.
ಕುಟುಂಬದಲ್ಲಿ ಆಮೆಕರ ಬಂದರೆ, ದೈವ ಶುದ್ಧವಾಗಲು ಶುದ್ಧದ ಹೋಮ ಆಗಬೇಕು. ದೀಪಾವಳಿಯ ಸಂದರ್ಭ ಸೂತಕದಿಂದಾಗಿ ದೈವಗಳಿಗೆ ಹಬ್ಬ ಆಗದಿದ್ದರೆ ದೀಪಾವಳಿ ಆಗುವವರೆಗೆ ಇಲ್ಲಿ ಗಟ್ಟಿ ಅವಲಕ್ಕಿ ಮಾಡುವಾಗಿಲ್ಲ. ದೀಪಾವಳಿಯ ರಾತ್ರಿ ರಾಜನ್ ದೈವಗಳಿಗೆ ಹಬ್ಬವಾಗಿ ಅದರ ಮರುದಿನ ಪಂಜುರ್ಲಿ ದೈವಗಳಿಗೆ ಹಬ್ಬವಾಗುತ್ತದೆ. ದೀಪಾವಳಿಯ ದಿನ ಕಿನ್ನಿಗುರಿಯವರು ಬಂದು ಪಿಲಿಚಾಮುಂಡಿ ದೈವದ ಆವರಣ(ಅಂಗಣ)ದ ಹುಲ್ಲು ತೆಗೆದು ದೈವಸಾನದ ಮೂಲೆ ಮೂಲೆಗಳಿಗೆ ಮಾವಿನ ತುದಿ ಎಲೆ ಕಟ್ಟಿ ಬಲಿಯೇಂದ್ರನನ್ನು ಕರೆಯುವ ಬಲಕಿ ಮರವನ್ನು ನೆಟ್ಟು ಹೋಗಬೇಕು.
ಬಜಪೆಯ ನೆಲ್ಲಿದಡಿಗುತ್ತಿನವರು ಮತ್ತು ಬೊಳ್ಳೊಳ್ಳಿಮಾರಿನವರು ಒಂದೇ ಕುಟುಂಬಿಕರು. ಹಿಂದೆ ಈ ಕುಟುಂಬಿಕರಿಗೆ ವೃದ್ಧಿಕ್ಷಯ (ಆಮೆಕರ) ಇತ್ತು. ಬೊಳ್ಳೊಳ್ಳಿಮಾರಿನವರು ವರ್ಷಕ್ಕೆ ಒಮ್ಮೆ ಯಾದರು ನೆಲ್ಲಿದಡಿ ಗುತ್ತಿನ ನೀರು ಕುಡಿಯಬೇಕೆಂಬ ಕ್ರಮ ಇದೆ. ದೀಪಾವಳಿ ಹಬ್ಬದ ದಿನ ಬೊಳ್ಳೊಳ್ಳಿಮಾರಿನವರು ನೆಲ್ಲಿದಡಿ ಗುತ್ತಿಗೆ ಹೋಗದಿದ್ದರೆ ಗಟ್ಟಿ (ಅಕ್ಕಿಯ ತಿಂಡಿ) ಸರಿಯಾಗಿ ಬೇಯುತ್ತಿರಲಿಲ್ಲ. ಕಾಲ ಕ್ರಮೇಣ ಇದು ದೂರವಾಗಿದೆ.
ಹಿಂದಿನ ಕಾಲದಲ್ಲಿ ದೈವ ದೇವರು ಇರುವ ಮನೆಗಳಲ್ಲಿ ದೇವರಿಗೆ ಕುಟುಂಬದ ಪರವಾಗಿ ವರ್ಷಂಪ್ರತಿ ಹಣ ಸಂಗ್ರಹಿಸಿ ಅದನ್ನು ಡಬ್ಬಿಯಲ್ಲಿ ಹಾಕಿ ತುಂಬಿದ ನಂತರ ಕುಟುಂಬದ ಹಿರಿಯರು ಯಾವ ದೇವರಿಗೆ ಸಂದಾಯವಾಗಬೇಕು ಆ ದೇವರ ಸನ್ನಿಧಾನಕ್ಕೆ ಹೋಗಿ ಸಲ್ಲಿಸುತ್ತಿದ್ದರು. ಇದನ್ನು ಹುಂಡಿ (ಮುಡಿಪು) ಅಥವಾ ಪಣವು ಕಟ್ಟುವುದು ಎಂದು ಹೇಳುತ್ತಿದ್ದರು. ಇದನ್ನು ವರ್ಷಂಪ್ರತಿ ದೀಪಾವಳಿಯ ದಿನ ಕುಟುಂಬಿಕರು ಸೇರಿ ಕಟ್ಟುವ ಕ್ರಮ ಇದೆ. ಇಲ್ಲಿ ೨ ಹುಂಡಿಗಳಿದ್ದು, ದೊಡ್ಡ ಡಬ್ಬಿ ತಿರುಪತಿ ತಿಮ್ಮಪ್ಪನಿಗೆ, ಚಿಕ್ಕ ಡಬ್ಬಿ ಧರ್ಮಸ್ಥಳ ಮಂಜುನಾಥ ಸ್ವಾಮಿಗೆ ಸೇರಿದ್ದು.
ಪ್ರತಿ ತಿಂಗಳ ಸಂಕ್ರಮಣದಂದು ಮಾಡರು ದೈವಸಾನದ ಬಾಗಿಲು ತೆರೆದು ಸಂಕ್ರಮಣ ಕಳೆಯುತ್ತಾರೆ. ಅಲ್ಲದೆ ಪ್ರತಿ ಶ್ರಾವಣ ಮಾಸದಲ್ಲಿ (ಸೋಣ) ನಿತ್ಯವೂ ದೈವಸಾನದ ಬಾಗಿಲು ತೆಗೆದು ದೀಪ ಇಡುವ ಕ್ರಮ ಅನಾದಿ ಕಾಲದಿಂದಲೂ ಬಂದಂತಹುದು. ಪರಿವಾರ ದೈವಗಳಿಗೆ ವರ್ಷಂಪ್ರತಿ ಮಾಡುವ ತಂಬಿಲವು ಮೇ (ಬೇಷ) ತಿಂಗಳ ಸಂಕ್ರಮಣದಂದು ನಡೆಯುತ್ತದೆ. ಧೂಮವತಿಯ ಸಾನದ ಬಾಗಿಲನ್ನು ಮನೆಯ ಗಡಿಹಿಡಿದ ಯಜಮಾನ ಮಾತ್ರ ತೆರೆದು ಒಳಗೆ ಹೋಗಬಹುದು. ದೈವಗಳಿಗೆ ಮನೆಯವನೇ ಗಡಿಹಿಡಿದು ಆರಾಧನೆಗೈಯ್ದರೆ ತುಂಬಾ ತೃಪ್ತಿ. ಒಂದು ವೇಳೆ ಗಡಿ ಹಿಡಿದವರು ಇಲ್ಲದಿದ್ದರೆ, ಮುಕ್ಕಾಲ್ದಿ ಅಥವಾ ಬ್ರಾಹ್ಮಣರು ಒಳಗೆ ಹೋಗಿ ಆರಾಧನೆಗೈಯಬಹುದು. ನಮ್ಮ ಮನೆಯಲ್ಲಿ ರಾಜನ್ ದೈವಗಳಿಗೆ ಸಂಬಂಧಪಟ್ಟ ಯಾವುದೇ ಕಾರ್ಯವು ಪೆಜತ್ತಾಯರ ನೇತೃತ್ವದಲ್ಲಿಯೇ ನಡೆಯುತ್ತದೆ. ಯಾವುದೇ ಧಾರ್ಮಿಕ ಕಾರ್ಯ ನಡೆಯುವುದಾಗಿ ಮನೆತನದ ಮನೆಗಳಿಗೆ ಹಾಗೂ ಮುಕ್ಕೋಡಿ ಮನೆಗೆ ವಿಷಯ ತಿಳಿಸುವ ಕ್ರಮ ಇದೆ. ಹಾಗೆಯೇ ಉಳಿದ ಮನೆಗಳಲ್ಲೂ ಸಹ ದೈವದ ಕಾರ್ಯವಾಗುವಾಗ ಈ ಮನೆಗೂ ತಿಳಿಸುತ್ತಾರೆ. ಮನೆಯಲ್ಲಿ ಶುಭ ಕಾರ್ಯಗಳು ಹಾಗೂ ಮನೆಯವರು ಪರ ಊರಿಗೆ ಹೋಗುವಾಗ ಚಾವಡಿಯಲ್ಲಿ ದೀಪ ಉರಿಸಿ ಪ್ರಾರ್ಥಿಸುವ ಕ್ರಮ ಇಂದಿಗೂ ಇದೆ.
ನಮ್ಮ ಮನೆಯ ಒಕ್ಕೆಲ ಮೆನೆಯಲ್ಲಿ ಯಾರಿಗಾದರೂ ಮದುವೆಯಾಗುದಾದರೆ ಮದುವೆಗೆ ಮುಂಚಿನದಿನ ಮದುವೆಯ ಹುಡುಗ ಯಾ ಹುಡುಗಿ ಮನೆಯವರೊಂದಿಗೆ ಬಂದು ಕೈ ಮುಗಿದು ಹೋಗಬೇಕು. ಈ ಸಂದರ್ಭದಲ್ಲಿ ಅವರು ಹರಿವಾಣದಲ್ಲಿ ಎಲೆ ಅಡಿಕೆ ತೆಂಗಿನಕಾಯಿ ಹಾಗೂ ಮಲ್ಲಿಗೆ ಹೂ ದೈವದ ಚಾವಡಿಯ ಹೊಸ್ತಿಲಿನಲ್ಲಿ (ತಡ್ಯ) ಇಟ್ಟು ಕೈ ಮುಗಿದು ಹೋಗಬೇಕು. ಯಜಮಾನ ಮನೆ ಎನ್ನುವ ದೃಷ್ಟಿಯಿಂದ ಹೆಸರು ಬೇಳೆ ಹಾಗೂ ಬೆಲ್ಲ ಕೊಡುತ್ತಿದ್ದರು. ಯಾಕೆಂದರೆ ಮದುವೆಯ ಲೆಕ್ಕದಲ್ಲಿ ಪಾಯಸ ಮಾಡಿ ಬಾಯಿ ಸಿಹಿ ಮಾಡಲೆಂದು ಹೀಗೆ ಮಾಡುತ್ತಿದ್ದರು.
ತುಳುವಿನ ಪುಯಿಂತೆಲ್ ತಿಂಗಳ ಹುಣ್ಣಿಮೆಯಂದು ಸೋಮನಾಥ ದೇವಸ್ಥಾನದಲ್ಲಿ ಧ್ವಜಾರೋಹಣವಾಗಿ ೪ ದಿನಗಳ ವರ್ಷಾವಧಿ ಜಾತ್ರೆಯು ನಡೆಯುತ್ತದೆ. ಧ್ವಜಾರೋಹಣ ಆದ ಮೇಲೆ ದೇವರ ಕೈಯಿಂದ ಮನೆತನದ ಮನೆಗಳಿಗೆ ಪ್ರಸಾದ ಸಿಗುತ್ತದೆ. ಅದನ್ನು ಗಡಿಹಿಡಿದವರು ಪಡೆಯುತ್ತಾರೆ. ಜಾತ್ರೆಯ ದಿನವೂ ರಾತ್ರಿ ದೇವರ ಕೈಯಿಂದ ಪ್ರಸಾದ ಸಿಗುತ್ತದೆ. ದೇವಸ್ಥಾನದ ಜಾತ್ರೆಗೆ ಸ್ವಲ್ಪ ದಿನ ಮುಂಚೆ ಜಾತ್ರೆಯ ಖರ್ಚಿಗಾಗಿ ಅಕ್ಕಿ ಹಾಗೂ ತರಕಾರಿಗಳನ್ನು ಕೊಡುತ್ತಾರೆ. ಜೊತೆಗೆ ಶಕ್ತ್ಯಾನುಸಾರ ಹಣವನ್ನು ಸಂಗ್ರಹಿಸಿ ಕೊಡುತ್ತಾರೆ. ದೇವಾಲಯದಲ್ಲಿ ನಡೆಯುವ ಯಾವುದೇ ಸಭೆಗಳಿಗೆ ಈ ಮನೆಯಿಂದ ಯಾರಾದರೂ ಹಾಜರಾಗಲೇಬೇಕು.
ಬೊಳ್ಳೊಳ್ಳಿಮಾರು ಗುತ್ತಿನ ಕುಟುಂಬಿಕರ ಪರವಾಗಿ ಊರಿನ ಜಾತ್ರೆಯ ಸಂದರ್ಭದಲ್ಲಿ ಕಟೀಲು ಶ್ರೀದುರ್ಗಾ ಪರಮೇಶ್ವರಿ ಯಕ್ಷಗಾನ ಮಂಡಳಿಯವರಿಂದ ಯಕ್ಷಗಾನ ಸೇವೆಯಾಟವು ನಡೆಯುತ್ತದೆ.
ಈ ಮನೆಯಲ್ಲಿ ಕೋಳಿಯನ್ನು ಮರಿ ಮಾಡುವ ಪದ್ಧತಿ ಇಲ್ಲ. ಇದು ಮನೆಯಲ್ಲಿ ಒಳಜಗಳವಾಗುವುದನ್ನು ತಪ್ಪಿಸಲು ಮನೆಯ ಗುರಿಕಾರ ಈ ಮನೆಯಲ್ಲಿ ಕೋಳಿ ಮರಿ ಮಾಡಬಾರದೆಂದು ಹೇಳಿದ್ದರಂತೆ. ಈ ಪದ್ಧತಿಯು ಇಂದಿಗೂ ರೂಢಿಯಲ್ಲಿದೆ.
ಬೊಳ್ಳೂಳ್ಳಿ ಮಾರು ಗುತ್ತಿನಲ್ಲಿ ನಮ್ಮ ಹಿರಿಯರ ತಿಳುವಳಿಕೆಯ ಕೆಲವು ಸತ್ಯ ಘಟನೆಗಳು:-
೧. ಹಿಂದೆ ಕಂಪ ಮಾಡರ ಯಜಮಾನಿಕೆಯ ಸಂದರ್ಭದಲ್ಲಿ ಕಾಯೆರ್ ಕಟ್ಟೆಯಲ್ಲಿ ಗಡುಪಾಡಿನ ನೇಮ ಆಗುತ್ತಿರುವಾಗ ಕಡೆಗೆ ಪಿಲಿಚಾಂಡಿ ಮಾರಿ ಓಡಿಸುವ ಸಂದರ್ಭದಲ್ಲಿ ಕೋಳಿ ಕಡಿದಾದ ಮೇಲೆ ಪಿಲಿಚಾಂಡಿ "ನನಗೆ ರಕ್ತದ ಆಹಾರ ಕಡಿಮೆಯಾಯಿ"ತೆಂದು ಹೇಳಿದಾಗ ಕಂಪ ಮಾಡರ ತಮ್ಮ ದಾಸ ಶೆಟ್ಟಿ ತನ್ನ ಕೈಯನ್ನು ಕಲ್ಲಿಗೆ ಬಡಿದು ರಕ್ತವನ್ನು ಸುರಿಸಿ ಪಿಲಿಚಾಂಡಿಯತ್ರ "ನಿನಗೆ ರಕ್ತದ ಆಹಾರ ಬೇಕಾದರೆ ಸ್ವೀಕರಿಸು" ಎಂದಿದ್ದರಂತೆ.
೨. ಹಿಂದೆ ಬಜಪೆಯ ನೆಲ್ಲಿದಡಿಗುತ್ತಿನವರಿಗೂ ಬೊಳ್ಳೊಳ್ಳಿಮಾರು ಗುತ್ತಿಗೂ ಆಮೆಕರ ಇತ್ತು. ಅಂದರೆ ಎರಡು ಕಡೆಯವರು ಒಂದೇ ಕುಟುಂಬಿಕರು ಆಗಿದ್ದರು. ಆಗ ನೆಲ್ಲಿದಡಿ ಗುತ್ತಿನಲ್ಲಿ ಆಗುವ ಎಲ್ಲಾ ಪರ್ವಗಳಿಗೂ ಬೊಳ್ಳೊಳ್ಳಿಮಾರಿನವರು ಹೋಗಬೇಕಾಗಿತ್ತು. ಒಂದು ಸಲ ದೀಪಾವಳಿ ಹಬ್ಬಕ್ಕೆ ಬೊಳ್ಳೊಳ್ಳಿಮಾರಿನವರಿಗೆ ಅವರು ತಿಳಿಸಿರಲಿಲ್ಲ. ದೀಪಾವಳಿಯ ಗಟ್ಟಿ ಅಡ್ಡೆಯನ್ನು ಅಲ್ಲಿಯ ಕುಟುಂಬಿಕರು ಎಷ್ಟೇ ಬೇಯಿಸಿದರೂ ಅದು ಬೇಯಲಿಲ್ಲ ಕಡೆಗೆ ಅಲ್ಲಿಯ ಯಜಮಾನನ ಮಾತಿನಂತೆ ಆ ಮನೆಯಿಂದ ಬೊಳ್ಳೊಳ್ಳಿಮಾರಿಗೆ ಜನ ಕಳಿಸಿದರು. ಆಗ ಚಂದು ಶೆಡ್ತಿ ಅಲ್ಲಿಗೆ ಹೋಗಿ ಗಟ್ಟಿಯನ್ನು ಬೇಯಿಸಲು ಇಟ್ಟ ಪಾತ್ರೆಯ ಬಾಯಿ ತೆರೆದು ಗಟ್ಟಿಯನ್ನು ಅಡಿಮೇಲು ಮಾಡಿ ಇಟ್ಟು ಒಲೆಗೆ ಕಟ್ಟಿಗೆ ಇಟ್ಟಾಕ್ಷಣ ಗಟ್ಟಿ ಬೇಯಿತಂತೆ. ಬೊಳ್ಳೊಳ್ಳಿಮಾರಿನವರು ಅಲ್ಲಿಗೆ ಹೋಗದಿದ್ದರೆ ಗಟ್ಟಿ ಬೇಯುತ್ತಿರಲಿಲ್ಲವಂತೆ.
೩. ಪಿಲಿ ಚಾಮುಂಡಿಗೆ ಬೊಳ್ಳೊಳ್ಳಿಮಾರು ಗುತ್ತು ಅತೀ ಪ್ರಾಮುಖ್ಯವಾದ ಮನೆಯಾಗಿದೆ. ಹಿಂದೆ ಈ ಗುತ್ತಿನ ಮನೆಯ ದನವೊಂದನ್ನು ಗುಡ್ಡೆಯಲ್ಲಿ ಮೇಯಲು ಕಟ್ಟಲಾಗಿತ್ತು. ಅದನ್ನು ತಿನ್ನಲು ಹುಲಿಯೊಂದು ಓಡಿ ಬರುತ್ತಿತ್ತು. ಆ ಹೊತ್ತಿಗೆ ಕಿನ್ನಿಗುರಿಯ ಸೋಂಪಾ ತಾಳೆ ಮರದಿಂದ ಶೇಂದಿ ತೆಗೆಯಲು ಮರಕ್ಕೆ ಏರಿದ್ದ. ಅವನು ಆ ದೃಶ್ಯವನ್ನು ಕಂಡು ಜೋರಾಗಿ "ಅದು ದನ ಬೊಳ್ಳೊಳ್ಳಿಮಾರಿನದ್ದು ಅದನ್ನು ತಿನ್ನಬೇಡ" ಎಂದನಂತೆ. ಇದನ್ನು ಕೇಳಿದ ಹುಲಿ ದನವನ್ನು ಬಿಟ್ಟು ಹೋಯಿತಂತೆ.
೪. ಕುತ್ತೆತ್ತೂರು, ಸೂರಿಂಜೆ ಗ್ರಾಮದ ಮನೆತನಗಳಲ್ಲಿ, "ಜಂತಬೆಟ್ಟು ಮಿತ್ತೋಡಿ ಬಾಳಿಕೆ" ಒಂದನೆಯ ಸ್ಥಾನಮಾನದ ಮನೆ. ಜುಮಾದಿ, ಜುಮಾದಿ ಬಂಟ ಮನೆಯ ಪ್ರಧಾನ ದ್ಯೆವವಾಗಿದೆ. ಅನಾದಿಯಲ್ಲಿ ಜೈನ ಮನೆತನಕ್ಕೆ ಸೇರಿದ ಭೂಮಿ ಕಾಲ ಕ್ರಮೇಣ ಈ ಮನೆಯ ಸ್ವಾಧೀನವಾಯಿತು. ಹಿಂದೆ ಈ ಮನೆಯಲ್ಲಿ "ಪ್ರಶ್ನೆ" ಯನ್ನು ಇಟ್ಟಾಗ, ಮನೆಯ ಬಾವಿಯೊಳಗೆ ನಿಧಿ ಇದೆ ಎಂದು ತಿಳಿದು ಬಂತು. ಇದನ್ನು ಅರಿತ ಮನೆಯವರು ಕೆಲವು ಕಾಲದ ನಂತರ ಬಾವಿಯನ್ನು ಮತ್ತೆ ಅಗೆದರು. ಅಂತೆಯೆ ಇವರಿಗೆ ಬಂಗಾರದ ಮೂರ್ತಿಯೊಂದು ಸಿಕ್ಕಿತು. ಈ ಮೂರ್ತಿಯಲ್ಲಿ ದೇವತಾ ಮನೋಭಾವನೆಯನ್ನು ಕಂಡು ದೈವಸ್ಥಾನದೊಳಗಿಟ್ಟರು. ತದ ನಂತರ ಮನೆಯವರಿಗೆ ನಾನಾ ತರಹದ ಕಷ್ಟ ಕಾರ್ಪಣ್ಯಗಳು ಕಂಡು ಬಂದ ಕಾರಣ ಮನೆಯಲ್ಲಿ ಪ್ರಶ್ನೆಯನ್ನು ಇಟ್ಟರು. ಜೈನ ಮನೆತನಕ್ಕೆ ಸೇರಿದ ಮೂರ್ತಿಯೊಂದನ್ನು ದೈವಸ್ಥಾನದೊಳಗಿಟ್ಟಿರುವ ಕಾರಣ ದೈವ ಉಗ್ರರೂಪದಲ್ಲಿದ್ದಾನೆ. ಕೂಡಲೆ ಮೂರ್ತಿಯನ್ನು ತೆಗೆದು ದೈವಸ್ಥಾನವನ್ನು ಶುದ್ಧ ಮಾಡಬೇಕು. ಅದಕ್ಕಾಗಿ ಪೂರ್ವದಲ್ಲಿ ಸಾರಮಾನ್ಯ ದೈವದ ಮಣ್ಣಿಗೆ ಸಮನಾದ ಬೊಳ್ಳೊಳ್ಳಿಮಾರು ಗುತ್ತು ಎಂಬ ಮನೆಯೊಂದಿದೆ. ಆ ಮನೆಯ ಬಾವಿಯಿಂದ ನೀರನ್ನು ತಂದು ದ್ಯೆವಸ್ಥಾನಕ್ಕೆ ಸಿಂಪಡಿಸಿದರೆ ದ್ಯೆವಸ್ಥಾನವು ಶುದ್ಧವಾಗಿ ದೋಷ ಪರಿಹಾರವಾಗುವುದೆಂದು ತಿಳಿದು ಬಂತು. ಅಂತೆಯೆ ಅವರು ದೋಷ ಪರಿಹಾರಮಾಡಿಸಿದ್ದರು. ಈ ವಿಷಯವನ್ನು ಮಿತ್ತೋಡಿ ಬಾಳಕೆಯವರು ಈಗಲು ನೆನಪಿಸಿಕೊಳ್ಳುತ್ತಿದ್ದಾರೆ.
೫. ಬೊಳ್ಳೊಳ್ಳಿಮಾರುಗುತ್ತಿನ ಸಿದ್ಧಣ್ಣ ಮಾಡರು ಅವರ ತಂಗಿ ಗಿರಿಜಾಳ ಊರಾದ ಪೇಜಾವರದ ಪಡ್ಪುವಿನಲ್ಲಿ ನಡೆಯುವ ಗುಳಿಗನ ಕೋಲಕ್ಕೆ ಹೋಗಿದ್ದರು. ಅಲ್ಲಿಯ ಗುಳಿಗ ತುಂಬಾ ಕಾರ್ನಿಕದ ದೈವ ಅದು ಬಾರಣೆ (ಆಹಾರ) ಸ್ವೀಕರಿಸುತ್ತಿರುವಾಗ ಸಿದ್ಧಣ್ಣ ಮಾಡರು "ಏನು ನಿನ್ನ ಅವತಾರ ಬೇಗ ಬಾರಣೆ ಸ್ವೀಕರಿಸು" ಎಂದರಂತೆ. ಆಗ ಗುಳಿಗ ಕಣ್ಣರಳಿಸಿ ಇವರನ್ನು ನೋಡಿದಾಗ ಇವರಿಗೆ ಶರೀರದಲ್ಲಿ ಏನೋ ಸಂಕಟ ಆದ ಅನುಭವವಾಯ್ತು. ಆಗ ಅವರು ತನ್ನ ಪಂಚೆಯ ಕೊನೆಯಿಂದ ಪಿಲಿ ಚಾಮುಂಡಿಯ ಗಂಧವನ್ನು ಹಣೆಗೆ ಹಾಕಿದಾಗ ಅವರ ಸಂಕಟ ದೂರವಾಯಿತಂತೆ.
೬. ಹಿಂದೆ ಬೊಳ್ಳೊಳ್ಳಿಮಾರುಗುತ್ತಿಗೆ ಹತ್ತಿರದಲ್ಲಿದ್ದ ಕೊಡ್ಯಂಡದ ದೈವಗಳು ಅಜೀರ್ಣಾವಸ್ಥೆಯಲ್ಲಿದ್ದವು. ಅವುಗಳಿಗೆ ಸಾನವಿರಲಿಲ. ಆಗ ಬೊಳ್ಳೊಳ್ಳಿಮಾರಿನ ತಿಮ್ಮಪ್ಪ ಹೆಗಡೆಯವರು ಕೊಡ್ಯಂಡದ ಭೂಮಿಯನ್ನು ಗೇಣಿಗಾಗಿ ಸಾಗುವಳಿ ಮಾಡುತಿದ್ದರು. ಆದರೆ ಅಲ್ಲಿ ಸಾಗುವಳಿ ಮಾಡುವವರಿಗೆ ಸುಖವಿರುತ್ತಿರಲಿಲ್ಲ. ಒಂದು ಸಲ ತಿಮ್ಮಪ್ಪ ಹೆಗಡೆಯವರ ಕೋಣ ಕೊಡ್ಯಂಡದ ಗದ್ದೆಯನ್ನು ಉಳುತ್ತಿರುವಾಗ ತನ್ನಷ್ಟಕ್ಕೆ ಬಿದ್ದು ಬಿಟ್ಟಿತು. ಜ್ಯೋತಿಷ್ಯರಲ್ಲಿ ಹೋಗಿ ಕೇಳಿದಾಗ, "ಆ ಭೂಮಿಯ ದೈವಗಳಿಗೆ ಬಾಯಿಗೆ ನೀರು ಇಲ್ಲದ ಕಾರಣ ಅವು ಕೋಪದಿಂದ ಹಾಗೆ ಮಾಡಿದ್ದು, ಇನ್ನು ಮುಂದೆ ಆ ಜಾಗದ ಸಾಗುವಳಿ ಬಿಡಬೇಕು" ಎಂದು ಹೇಳಿದ್ದರು. ಅಲ್ಲಿಯ ದೈವಗಳು ತಿಮ್ಮಪ್ಪ ಹೆಗಡೆಯವರ ಒಟ್ಟಿಗೆ ಬೊಳ್ಳೊಳ್ಳಿ ಮಾರಿಗೆ ಬಂದಿದ್ದವಂತೆ, ಆದರೆ ಪಿಲಿಚಾಮುಂಡಿ ಅವುಗಳನ್ನು ಹಿಂದಕ್ಕೆ ಓಡಿಸಿದ್ದಾನೆ ಎಂದೂ ತಿಳಿದು ಬಂದಿತ್ತು.
೭. ೧೯೬೦ ರಲ್ಲಿ ಸಿದ್ದಣ್ಣ ಮಾಡರ ಯಜಮಾನಿಕೆಯ ಸಂದರ್ಭದಲ್ಲಿ ಪಂಜುರ್ಲಿ ದೈವಗಳಿಗೆ ಆಗುವ ತಂಬಿಲದ ದಿನ ನಿಗದಿಪಡಿಸುವಲ್ಲಿ ಕುಟುಂಬಿಕರ ಮಧ್ಯೆ ಭಿನ್ನಾಭಿಪ್ರಾಯ ಮೂಡಿದಾಗ ಹುಲಿಯೊಂದು ದನದ ಅರ್ಧಭಾಗವನ್ನು ಹಿಡಿದು ಪಿಲಿಚಾಮುಂಡಿ ಸಾನದ ಎದುರು ತಂದು ಇಟ್ಟು ಹೋಯಿತಂತೆ.
೮. ಇದು ೧೯೭೦ರಲ್ಲಿ ನಡೆದ ಘಟನೆ ಆ ಹೊತ್ತಿಗೆ ಬೊಳ್ಳೊಳ್ಳಿಮಾರುಗುತ್ತಿನ ಬಾವಿಗೆ ಕಟ್ಟೆ ಇರಲಿಲ್ಲ. ಮರದ ಕಂಬಗಳನ್ನು ನೆಲಕ್ಕೆ ಊರಿ ಅದಕ್ಕೆ ರಾಟೆ ಹಾಕಿ ನೀರು ಎಳೆಯುತ್ತಿದ್ದರು. ದಂಡೆ ಇಲ್ಲದ ಕಾರಣ ನೀರು ಎಳೆಯುವಾಗ ತುಂಬಾ ಜಾಗ್ರತೆವಹಿಸ ಬೇಕಾಗಿತ್ತು. ಮೇ ತಿಂಗಳಲ್ಲಿ ಬಾವಿಯಲ್ಲಿ ನೀರು ಸ್ವಲ್ಪ ಕಡಿಮೆ ಇದ್ದ ಕಾರಣ, ಮನೆಯವರು ಬೆಳಿಗ್ಗೆ ಬೇಗನೆ ಎದ್ದು ನೀರು ತುಂಬಿಸಿಡುತ್ತಿದ್ದರು. ಹೀಗೆ ಬೆಳಿಗ್ಗೆ ನೀರು ತರಲು ಹೋದಾಗ ಒಬ್ಬರು ಮಣ್ಣು ಕುಸಿದು ಬಾವಿಗೆ ಬಿದ್ದರೂ ಪುಣ್ಯವಶಾತ್ ಅವರಿಗೆ ಸ್ವಲ್ಪವೂ ಗಾಯವಾಗದೆ ಬದುಕುಳಿದರು. ಸ್ವಲ್ಪ ದಿನದ ನಂತರ ಜ್ಯೋತಿಷ್ಯರಲ್ಲಿ ಕೇಳಿದಾಗ ಹುಲಿಚಾಮುಂಡಿ ದೈವವು ಬಿದ್ದವಳನ್ನು ತನ್ನ ಕೈಗಳಿಂದ ಹಿಡಿದು ರಕ್ಷಿಸಿತೆಂದು ತಿಳಿದು ಬಂತು.
೯. ಸಂಜೀವ ಮಾಡರಿಗೆ ಗಡಿ ಹಿಡಿಯುವ ದಿನ ರಾತ್ರಿ ಅವರ ಪತ್ನಿಯನ್ನು ಕೊಳಂಬೆಯಿಂದ ಕಾರಿನಲ್ಲಿ ಕರೆದುಕೊಂಡು ಬರುವಾಗ ಒಂದು ಗಡುಪಾಡಿನ ಜಾಗವಾದ ಥ್ಯಾಕರ್ ಕಟ್ಟೆಯ ಹತ್ತಿರ ಕಾರಿನ ಚಾಲಕ ಹಿಂದೆ ಪೆರ್ಮುದೆ ಊರಿನಲ್ಲಿ ಯಾವಾಗಲೂ ಹುಲಿ ಕಾಣಿಸಿಕೊಂಡು ದೈವ ಪಿಲಿ ಚಾಮುಂಡಿಯ ಕಾರ್ನಿಕ ತೋರುತಿತ್ತಂತೆ. ಆದರೆ ಈಗ ಕಾಲ ಬದಲಾಗಿದೆ. ಈಗ ಕಾಣ ಸಿಗಲಿಕ್ಕಿಲ್ಲ ಎಂದು ಹೇಳಿದಾಕ್ಷಣ ಮಾರ್ಗದ ಮಧ್ಯದಲ್ಲಿ ೨ ಹುಲಿಗಳು ಅತ್ತ ಇತ್ತ ಹೋದವಂತೆ.
೧೦. ೧೯೯೭ ನಡೆದ ಘಟನೆ: ಆಗಿನ ಗಡಿಹಿಡಿದವರಾದ ಸಂಜೀವ ಮಾಡರು ಹೆಚ್ಚಾಗಿ ತನ್ನ ಪತ್ನಿ ಪುತ್ರರೊಡನೆ ಪತ್ನಿಯ ಊರಾದ ಕೊಳಂಬೆಯಲ್ಲಿ ಇರುತ್ತಿದ್ದರು. ಸಂಕ್ರಮಣದ ದಿನಗಳಲ್ಲಿ ಹಾಗೂ ದೈವಗಳ ಪರ್ವದಿನಗಳಲ್ಲಿ ಹಾಗೂ ನೇಮಗಳ ದಿನಗಳಲ್ಲಿ ಇಲ್ಲಿಗೆ ಬಂದು ಹೋಗುತ್ತಿದ್ದರು. ಆರೋಗ್ಯವಂತರಾದ ಅವರು ಒಮ್ಮಿಂದೊಮ್ಮೆಗೆ ಮಾನಸಿಕ ರೋಗಿಯಂತೆ ತನ್ನ ಮೈಯನ್ನು ಪರಚಿಕೊಂಡು ಏನೇನೋ ಮಾತಾಡಿ ಹುಲಿ ಕಾಣಿಸುತ್ತಿದೆ ಎಂದು ಬೊಬ್ಬೆ ಹಾಕಿದಾಗ ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತು. ನಂತರ ಜ್ಯೋತಿಷ್ಯರಲ್ಲಿ ಕೇಳಿದಾಗ "ಸಂಜೀವ ಮಾಡರು ಬೊಳ್ಳೊಳ್ಳಿಮಾರಿನಲ್ಲಿ ಹೆಚ್ಚಾಗಿ ಇರದೆ ತನ್ನ ಹೆಂಡತಿ ಮನೆಯಲ್ಲಿಯೇ ಇರುತ್ತಾರೆ. ಆದ್ದರಿಂದ ಹುಲಿ ಚಾಮುಂಡಿ ಕೋಪವಿದೆಯೆಂದು ತೋರಿ ಬಂತು.
Subscribe to:
Comments (Atom)
